ವೃದ್ಧೆಯ ಸಂಬಂಧಿಕರಿಗೆ ಸೂಚನೆ
![ವೃದ್ಧೆಯ ಸಂಬಂಧಿಕರಿಗೆ ಸೂಚನೆ ವೃದ್ಧೆಯ ಸಂಬಂಧಿಕರಿಗೆ ಸೂಚನೆ](https://www.varthabharati.in/sites/default/files/images/articles/2021/09/7/305714-1631032176.jpg)
ಉಡುಪಿ, ಸೆ.7: ಕಮಲ (60) ಎಂಬ ವೃದ್ಧೆ ಅನಾರೋಗ್ಯದಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದರೂ ಸಹ ಮನೆಗೆ ತೆರಳದೆ ಇರುವ ಕಾರಣ ಜಿಲ್ಲಾಸ್ಪತೆ ವತಿಯಿಂದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ದೂರು ದಾಖಲಾಗಿದೆ.
ದೂರಿಗೆ ಸಂಬಂಧಿಸಿದಂತೆ ಕೇಂದ್ರದ ಸಿಬ್ಬಂದಿಗಳು ವೃದ್ದೆಯನ್ನು ಭೇಟಿ ಮಾಡಿ ಮನೆಯ ಕುರಿತು ವಿಚಾರಿಸಿದಾಗ ಮನೆ, ಗಂಡ, ಮಕ್ಕಳು ಇಲ್ಲ. ಸಂಬಂಧಿಕರು ಇದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ. ಆದ್ದರಿಂದ ವೃದ್ಧೆಯ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ 0820-2526394ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story