ಮೊಡಂಕಾಪು: ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
![ಮೊಡಂಕಾಪು: ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮೊಡಂಕಾಪು: ರೋಟರಿ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ](https://www.varthabharati.in/sites/default/files/images/articles/2021/09/12/306224-1631466695.jpeg)
ಮಂಗಳೂರು : ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ನಗರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ರವಿವಾರ ನಡೆಯಿತು.
ಈ ಸಂದರ್ಭ ಮೊಡಂಕಾಪು ರೋಟರಿ ಅಧ್ಯಕ್ಷ ಇಲಿಯಾಸ್ ಸ್ಯಾಂಟಿಸ್ಟ್, ಉಪಾಧ್ಯಕ್ಷ ಪ್ರಸನ್ನ ರಾವ್, ಕಾರ್ಯದರ್ಶಿ ಪಿ.ಎ. ರಹೀಮ್, ಮಾಜಿ ರೋಟರಿ ಅಧ್ಯಕ್ಷ ನಾರಾಯಣ ಹೆಗ್ಡೆ, ಚುನಾಯಿತ ಅಧ್ಯಕ್ಷ ಪ್ರೊ. ಡಾ. ಕೆ. ಗೋವರ್ಧನ್ ರಾವ್, ಕೋಶಾಧಿಕಾರಿ ಪ್ರೀಮಾ ಫೆರ್ನಾಂಡಿಸ್ ಹಾಗೂ ಸದಸ್ಯರಾದ ವಿಕ್ಟರ್, ಯೂಸುಫ್, ಡೋನಾಲ್ಡ್ ಮತ್ತು ನಗರ ಸಭಾ ಕಾರ್ಮಿಕರು ಭಾಗವಹಿಸಿದ್ದರು.
ಪ್ರೊ. ಡಾ. ಕೆ. ಗೋವರ್ಧನ್ ರಾವ್ ಪಾನೀಯ ಹಾಗು ಪ್ರೀಮಾ ಪೆರ್ನಾಂಡಿಸ್ ಉಪಹಾರ ನೀಡಿ ಸಹಕರಿಸಿದರು.