ಮೆಸ್ಕಾಂ ಲೈನ್ಮೆನ್ ಆತ್ಮಹತ್ಯೆ
ಕೋಟ, ಸೆ.15: ಕರ್ತವ್ಯದ ಸಮಯ ಬಿದ್ದು ದೇಹದ ಸ್ವಾಧೀನ ಕಳೆದು ಕೊಂಡಿದ್ದ ಕುಂದಾಪುರ ಮೆಸ್ಕಾಂ ಕಚೇರಿಯ ಲೈನ್ಮೆನ್ ಮನೂರು ಹೆಬ್ಬಾರ್ ಕಾಲೋನಿಯ ಪ್ರವೀಣ ಕುಮಾರ್ ಟಿ.(50) ಎಂಬವರು ವೈಯಕ್ತಿಕ ಕಾರಣ ದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.14ರಂದು ಸಂಜೆ ವೇಳೆ ಮನೆಯ ಹಿಂಬದಿಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





