Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಬ್ಯಾಡ್‌ ಬ್ಯಾಂಕ್‌'ಗೆ ಕೇಂದ್ರದ 30,600...

'ಬ್ಯಾಡ್‌ ಬ್ಯಾಂಕ್‌'ಗೆ ಕೇಂದ್ರದ 30,600 ಕೋಟಿ ರೂ. ಗ್ಯಾರಂಟಿ

ಬ್ಯಾಂಕುಗಳ ಅನುತ್ಪಾದಕ ಸಾಲದ ಹೊರೆಯನ್ನು ತಗ್ಗಿಸಲು ಮಹತ್ವದ ಕ್ರಮ

ವಾರ್ತಾಭಾರತಿವಾರ್ತಾಭಾರತಿ16 Sept 2021 10:39 PM IST
share
ಬ್ಯಾಡ್‌ ಬ್ಯಾಂಕ್‌ಗೆ ಕೇಂದ್ರದ 30,600 ಕೋಟಿ ರೂ. ಗ್ಯಾರಂಟಿ

ಹೊಸದಿಲ್ಲಿ,ಸೆ.16: ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ಕೆಟ್ಟ ಸಾಲವನ್ನು ಖರೀದಿಸಲು ಬ್ಯಾಡ್‌ಬ್ಯಾಂಕ್ ಅಥವಾ ನ್ಯಾಶನಲ್ ಅಸೆಟ್ಸ್ ರಿಕನಸ್ಟ್ರಕ್ಷನ್ ಕಂಪೆನಿ (ಎನ್‌ಎಆರ್‌ಸಿಎಲ್)ಗೆ 30,600 ಕೋಟಿ ರೂ.ನೀಡುವ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆಯೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇದರಿಂದ ಬ್ಯಾಂಕ್‌ಗಳ ಲೆಕ್ಕಪತ್ರವನ್ನು ಸ್ವಚ್ಛಗೊಳಿಸಲು ಸಾಧ್ಯವಾಗಲಿದೆ ಎಂವರು ಭರವಸೆ ವ್ಯಕ್ತಪಡಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತಾವಿತ ಬ್ಯಾಡ್‌ಬ್ಯಾಂಕ್ ಅಥವಾ ಎನ್‌ಎಆರ್‌ಸಿಎಲ್, ಬ್ಯಾಂಕುಗಳ ಬ್ಯಾಲೆನ್ಸ್‌ಶೀಟ್‌ಗಳಲ್ಲಿರುವ ಕೆಟ್ಟ ಸಾಲ ಅಥವಾ ಅನುತ್ಪಾದಕ ಸಾಲಗಳನ್ನು ಏಕತ್ವಗೊಳಿಸಲಿದೆ ಮತ್ತು ಅವುಗಳನ್ನು ವೃತ್ತಿಪರ ರೀತಿಯಲ್ಲಿ ಸರಿಹೊಂದಿಸಲಿದೆ ಎಂದು ನಿರ್ಮಲಾ ತಿಳಿಸಿದರು. ಬ್ಯಾಂಕುಗಳಿಗೆ ಎನ್‌ಎಆರ್‌ಸಿಎಲ್ ಸಮ್ಮತಿಸಿದ ಸಾಲದ ವೌಲ್ಯದ ಶೇ.15ರಷ್ಟನ್ನು ನಗದು ರೂಪದಲ್ಲಿ ಹಾಗೂ ಶೇ.85ರಷ್ಟನ್ನು ಸರಕಾರದ ಖಾತರಿಯ ಭದ್ರತಾ ರಶೀದಿ (ಸೆಕ್ಯುರಿಟಿ ರಿಸಿಪ್ಟ್)ಗಳ ಮೂಲಕ ನೀಡಲಿದೆ ಎಂದವರು ಹೇಳಿದರು.

  ಕಳೆದ ಆರು ವರ್ಷಗಳಲ್ಲಿ ಬ್ಯಾಂಕುಗಳು ಮರುಪಾವತಿಯಾಗದಂತಹ 5.01 ಲಕ್ಷ ಕೋಟಿ ಸಾಲಗಳನ್ನು ವಸೂಲಿ ಮಾಡಿವೆ. ಈ ಪೈಕಿ 3.1 ಲಕ್ಷ ಕೋಟಿ ರೂ. 2018ರ ಮಾರ್ಚ್‌ನಿಂದ ವಸೂಲಾಗಿದೆಯೆಂದು ಅವರು ಹೇಳಿದರು.

ಏನಿದು ಬ್ಯಾಡ್‌ಬ್ಯಾಂಕ್

ಬ್ಯಾಂಕುಗಳಲ್ಲಿ ದೀರ್ಘಕಾಲದಿಂದ ವಸೂಲಾಗದ ಸಾಲಗಳನ್ನು ಖರೀದಿಸಿ, ಅವುಗಳ ಮರುವಸೂಲಿಗೆ ಅಥವಾ ಅರ್ಹರಿಗೆ ಮಾರಾಟ ಮಾಡಲು ಬ್ಯಾಡ್‌ಬ್ಯಾಂಕ್ ಅಥವಾ ನ್ಯಾಶನಲ್ ಅಸೆಟ್ಸ್ ರಿಕನಸ್ಟ್ರಕ್ಷನ್ ಕಂಪೆನಿ ಸ್ಥಾಪನೆಯಾಗಿದೆ. ಬ್ಯಾಂಕುಗಳಲ್ಲಿ ಸಾಲಗಾರರಿಗೆ ವಿತರಿಸಿದ ಸಾಲದ ಮರುಪಾವತಿಯ ಅವಧಿಯು ಮುಕ್ತಾಯಗೊಂಡು ಅದು 90 ದಿನವನನು ಮೀರಿದ್ದರೆ ಅದನ್ನು ನಾನ್‌ಫರ್‌ಫಾರ್ಮಿಂಗ್ ಅಸೆಟ್ಸ್ ಅಥವಾ ಅನುತ್ಪಾದಕ ಸಾಲ ಎಂದು ಕರೆಯಲಾಗುತ್ತದೆ.

ಪಾವತಿಯಾದ ಸಾಲದಿಂದ ಅನುತ್ಪಾದಕ ಸಾಲವನ್ನು ಪ್ರತ್ಯೇಕಗೊಳಿಸುವ ಉದ್ದೇಶದಿಂದ ಬ್ಯಾಡ್ ಬ್ಯಾಂಕ್ ಸ್ಥಾಪನೆಯಾಗಿದೆ. ಈ ರೀತಿಯಾಗಿ ಪ್ರತ್ಯೇಕಿಸಲಾದ ಅನುತ್ಪಾದಕ ಸಾಲಗಳನ್ನು ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಿಂದ ತೆಗೆದುಹಾಕಲಾಗುತ್ತದೆ. ಇದೇ ವೇಳೆ ಬ್ಯಾಡ್‌ಬ್ಯಾಂಕ್, ಅನುತ್ಪಾದಕ ಸಾಲಗಳನ್ನು ತನಗೆ ವರ್ಗಾಯಿಸಿಕೊಳ್ಳುತ್ತದೆ ಹಾಗೂ ನಿರ್ದಿಷ್ಟ ಅವಧಿಯೊಳಗೆ ಅದನ್ನು ಲಿಕ್ವಿಡೇಟ್ ಮಾಡುತ್ತದೆ.

ಸರಳವಾಗಿ ಹೇಳುವುದಾದರೆ ಬ್ಯಾಡ್ ಬ್ಯಾಂಕ್ ಮರುಪಾವತಿಯಾಗದ ಸಾಲದ ಹೊರೆಯನ್ನು ದರಕಡಿತದೊಂದಿಗೆ ಖರೀದಿಸುತ್ತದೆ. ಉದಾಹರಣೆಗೆ 100 ಮರುಪಾವತಿಯಾಗದ ಸಾಲವಿದ್ದರೆ, ಬ್ಯಾಡ್‌ಬ್ಯಾಂಕ್ ಆ ಸಾಲವನ್ನು 70 ರೂ.ಗೆ ಖರೀದಿಸುತ್ತದೆ. ಈ ಸಾಲವನ್ನು ಬ್ಯಾಡ್ ಬ್ಯಾಂಕ್ ಇತರ ಕಂಪೆನಿಗಳಿಗೆ ನೀಡುತ್ತದೆ. ಹೀಗೆ 100 ರೂ. ವೌಲ್ಯದ ಆಸ್ತಿಯು , 75 ರೂ.ಗೆ ಖರೀದಿಸಲ್ಪಡುತ್ತದೆ.

ಕೇಂದ್ರ ಸರಕಾರದ ಬ್ಯಾಡ್‌ಬ್ಯಾಂಕ್ ಯೋಜನೆಯಿಂದಾಗಿ ಕುಂಠಿತವಾಗಿ ಸಾಗುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ವಸೂಲಾಗದ ಸಾಲವು ಬ್ಯಾಂಕ್‌ಗಳ ನಿರ್ವಹಣೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X