Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿಗೆ ಬಂತು ಬೆಂಟ್ಲಿ ಬೆಂಟಾಯ್ಗ ವಿ8...

ಮಂಗಳೂರಿಗೆ ಬಂತು ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್ ಯು ವಿ

ವಾರ್ತಾಭಾರತಿವಾರ್ತಾಭಾರತಿ20 Sept 2021 10:10 PM IST
share
ಮಂಗಳೂರಿಗೆ ಬಂತು ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್ ಯು ವಿ

ಮಂಗಳೂರು : ವಿಶ್ವದ ಅತ್ಯಂತ ದುಬಾರಿ, ವಿಲಾಸಿ ಕಾರುಗಳಲ್ಲಿ ಒಂದೆಂಬ ಖ್ಯಾತಿಯ ಬೆಂಟ್ಲಿ ಬ್ರ್ಯಾಂಡ್ ನ ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್ ಯು ವಿ ಕಾರು ಮಂಗಳೂರಿಗೆ ಬಂದಿದೆ.

ನಗರದ ಖ್ಯಾತ ಬಿಲ್ಡರ್, ರೋಹನ್ ಕಾರ್ಪೊರೇಷನ್ ಮಾಲಕ ರೋಹನ್ ಮೊಂತೇರೊ ಅವರು ಈ ಎಸ್ ಯು ವಿ (ಸ್ಪೋರ್ಟ್ ಯುಟಿಲಿಟಿ ವೆಹಿಕಲ್)  ಕಾರು ಖರೀದಿಸಿದ್ದಾರೆ.  ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಈ ಮಾದರಿಯಲ್ಲಿ ಅತ್ಯಂತ ಹೊಸ, ಎಕ್ಸ್ ಕ್ಲ್ಯೂಸಿವ್  ಮಾಡೆಲ್ ಆಗಿದ್ದು ಕರ್ನಾಟಕದಲ್ಲಿ ಇದರ ಪ್ರಪ್ರಥಮ ಕಾರು ರೋಹನ್ ಖರೀದಿಸಿದ್ದಾರೆ. ಕಾರಿನ ಬೆಲೆ ಸುಮಾರು 6.5 ಕೋಟಿ ರೂಪಾಯಿ.

ಇಂಗ್ಲೆಂಡ್ ನ  ಬೆಂಟ್ಲಿ ಮೋಟರ್ಸ್ ನ ಕಾರುಗಳು ವಿಲಾಸಿ ಕಾರುಗಳಲ್ಲೇ ಅತ್ಯಂತ ದುಬಾರಿ ಹಾಗು ಅಷ್ಟೇ ಪ್ರತಿಷ್ಠಿತ ಎಂದು ಹೆಸರು ಮಾಡಿವೆ. ವಿಶ್ವಾದ್ಯಂತ ರಾಜ ಮನೆತನದವರು, ಬೃಹತ್ ಉದ್ಯಮಪತಿಗಳು, ಪ್ರಭಾವಿ ಹುದ್ದೆಗಳಲ್ಲಿರುವ ರಾಜಕಾರಣಿಗಳು ಮಾತ್ರ ಈ ಕಾರು ಬಳಸುತ್ತಾರೆ. ಈ ಹ್ಯಾಂಡ್ ಬಿಲ್ಟ್ ( ಮಾನವ ನಿರ್ಮಿತ) ಅಲ್ಟ್ರಾ ಲಕ್ಸುರಿ ಕಾರುಗಳ ಪ್ರತಿಯೊಂದು ಭಾಗ, ಬಣ್ಣ ಇತ್ಯಾದಿಗಳನ್ನು ಅದನ್ನು ಖರೀದಿಸುವವರ ಅಭಿರುಚಿ ಹಾಗು ಬಯಕೆಗೆ ತಕ್ಕಂತೆ ವಿನ್ಯಾಸ ಮಾಡಿ ಕೊಡುವುದು ಇದರ ವಿಶೇಷತೆ. ಒಳಗೆ ಅತ್ಯಂತ ಆರಾಮದಾಯಕ, ಹಿತಕರ ಪ್ರಯಾಣದ ಅನುಭವ ನೀಡುವ ಈ ಕಾರುಗಳು ಅಷ್ಟೇ ಆಕರ್ಷಕ, ವಿಶಿಷ್ಟ ಒಳಾಂಗಣ ಹಾಗು ಹೊರಾಂಗಣ ವಿನ್ಯಾಸ, ಭರ್ಜರಿ ಸಾಮರ್ಥ್ಯದ ಇಂಜಿನ್,  ಬೇರೆಲ್ಲೂ ಸಿಗದ ವಿಶೇಷ ಇತರ ಸೌಲಭ್ಯ ಹಾಗು ಫೀಚರ್ ಗಳಿಗಾಗಿ ಖ್ಯಾತಿ ಪಡೆದಿವೆ.

"ಕಾರು ಬಂದು ಮೂರ್ನಾಲ್ಕು ದಿನಗಳಾಗಿವೆ. ಬಹಳ ಚೆನ್ನಾಗಿದೆ. ಚಲಾಯಿಸಲು ಬಹಳ ಖುಷಿಯಾಗುತ್ತದೆ" ಎಂದು ರೋಹನ್ ಮೊಂತೇರೊ ವಾರ್ತಾಭಾರತಿಗೆ ತಿಳಿಸಿದ್ದಾರೆ.  ಬೆಂಟ್ಲಿ ಬೆಂಟಾಯ್ಗ ವಿ8 ಎಸ್ ಯು ವಿ ಸೊನ್ನೆಯಿಂದ 100 ಕಿಮೀ ವೇಗ ತಲುಪಲು ಕೇವಲ  4.5 ಸೆಕೆಂಡುಗಳು ಸಾಕು. ಹಾಗೆಯೇ ಗಂಟೆಗೆ ಗರಿಷ್ಟ 290 ಕಿಮೀ ವೇಗದಲ್ಲಿ ಹೋಗಬಲ್ಲದು.

ರೋಹನ್ ಮೊಂತೇರೊ ಮಾಲಕತ್ವದ ರೋಹನ್ ಕಾರ್ಪೊರೇಷನ್ (ಈ ಹಿಂದೆ ಪ್ರಾಪರ್ಟಿ ಇನ್ಫ್ರಾಟೆಕ್ ) ಹಲವಾರು ವಸತಿ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X