Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಯೆಮೆನ್ ನಲ್ಲಿ 1.6 ಕೋಟಿ ಜನತೆಗೆ ಆಹಾರದ...

ಯೆಮೆನ್ ನಲ್ಲಿ 1.6 ಕೋಟಿ ಜನತೆಗೆ ಆಹಾರದ ಕೊರತೆ; ವಿಶ್ವಸಂಸ್ಥೆ ವರದಿ

ವಾರ್ತಾಭಾರತಿವಾರ್ತಾಭಾರತಿ23 Sept 2021 11:15 PM IST
share
ಯೆಮೆನ್ ನಲ್ಲಿ 1.6 ಕೋಟಿ ಜನತೆಗೆ ಆಹಾರದ ಕೊರತೆ; ವಿಶ್ವಸಂಸ್ಥೆ ವರದಿ

ವಾಷಿಂಗ್ಟನ್, ಸೆ.23: ಯುದ್ಧದಿಂದ ಜರ್ಝರಿತವಾಗಿರುವ ಯೆಮನ್ನಲ್ಲಿ 1.6 ಕೋಟಿ ಜನತೆ ಆಹಾರದ ಕೊರತೆಯಿಂದ ಉಪವಾಸ ಬೀಳುವ ಪರಿಸ್ಥಿತಿಯಿದ್ದು, ಹೊಸ ದೇಣಿಗೆದಾರರ ನೆರವು ಲಭಿಸದಿದ್ದರೆ ಅಲ್ಲಿನ ಮಿಲಿಯಾಂತರ ಜನರಿಗೆ ಒದಗಿಸಲಾಗುವ ಪಡಿತರ ಆಹಾರ ಅಕ್ಟೋಬರ್ನಿಂದ ಸ್ಥಗಿತಗೊಳ್ಳಲಿದೆ ಎಂದು ವಿಶ್ವಸಂಸ್ಥೆ ಆಹಾರ ವಿಭಾಗದ ಮುಖ್ಯಸ್ಥ ಡೇವಿಡ್ ಬೀಸ್ಲೆ ಎಚ್ಚರಿಸಿದ್ದಾರೆ. 

ಯೆಮನ್ನ ಮಾನವೀಯ ಬಿಕ್ಕಟ್ಟಿನ ವಿಷಯಕ್ಕೆ ಸಂಬಂಧಿಸಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಬೀಸ್ಲೆ, ಈ ವರ್ಷದ ಆರಂಭದಲ್ಲಿ ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ)ಗೆ ಹಣದ ಕೊರತೆ ಎದುರಾಗಿದ್ದಾಗ ಅಮೆರಿಕ, ಜರ್ಮನಿ, ಯುಎಇ, ಸೌದಿ ಅರೆಬಿಯಾ ಮತ್ತಿತರ ದೇಣಿಗೆದಾರರು ಕೊಡುಗೆ ನೀಡಿದ್ದರಿಂದ ನಮಗೆ ಬರಗಾಲ ಮತ್ತಿತರ ದುರಂತವನ್ನು ತಪ್ಪಿಸಲು ಸಾಧ್ಯವಾಗಿದೆ. ಈ ದೇಣಿಗೆ ಹಣ ಕಾಲಿಯಾಗುತ್ತಿದೆ. ಹೊಸ ದೇಣಿಗೆ ಲಭಿಸದಿದ್ದರೆ ಅಕ್ಟೋಬರ್ನಲ್ಲಿ 3.2 ಮಿಲಿಯ ಜನತೆಯ ಪಡಿತರದಲ್ಲಿ ಕಡಿತ ಮತ್ತು ಡಿಸೆಂಬರ್ನಲ್ಲಿ 5 ಮಿಲಿಯನ್ ಜನತೆಯ ಪಡಿತರ ಕಡಿತ ಮಾಡಬೇಕಾಗುತ್ತದೆ ಎಂದರು. 

ವಿಶ್ವಸಂಸ್ಥೆಯ ಮಹಾ ಅಧಿವೇಶನದ ನೇಪಥ್ಯದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಸುಮಾರು 600 ಮಿಲಿಯ ಡಾಲರ್ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಇನ್ನೂ ಕನಿಷ್ಟ 1 ಬಿಲಿಯನ್ ಡಾಲರ್ ನೆರವಿನ ಕೊರತೆಯಿದೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೆಚ್ಚುವರಿ 290 ಮಿಲಿಯನ್ ಡಾಲರ್ ಮಾನವೀಯ ನೆರವಿನ ಭರವಸೆ ನೀಡಿದ್ದರೆ, ಯುರೋಪಿಯನ್ ಯೂನಿಯನ್ ಸುಮಾರು 139 ಮಿಲಿಯನ್ ನೆರವಿನ ಭರವಸೆ ನೀಡಿದೆ. ದೇಣಿಗೆದಾರರನ್ನು ಅಭಿನಂದಿಸಿರುವ ಆಕ್ಸಂ ಚಾರಿಟಿ(ಆಕ್ಸ್ಫರ್ಡ್ ಕಮಿಟಿ ಫಾರ್ ಫೆಮಿನ್ ರಿಲೀಫ್)ಯ ನಿರ್ದೇಶಕ ಮುಹ್ಸಿನ್ ಸಿದ್ದಿಕ್, ಈ ನೆರವು ಶೀಘ್ರ ದೊರಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

2014ರಲ್ಲಿ ಹೌದಿ ಬಂಡುಕೋರರು ಸನಾ ಪಟ್ಟಣ ಸಹಿತ ದೇಶದ ಉತ್ತರದಲ್ಲಿರುವ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಯೆಮನ್ನಲ್ಲಿ ಅಂತರ್ಯುದ್ಧ ಆರಂಭವಾಗಿತ್ತು ಮತ್ತು ಅಧ್ಯಕ್ಷ ಮನ್ಸೂರ್ ಹದಿ ಸೌದಿ ಅರೆಬಿಯಾಕ್ಕೆ ಪಲಾಯನ ಮಾಡಿದ್ದರು. ಸರಕಾರದ ಮರುಸ್ಥಾಪನೆಗಾಗಿ ಸೌದಿ ಅರೆಬಿಯಾ ನೇತೃತ್ವದ ಮತ್ತು ಅಮೆರಿಕ ಬೆಂಬಲಿತ ಮೈತ್ರಿಪಡೆಯ ಸೇನಾ ಕಾರ್ಯಾಚರಣೆ 2015ರ ಮಾರ್ಚ್ನಲ್ಲಿ ಆರಂಭವಾದಂದಿನಿಂದ ಸಂಘರ್ಷ ಮುಂದುವರಿದು ಯೆಮನ್ನಲ್ಲಿ ತೀವ್ರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. 

‘ಈ ಯುದ್ಧವನ್ನು ಅಂತ್ಯಗೊಳಿಸಬೇಕಾಗಿದೆ. ಮತ್ತು ಒಂದು ವೇಳೆ ದೇಣಿಗೆದಾರರು ಬಳಲಿದರೆ(ದೇಣಿಗೆ ನಿಲ್ಲಿಸಿದರೆ) ಯುದ್ಧ ಮುಗಿಸುವುದೇ ಒಳ್ಳೆಯದು’ ಎಂದು ಡೇವಿಡ್ ಬೀಸ್ಲೆ ಹೇಳಿದ್ದಾರೆ. ಯೆಮನ್ ಜನರ ಕಷ್ಟಗಳನ್ನು ಅಂತ್ಯಗೊಳಿಸಲು ವಿಶ್ವದ ಮುಖಂಡರು ಸಂಬಂಧಿತ ಎಲ್ಲ ಪಕ್ಷದವರ ಮೇಲೂ ಒತ್ತಡ ಹೇರಬೇಕಿದೆ. ಕರೆನ್ಸಿಯ ಅಪಮೌಲ್ಯ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನತೆ ಕಂಗಾಲಾಗಿದ್ದು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಅವರ ಬಳಿ ಏನೂ ಇಲ್ಲ. ನಿಜವಾಗಿಯೂ ಹೃದಯವಿದ್ರಾವಕ ಪರಿಸ್ಥಿತಿ ಇದು ಎಂದವರು ಹೇಳಿದ್ದಾರೆ. 

ಯೆಮನ್ನ 11.3 ಮಕ್ಕಳು ಬದುಕುಳಿಯಬೇಕಿದ್ದರೆ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ನ ಮುಖ್ಯಸ್ಥೆ ಹೆನ್ರೀಟಾ ಫ್ರೋಹೇಳಿದ್ದಾರೆ. 5 ವರ್ಷದೊಳಗಿನ 2.3 ಮಿಲಿಯನ್ ಮಕ್ಕಳು ತೀವ್ರ ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದರೆ ಇವರಲ್ಲಿ ಸುಮಾರು 4 ಲಕ್ಷ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಯಿಂದ ಸಾಯುವ ಸ್ಥಿತಿಯಲ್ಲಿದ್ದಾರೆ . ಅಪೌಷ್ಟಿಕತೆ ಮತ್ತು ಲಸಿಕೆ ಪಡೆದರೆ ತಡೆಗಟ್ಟಬಹುದಾದ ಕಾಯಿಲೆಗಳಿಂದಾಗಿ ಯೆಮನ್ನಲ್ಲಿ ಪ್ರತೀ 10 ನಿಮಿಷಕ್ಕೆ ಒಂದು ಮಗು ಸಾವನ್ನಪ್ಪುತ್ತಿದೆ ಎಂದವರು ಹೇಳಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X