Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ಸೆಂಟ್ರಲ್, ಜಂಕ್ಷನ್‌ನಲ್ಲಿ...

ಮಂಗಳೂರು ಸೆಂಟ್ರಲ್, ಜಂಕ್ಷನ್‌ನಲ್ಲಿ ರೈಲು ಸಮಯ ಬದಲಾವಣೆ

ವಾರ್ತಾಭಾರತಿವಾರ್ತಾಭಾರತಿ29 Sept 2021 8:19 PM IST
share
ಮಂಗಳೂರು ಸೆಂಟ್ರಲ್, ಜಂಕ್ಷನ್‌ನಲ್ಲಿ ರೈಲು ಸಮಯ ಬದಲಾವಣೆ

ಮಂಗಳೂರು, ಸೆ.29: ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ವಿವಿಧ ರೈಲುಗಳ ಆಗಮನ ಹಾಗೂ ನಿರ್ಗಮನದಲ್ಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಈ ಆದೇಶ ಬಹುತೇಕ ಅ.1ರಿಂದಲೇ ಅನ್ವಯವಾಗಲಿದೆ.

ಮಂಗಳೂರು ಜಂಕ್ಷನ್: ಯಶವಂತಪುರ- ಮಂಗಳೂರು ಜಂಕ್ಷನ್ ವೀಕ್ಲಿ ಸ್ಪೇಷಲ್ ರೈಲು (06539) ಪ್ರತಿ ಶನಿವಾರ ಓಡಾಟ ನಡೆಸಲಿದೆ. ಮಂಗಳೂರು ಜಂಕ್ಷನ್‌ಗೆ ಸಂಜೆ 5 ಗಂಟೆಗೆ ಆಗಮಿಸುತ್ತಿದ್ದ ರೈಲು ಸಂಜೆ 4:40ಕ್ಕೆ ಪರಿಷ್ಕರಣೆ ಮಾಡಲಾಗಿದೆ. ರೈಲು ನಿಗದಿತ ಸಮಯಕ್ಕಿಂತ 20 ನಿಮಿಷ ಮೊದಲೇ ಜಂಕ್ಷನ್‌ನ್ನು ತಲುಪಲಿದೆ. ಇದು ಅ.2ರಿಂದ ಅನ್ವಯವಾಗಲಿದೆ.

ಯಶವಂತಪುರ- ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಸ್ಪೇಷಲ್ ರೈಲು (06575) ಸೋಮವಾರ, ಬುಧವಾರ, ಶುಕ್ರವಾರ ಸಂಚರಿಸಲಿದೆ. ರೈಲು ಆಗಮನದ ವೇಳೆಯನ್ನು ಸಂಜೆ 5 ಗಂಟೆಯ ಬದಲಾಗಿ 4:40ಕ್ಕೆ ಸಮಯ ಪರಿಷ್ಕೃತಗೊಳಿಸಲಾಗಿದೆ. ಇದು ಅ.3ರಿಂದ ಅನ್ವಯವಾಗಲಿದೆ.

ಯಶವಂತಪುರ- ಕಾರವಾರ ಟ್ರೈ-ವೀಕ್ಲಿ ಸ್ಪೇಷಲ್ ರೈಲು (06211) ಸೋಮವಾರ, ಬುಧವಾರ, ಶುಕ್ರವಾರ ಸಂಚಾರ ನಡೆಸಲಿದೆ. ನಿಲ್ದಾಣಕ್ಕೆ ಸಂಜೆ 5 ಗಂಟೆಗೆ ಆಗಮಿಸುತ್ತಿದ್ದ ಈ ರೈಲು ಸಮಯ ಪರಿಷ್ಕರಣೆಗೊಂಡು ಸಂಜೆ 4:40ಕ್ಕೆ ಆಗಮಿಸಲಿದೆ. ಸಂಜೆ 5:20ಕ್ಕೆ ನಿರ್ಗಮಿಸಲಿದ್ದ ಈ ರೈಲು ಸಂಜೆ 5 ಗಂಟೆಗೆ ಇಲ್ಲಿಂದ ಪ್ರಯಾಣ ಬೆಳೆಸಲಿದೆ. ನಿಗದಿತ ಸಮಯಕ್ಕಿಂತ 20 ನಿಮಿಷ ಮೊದಲೇ ಈ ರೈಲು ನಿರ್ಗಮಿಸಲಿದೆ. ಇದು ಅ.1ರಿಂದ ಅನ್ವಯವಾಗಲಿದೆ.

ಬೆಂಗಳೂರು-ಕಣ್ಣೂರು ಸ್ಪೇಷಲ್ ರೈಲು (06515) ಮಂಗಳೂರು ಜಂಕ್ಷನ್ ಮೂಲಕ ಪ್ರತಿದಿನ ಓಡಾಟ ನಡೆಸಲಿದೆ. ಜಂಕ್ಷನ್‌ಗೆ ಬೆಳಗ್ಗೆ 7:18ಕ್ಕೆ ಆಗಮಿಸಲಿದ್ದ ರೈಲು, 7:28ಕ್ಕೆ ಸಮಯ ಬದಲಾಯಿಸಲಾಗಿದೆ. ಇಲ್ಲಿಂದ ಬೆಳಗ್ಗೆ 7:20ಕ್ಕೆ ನಿರ್ಗಮಿಸುತ್ತಿದ್ದ ರೈಲು 7:30ಕ್ಕೆ ಪ್ರಯಾಣ ಆರಂಭಿಸಲಿದೆ. ಇದು ಅ.1ರಿಂದ ಅನ್ವಯವಾಗಲಿದೆ.

ಕಣ್ಣೂರು-ಬೆಂಗಳೂರು ಸ್ಪೇಷಲ್ ರೈಲು (06516) ಪ್ರತಿದಿನವೂ ಸಂಚರಿಸಲಿದೆ. ರಾತ್ರಿ 8:15ಕ್ಕೆ ಬರುತ್ತಿದ್ದ ರೈಲು ರಾತ್ರಿ 8:25ಕ್ಕೆ ಆಗಮಿಸಲಿದೆ. ರಾತ್ರಿ 8:17ಕ್ಕೆ ತೆರಳಬೇಕಿದ್ದ ಈ ರೈಲು 8:27ಕ್ಕೆ ಪ್ರಯಾಣ ಶುರು ಮಾಡಲಿದೆ. ಇದು ಅ.1ರಿಂದ ಅನ್ವಯವಾಗಲಿದೆ.

ಮಂಗಳೂರು ಸೆಂಟ್ರಲ್: ಬೆಂಗಳೂರು- ಮಂಗಳೂರು ಸೆಂಟ್ರಲ್ ಟ್ರೈ-ವೀಕ್ಲಿ ಸ್ಪೇಷಲ್ ರೈಲು (06531) ಮಂಗಳವಾರ, ಗುರುವಾರ, ರವಿವಾರ ಸಂಚರಿಸಲಿದೆ. ಬೆಳಗ್ಗೆ 9:10ಕ್ಕೆ ಆಗಮಿಸಲಿದ್ದ ರೈಲು ಬೆಳಗ್ಗೆ 9:05ಕ್ಕೆ ಆಗಮಲಿಸಲಿದೆ. ಇದು ಅ.2ರಿಂದ ಅನ್ವಯವಾಗಲಿದೆ.

ತಿರುವನಂತಪುರಂ- ಮಂಗಳೂರು ಸೆಂಟ್ರಲ್ ಡೈಲಿ ರೈಲು (06347) ಪ್ರತಿದಿನವೂ ಓಡಾಟ ನಡೆಸಲಿದೆ. ಬೆಳಗ್ಗೆ 11:35ಕ್ಕೆ ಆಗಮಿಸುತ್ತಿದ್ದ ರೈಲು ಬೆಳಗ್ಗೆ 11:30ಕ್ಕೆ ಆಗಮಿಸಲಿದೆ. ಇದು ಕೂಡ ಅ.1ರಿಂದ ಅನ್ವಯವಾಗಲಿದೆ.

ಕೊಯಂಬತ್ತೂರ್- ಮಂಗಳೂರು ಸೆಂಟ್ರಲ್ ಸ್ಪೇಷಲ್ ರೈಲು (06323) ಪ್ರತಿದಿನ ಓಡಾಟ ನಡೆಸಲಿದೆ. ಸಂಜೆ 6:50ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಟ್ರೈನ್ ಸಂಜೆ 6:40ಕ್ಕೆ ಆಗಮಿಸಲಿದೆ. ಇದು ಆ.1ರಿಂದ ಅನ್ವಯವಾಗಲಿದೆ.

ಕಣ್ಣೂರು- ಬೆಂಗಳೂರು ಸ್ಪೇಷಲ್ ರೈಲು (06516) ಪ್ರತಿದಿನ ಓಡಾಟ ನಡೆಸಲಿದೆ. ರಾತ್ರಿ 7:40ಕ್ಕೆ ನಿಲ್ದಾಣ ಪ್ರವೇಶಿಸುತ್ತಿದ್ದ ಈ ರೈಲು 7:50ಕ್ಕೆ ಆಗಮಿಸಲಿದೆ. ರಾತ್ರಿ 8 ಗಂಟೆಗೆ ತೆರಳಬೇಕಿದ್ದ ರೈಲು ರಾತ್ರಿ 8:10ಕ್ಕೆ ಪ್ರಯಾಣ ಬೆಳೆಸಲಿದೆ. ಇದು ಅ.1ರಿಂದ ಅನ್ವಯವಾಗಲಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X