Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. "ಇವರಿಂದ ಪತ್ರಕರ್ತರಿಗೆ ಕೆಟ್ಟ ಹೆಸರು":...

"ಇವರಿಂದ ಪತ್ರಕರ್ತರಿಗೆ ಕೆಟ್ಟ ಹೆಸರು": ಭಾರತದ‌ ಪ್ರಮುಖ ಮಾಧ್ಯಮಗಳ ಬಗ್ಗೆ ಫ್ರಾನ್ಸ್‌ 24 ಚಾನೆಲ್‌ ಫ್ಯಾಕ್ಟ್‌ ಚೆಕ್

ವಾರ್ತಾಭಾರತಿವಾರ್ತಾಭಾರತಿ2 Oct 2021 11:49 AM IST
share
ಇವರಿಂದ ಪತ್ರಕರ್ತರಿಗೆ ಕೆಟ್ಟ ಹೆಸರು: ಭಾರತದ‌ ಪ್ರಮುಖ ಮಾಧ್ಯಮಗಳ ಬಗ್ಗೆ ಫ್ರಾನ್ಸ್‌ 24 ಚಾನೆಲ್‌ ಫ್ಯಾಕ್ಟ್‌ ಚೆಕ್

ಹೊಸದಿಲ್ಲಿ: ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಸಂಪೂರ್ಣ ಹಿಡಿತ ಸಾಧಿಸಿದ ನಂತರ ಅಲ್ಲಿನ ಬಿಕ್ಕಟ್ಟಿನ ಸ್ಥಿತಿ ಕುರಿತು ಕೆಲ ಭಾರತೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳು "ತಪ್ಪು ಮಾಹಿತಿಗಳಿಂದ ತುಂಬಿವೆ" ಹಾಗೂ "ಸಂಪೂರ್ಣವಾಗಿ ಕೆಟ್ಟ ವಿಷಯ" ಎಂದು  ಫ್ರಾನ್ಸ್ ದೇಶದ ಫ್ರಾನ್ಸ್24 ಇಂಗ್ಲಿಷ್ ಸುದ್ದಿ ವಾಹಿನಿ ಬಣ್ಣಿಸಿದೆ.

ಕಳೆದ ವಾರ ಪ್ರಸಾರವಾದ ಈ ವಾಹಿನಿಯ ದೈನಂದಿನ ಫ್ಯಾಕ್ಟ್-ಚೆಕ್ ಕಾರ್ಯಕ್ರಮದಲ್ಲಿ ನಿರೂಪಕ ಜೇಮ್ಸ್ ಕ್ರೀಡನ್ ಅವರು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ  ಭಾರತದ ಮುಖ್ಯವಾಹಿನಿ ಮಾದ್ಯಮದ ಎರಡು ನಿರ್ದಶನಗಳನ್ನು ಎತ್ತಿ ತೋರಿಸಿದ್ದಾರೆ. "ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಹಿಡಿತ ಸಾಧಿಸಿದ ನಂತರ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ತಪ್ಪು ಮಾಹಿತಿಗಳಿಂದ ತುಂಬಿವೆ" ಎಂದು ಫ್ರಾನ್ಸ್24 ಬಣ್ಣಿಸಿದೆ.

ಈ ವಾಹಿನಿ ನೀಡಿದ ಮೊದಲ ನಿರ್ದಶನ ಇಂಡಿಯಾ ಟುಡೇ ಮತ್ತು ಆಜ್ ತಕ್ ಚಾನಲ್‍ಗಳಿಗೆ ಸಂಬಂಧಿಸಿದ್ದಾಗಿತ್ತು. ಈ ತಿಂಗಳು ಪ್ರಸಾರ ಮಾಡಿದ ಸುದ್ದಿಯಲ್ಲಿ ಅಫ್ಗಾನಿಸ್ತಾನದಲ್ಲಿ ಪ್ರತಿರೋಧ ತೋರಿಸುತ್ತಿರುವ ಅಹ್ಮದ್ ಮಸ್ಸೌದ್ ನೇತೃತ್ವದ ಪಡೆಗಳು ಪಾಕಿಸ್ತಾನಿ ಜೆಟ್ ಒಂದನ್ನು ಹೇಗೆ ಹೊಡೆದುರುಳಿಸಿವೆ ಎಂದು ಚಾನಲ್‍ಗಳು ವಿವರಿಸಿದ್ದವು. ಮಸ್ಸೌದ್‍ಗೆ ಸೇರಿದ್ದೆನ್ನಲಾದ ಟ್ವಿಟ್ಟರ್ ಖಾತೆಯೊಂದನ್ನು ಉಲ್ಲೇಖಿಸಿ ಎರಡೂ ಚಾನಲ್‍ಗಳು ಸುದ್ದಿ ಪ್ರಸಾರ ಮಾಡಿದ್ದವು ಆದರೆ ನಂತರ ಈ ಸುದ್ದಿ ನಕಲಿ ಎಂದು ತಿಳಿದು ಬಂದಿತ್ತು.

"ಭಾರತೀಯ ವಾಹಿನಿಗಳು ಈ ಸುದ್ದಿಯನ್ನು ದೊಡ್ಡದೆಂಬಂತೆ ಬಿಂಬಿಸಿದ್ದವು, ಟ್ವಿಟ್ಟರ್ ಪೋಸ್ಟ್ ಒಂದನ್ನು ನಂಬಿ ಈ ರೀತಿ ಮಾಡುವುದು  ಸರಿಯಲ್ಲ ಎಂದು ತೋರುತ್ತದೆ ಅಲ್ಲವೇ?" ಎಂದು ಫ್ರಾನ್ಸ್24 ನಿರೂಪಕರು ಪ್ರಶ್ನಿಸಿದ್ದಾರೆ.

ಆ ಚಾನಲ್ ನೀಡಿದ ಇನ್ನೊಂದು ನಿದರ್ಶನ ರಿಪಬ್ಲಿಕ್ ವರ್ಲ್ಡ್, ಟಿವಿ9ಭಾರತ್‍ವರ್ಷ್ ಮತ್ತು ಝೀ ಹಿಂದುಸ್ತಾನ್  ಪ್ರಸಾರ ಮಾಡಿದ ಹಾಗೂ ಅಫ್ಗಾನಿಸ್ತಾನದ ಪಂಜ್‍ಶಿರ್ ಎಂಬಲ್ಲಿ ಪಾಕಿಸ್ತಾನಿ ವಾಯುಪಡೆ ಹಾಗೂ ಅಫ್ಗಾನಿಸ್ತಾನದ ಪ್ರತಿರೋಧ ಪಡೆಗಳ ನಡುವಿನ ಸಂಘರ್ಷದ ವೀಡಿಯೋ ಆಗಿದೆ. ಆದರೆ ವಾಸ್ತವವಾಗಿ ಈ ದೃಶ್ಯಗಳು ವೀಡಿಯೋ ಗೇಮ್ ಅರ್ಮ-3 ದಿಂದಾಗಿತ್ತು.

ಟಿವಿ9ಭಾರತ್‍ವರ್ಷ್ ವಾಹಿನಿಯು ವೀಡಿಯೋ ಗೇಮ್ ದೃಶ್ಯಗಳನ್ನು ನಿಜ ಜೀವನ ದೃಶ್ಯವೆಂದು ಬಿಂಬಿಸಿರುವುದು ಇದೇ ಮೊದಲ ಬಾರಿಯಲ್ಲ ಎಂದು ಫ್ರಾನ್ಸ್24 ಹೇಳಿದೆ. "ಈ ಜನರು ಪತ್ರಕರ್ತರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ" ಎಂದು ಕ್ರೀಡನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X