ಉಡುಪಿ: ವೈದ್ಯೆಯ ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಉಡುಪಿ, ಅ.3: ಕಡಿಯಾಳಿ ಸ್ವರ್ಣ ಜ್ಯುವೆಲ್ಲರ್ಸ್ ಎದುರಿನ ವೈದ್ಯರೊಬ್ಬರ ಮನೆಗೆ ಅ.2ರಂದು ಬೆಳಗ್ಗೆ 10ಗಂಟೆಯಿಂದ ರಾತ್ರಿ 9ಗಂಟೆ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಡಾ.ಪ್ರಜ್ಞಾ ಕೆ. ಎಂಬವರ ಬಾಡಿಗೆ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು, ಜುಮಕಿ-2, 2 ಚಿನ್ನದ ಬಳೆ, ಹವಳದ ನಕ್ಲೆಸ್, ಲಕ್ಷ್ಮೀ ಪೆಂಡೆಂಟ್ ಹಾಗೂ 2000ರೂ. ನಗದು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,0,2000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





