‘ಅಲ್-ಬೈಕ್ ಮಂಗಳೂರು’ ಖಾದ್ಯ ಮಳಿಗೆ ಲೋಕಾರ್ಪಣೆ

ಮಂಗಳೂರು, ಅ.4: ನಗರದ ಅತ್ತಾವರದ ರಾಯಲ್ ಪ್ಲಾಝಾ ಶೂಟ್ಸ್ನ ಕೆಳ ಅಂತಸ್ತಿನಲ್ಲಿ ಉದ್ಯಮಿ ಸಲೀಂ ಸಾಗರ್ ಇದಿನಬ್ಬ ಮಾಲಕತ್ವದ ನೂತನ ‘ಅಲ್-ಬೈಕ್ ಮಂಗಳೂರು’ ಮಳಿಗೆ ಸೋಮವಾರ ಸಂಜೆ ಲೋಕಾರ್ಪಣೆಗೊಂಡಿತು. ಕುದ್ರೋಳಿ ಮಸೀದಿಯ ಉಸ್ತಾದ್ ಸಾಕಿಬ್ ಸಲೀಂ ಉಮರಿ ಸಹಿತ ಗಣ್ಯರು ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಮಧ್ಯ ಪ್ರಾಚ್ಯದ ಅತ್ಯದ್ಭುತ ರುಚಿಯನ್ನು ಮಂಗಳೂರಿನ ಜನಸಾಮಾನ್ಯರು ಕೂಡ ಸವಿಯಲು ‘ಅಲ್-ಬೈಕ್ ಮಂಗಳೂರು’ ಸೇವೆ ನೀಡಲು ಮುಂದಾಗಿದೆ. ಈ ರುಚಿಯನ್ನು ಸವಿದ ಬಳಿಕವೇ ವರ್ಣಿಸಲು ಸಾಧ್ಯ. ಸಂಸ್ಥೆಯ ಇನ್ನಷ್ಟು ಮಳಿಗೆಗಳು ನಗರದಾದ್ಯಂತ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಮಂಗಳೂರಿನ ಜನತೆ ಆಹಾರ ಪ್ರಿಯರು. ತಹರೇವಾರಿ ಖಾದ್ಯಗಳಿಗೆ ಮಂಗಳೂರು ಹೆಸರುವಾಸಿಯಾಗಿದೆ. ಅಲ್-ಬೈಕ್ ಮಂಗಳೂರು ಮಳಿಗೆಯು ನಗರದಲ್ಲಿ ತೆರೆದುಕೊಂಡಿದ್ದು, ಕರಾವಳಿಯ ಜನತೆಯ ಮನಸನ್ನು ಗೆಲ್ಲುವುದಂತೂ ಖಚಿತ. ಆಹಾರ ಖಾದ್ಯ ಉದ್ಯಮ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಉತ್ಕೃಷ್ಟ ಗುಣಮಟ್ಟದ ಖಾದ್ಯಗಳನ್ನು ಸಂಸ್ಥೆ ಪರಿಚಯಿಸುತ್ತಿದೆ. ಕರಾವಳಿಗರು ಮಳಿಗೆಗೆ ಭೇಟಿ ನೀಡಿ, ಅಲ್-ಬೈಕ್ನ ವಿಶೇಷ ಖಾದ್ಯಗಳ ರುಚಿ ಸವಿಯಿರಿ. ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ಅವರು ಶುಭ ಹಾರೈಸಿದರು.
ರಫೀಕ್ ಮಾಸ್ಟರ್ ಮಾತನಾಡಿ, ಅಲ್-ಬೈಕ್ ಮಳಿಗೆಯು ಮಂಗಳೂರಿಗೆ ಲಗ್ಗೆ ಇಟ್ಟಿರುವುದು ನಗರದ ಜನತೆಗೆ ಸುವರ್ಣಾವಕಾಶವಾಗಿದೆ. ಅಲ್-ಬೈಕ್ ಮಂಗಳೂರು ಮಳಿಗೆ ಮಾಲಕ ಸಲೀಂ ಸಾಗರ್ ಇದಿನಬ್ಬ ತಮ್ಮ ಎರಡನೇ ಮಳಿಗೆಯನ್ನು ಅತ್ತಾವರದಲ್ಲಿ ತೆರೆದಿದ್ದಾರೆ. (ಮಣಿಪಾಲದಲ್ಲಿ ಮೊದಲ ಮಳಿಗೆ) ಖಾದ್ಯ ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಳಿಗೆಯ ಮಾಲಕ ಸಲೀಮ್ ಸಾಗರ್, ಮಿಸ್ಬಾ ಮಹಿಳಾ ಕಾಲೇಜಿನ ಟ್ರಸ್ಟಿ ಮುಮ್ತಾಝ್ ಅಲಿ, ಎಸ್ಡಿಪಿಐ ಮಂಗಳೂರು ದಕ್ಷಿಣ ಅಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಹಿದಾಯ ಫೌಂಡೇಶನ್ನ ಚೇರ್ಮನ್ ಮನ್ಸೂರ್ ಅಹ್ಮದ್ ಆಝಾದ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಎಸ್ಎಕೆಎಸ್ಎಂ ಮಂಗಳೂರು ಕಾರ್ಯದರ್ಶಿ ಎಂ.ಜಿ. ಮುಹಮ್ಮದ್, ಉದ್ಯಮಿ ರಫೀಕ್ ಇದಿನಬ್ಬ ಸಾಗರ್, ರಾಯಲ್ ಪ್ಲಾಝಾ ಶೂಟ್ಸ್ನ ವ್ಯವಸ್ಥಾಪಕ ಪಾಲುದಾರ ರಿಝ್ವಾನ್ ಖಾದರ್, ಹಿದಾಯ ಫೌಂಡೇಶನ್ ಸಂಸ್ಥಾಪಕ ಖಾಸಿಮ್ ಅಹ್ಮದ್, ಟ್ರಸ್ಟಿ ಝಿಯಾವುದ್ದೀನ್, ಎನ್ಎಸ್ಯುಐ ಜಿಲ್ಲಾ ಮುಖಂಡ ಸವಾದ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.


























