ಮಾಲ್ದೀವ್ಸ್ನಲ್ಲಿ 25ನೇ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಉತ್ಸವ

ಮಾಲ್ದೀವ್ಸ್ , ಅ. 5 : ಇಂಟರ್ನ್ಯಾಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಜಂಟಿಯಾಗಿ ಮಾಲ್ದೀವ್ಸ್ ದ್ವೀಪ ಪ್ರದೇಶವಾದ ಮಫುಸಿಯ ಕಾಣಿ ಗ್ರ್ಯಾಂಡ್ ಸೆಮಿನರ್ ಸಭಾಗೃಹದಲ್ಲಿ 25ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವವು ಶನಿವಾರ ನಡೆಯಿತು.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಲಾಂಛನ ಬಿಡುಗಡೆಗೊಳಿಸಿ ಉದ್ಘಾಟಿಸಿದರು.
ಅತಿಥಿಗಳಾಗಿ ಕಾಣಿ ಗ್ರ್ಯಾಂಡ್ ಸಂಸ್ಥೆಯ ನಿರ್ದೇಶಕ ಎಸ್. ತನೇರ್, ಡಾ.ಸತೀಶ್ ಕುಮಾರ್ ಎಸ್. ಹೊಸಮನಿ, ಡಿ.ಎಸ್. ವಿಶ್ವನಾಥ್ ಮೈಸೂರು, ಶಂಕ್ರೇಗೌಡ ಮೈಸೂರು, ದಿಲೀಪ್ ಎಸ್. ಗಡ್ಯಾಲ್, ನಾಟ್ಯಾಂಜಲಿ ಕಲಾಕೇಂದ್ರದ ನಿರ್ದೇಶಕಿ ಡಾ. ಸಹನಾ ಭಟ್ ಭಾಗವಹಿಸಿದ್ದರು.
ನಾಗರಾಜ್ ಎಸ್. ಉಪಾಧ್ಯಾಯ, ಮಹಾಂತೇಶ್ ಚಂದ್ರಕಾಂತ್ ಮಹಾಜನ್, ಡಾ. ಪ್ರಭು ಚವ್ಹಾಣ್ ಮೊಹಂತ್ರಿ, ಡಾ. ಅಶೋಕ್ ನರೋಡೆ, ಲೇಖಶ್ರೀ ಪಟ್ನಾಯಿಕ್ ಅವರನ್ನು ಸನ್ಮಾನಿಸಲಾಯಿತು.
ಡಾ.ಸತೀಶ್ ಕುಮಾರ್ ಹೊಸಮನಿಯ ಕಾವ್ಯಧಾರೆ ಹಾಗು ಪುಸ್ತಕ ಪ್ರೀತಿ ಮತ್ತು ಡಾ.ಅಶೋಕ್ ನರೋಡೆಯವರ ಮಹಾಕಾವ್ಯಗಳಲ್ಲಿ ಬುದ್ಧ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಡಾ.ಎಂ.ಪಿ. ವರ್ಷ ಮೈಸೂರು ಅಧ್ಯಕ್ಷತೆಯಲ್ಲಿ ಱಜಾಗತಿಕ ಸಾಮರಸ್ಯ ವಿಷಯದಲ್ಲಿ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಭಗವಾನ್ ಬಿಂಡಿಗನವಿಲೆ, ಡಾ. ಅರ್ಚನಾ ಅಥಣಿ, ಪ್ರಶಾಂತ್ ಮೈಸೂರು, ಮುಹಮ್ಮದ್ ಆರೀಫ್ ಕಲ್ಕಟ್ಟ, ಪ್ರಥ್ವಿರಾಜ್ ಭಟ್ ಪಾಲ್ಗೊಂಡರು. ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ನ ಕಾರ್ಯಾಧ್ಯಕ್ಷ ಕೆ.ಪಿ. ಮಂಜುನಾಥ ಸಾಗರ್ ಸ್ವಾಗತಿಸಿದರು. ಗ್ಲೋಬಲ್ ಪೀಸ್ ಫೌಂಡೇಶನ್ನ ಕಾರ್ಯದರ್ಶಿ ಶಿವ ಗುಂಟಕ ಹೈದರಾಬಾದ್ ವಂದಿಸಿದರು. ಪ್ರತಿಭಾ ಗೌಡ ಕಾರ್ಯಕ್ರಮ ನಿರೂಪಿಸಿದರು.







