ಸಾಲೆತ್ತೂರು; ಲಖಿಂಪುರದಲ್ಲಿ ರೈತರ ಹತ್ಯೆ ಖಂಡಿಸಿ ಎಸ್ ಡಿಪಿಐನಿಂದ ಪ್ರತಿಭಟನೆ

ಸಾಲೆತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಕೊಳ್ನಾಡು ಬ್ಲಾಕ್ ವತಿಯಿಂದ ಉತ್ತರ ಪ್ರದೇಶದ ಲಂಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ ನಾಲ್ಕು ಜನ ರೈತರ ಹತೈ ನಡೆಸಿದೆ ಎಂದು ಆರೋಪಿಸಿ ಸಾಲೆತ್ತೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿತು
ಪ್ರತಿಭಟನೆಯನ್ನುದ್ದೇಶಿಸಿ ವಿಟ್ಲ ಪಡ್ನೂರು ಪಂಚಾಯತ್ ಸದಸ್ಯ ಮಹಮೂದ್ ಕಡಂಬು ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ಮಾತನಾಡಿದ ಎಸ್ ಡಿಪಿಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶ್ರಪ್ ಮಂಚಿ, ಕೇಂದ್ರ ಸಚಿವ ಅಮಿತ್ ಮಿಶ್ರಾ ಬೆಂಗಾವಲು ವಾಹನದೊಂದಿಗೆ ಉದ್ದೇಶ ಪೂರ್ವಕವಾಗಿ ರೈತರ ಹತೈ ಮಾಡಿದ್ದಾರೆ ಕೂಡಲೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಮತ್ತು ಅವರ ಮೇಲೆ ಉನ್ನತ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಭೆ ವೇದಿಕೆಯಲ್ಲಿ ಕೊಳ್ನಾಡು ಬ್ಲಾಕ್ ಅಧ್ಯಕ್ಷ ಬಶೀರ್ ಕೊಳ್ನಾಡು, ಎಸ್ ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾದಿಕಾರಿ ಪೈಝಲ್ ಮಂಚಿ ಎಸ್ ಡಿಪಿಐ ಕೊಳ್ನಾಡು ಬ್ಲಾಕ್ ಸಮೀತಿ ಕಾರ್ಯದರ್ಶಿ ಅಲಿ ಕಡಂಬು ಬೊಳಂತೂರು ಪಂಚಾಯತ್ ಸದಸ್ಯರಾದ ಹಮೀದ್ ಬೊಳಂತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಡಿ.ಎನ್ ಫಾರೂಕ್ ಮಂಚಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.






.jpeg)


