ನ.20- 21: ಕಾಜೂರಿನಲ್ಲಿ ಎಸೆಸ್ಸೆಫ್ ದ.ಕ ಜಿಲ್ಲಾ ಪ್ರತಿಭೋತ್ಸವ

ಮಂಗಳೂರು, ಅ.9: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಟ್ ಫೆಡರೇಶನ್ (ರಿ.) ದ.ಕ ಜಿಲ್ಲೆ ಈಸ್ಟ್ ಇದರ ಪ್ರತಿಭೋತ್ಸವ ಘೋಷಣೆ ಹಾಗೂ ಸ್ಥಳೀಯ ಸ್ವಾಗತ ಸಮಿತಿಯ ರಚನೆಯು ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಸಮುದಾಯ ಭವನದಲ್ಲಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಅಮ್ಜದಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ದುಆಗೈದು ಪ್ರತಿಭೋತ್ಸವ ದಿನಾಂಕವನ್ನು (ನ.20, 21ರಂದು ಕಾಜೂರು ದರ್ಗಾ ವಠಾರ) ಘೋಷಣೆ ಮಾಡಿದರು. ಕಾಜೂರು ಮಸ್ಜಿದ್ ಹಾಗೂ ದರ್ಗಾದ ಅಧ್ಯಕ್ಷ ಕೆ.ಯು. ಇಬ್ರಾಹಿಂ ಪ್ರತಿಭೋತ್ಸವ ತೀಮ್ ಸಾಂಗ್ ಬಿಡುಗಡೆ ಮಾಡಿದರು.
ಕಾಜೂರು ತಂಙಳ್, ಮಸ್ಜಿದ್ ಹಾಗೂ ದರ್ಗಾ ಶರೀಫ್ ಅಧ್ಯಕ್ಷ ಕೆ.ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ.ಕಮಾಲ್ಕಾಜೂರು, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಅವರನ್ನು ಸ್ವಾಗತ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಎಸ್ವೈಎಸ್ ಕಾಜೂರು ಅಧ್ಯಕ್ಷ ಕೆ.ಎಂ. ಅಬೂಬಕ್ಕರ್ ಕುಕ್ಕಾವು, ಸಂಚಾಲಕರಾಗಿ ಅಝೀಝ್ ದಿಡುಪೆ, ಹಣಕಾಸು ಕಾರ್ಯದರ್ಶಿಯಾಗಿ ಡಿ.ವೈ. ಉಮರಬ್ಬ, ಉಪಾಧ್ಯಕ್ಷರಾಗಿ ಕೆ.ಪಿ. ಮುಹಮ್ಮದ್, ಪಿ.ಎ ಮುಹಮ್ಮದ್, ಜೆ.ಎಚ್.ಉಸ್ಮಾನ್ ಮತ್ತು ರಶೀದ್ ಮದನಿ, ಉಪ ಸಂಚಾಲಕರಾಗಿ ಸಿರಾಜ್, ಶಾಕೀರ್, ಮಜೀದ್ ಕುಕ್ಕಾವು, ಪಿ.ಎ. ಉಸ್ಮಾನ್ ಮತ್ತು ಶರೀಫ್ ಸಖಾಫಿ ದಿಡುಪೆ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ಹಕೀಂ ಮುಸ್ಲಿಯಾರ್, ನಝೀರ್, ನಾಸಿರ್, ಹಸೈನಾರ್, ರಾಝಿಕ್, ಹೈದರಾಲಿ, ಅಬೂಸ್ವಾಲಿಹ್,ನೌಶಾದ್, ಶೌಕತ್ ಆಲಿ, ಇಬ್ರಾಹಿಂ ಕಾಜೂರು, ಫಾರೂಕ್, ಮುಸ್ತಫಾ ಬಿ ವೈ, ರಿಯಾಝ್, ಜಬ್ಬಾರ್ ಅವರನ್ನು ಒಳಗೊಂಡ ಸ್ಥಳೀಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಎಸೆಸ್ಸೆಫ್ ದ.ಕ ಜಿಲ್ಲಾ ಪ್ರತಿಭೋತ್ಸವ ಅಧ್ಯಕ್ಷ ಫೈಝಲ್ ಝುಹ್ರಿ ಕಲ್ಲಗುಂಡಿ, ಸಂಚಾಲಕ ಹಕೀಂ ಕಳಂಜಿಬೈಲು, ಜಿಲ್ಲಾ ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಮಾಚಾರು, ಮುಸ್ತಫಾ ಉರುವಾಲುಪದವು ಮತ್ತು ಸಿದ್ದೀಕ್ ಗೂನಡ್ಕ, ಸದಸ್ಯರಾದ ಶರೀಫ್ ನಾವೂರು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಸದಸ್ಯ ರಶೀದ್ ಮದನಿ ಇಂದಬೆಟ್ಟು ಸ್ವಾಗತಿಸಿದರು. ಮಸ್ಹೂದ್ ಸಅದಿ ವಂದಿಸಿದರು.







