ಡಾ.ಶಿವರಾಮ ಕಾರಂತರ ಜೀವನ, ಧನಾತ್ಮಕ ಚಿಂತನೆ ಮಾದರಿ -ಡಾ.ಪಿ.ಎಸ್.ಯಡಪಡಿತ್ತಾಯ
ಡಾ.ಸಂಧ್ಯಾ ಪೈಗೆ ಕಾರಂತ ಪ್ರಶಸ್ತಿ ಪ್ರದಾನ

ಮಂಗಳೂರು: ಡಾ.ಶಿವರಾಮ ಕಾರಂತ ರ ಜೀವನೋತ್ಸವ,ನೇರ ನಡೆ ನುಡಿ ಧನಾತ್ಮಕ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಅವರು ಇಂದು ನಗರದ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಕಾರಂತ ಹುಟ್ಟುಹಬ್ಬ ಹಾಗೂ ಕಾರಂತ ಪ್ರಶಸ್ತಿಯನ್ನು ಪತ್ರಕರ್ತೆ ಡಾ.ಸಂಧ್ಯಾ ಪಿ.ಪೈ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಯಾರ ಹೊಗಳಿಕೆಗೂ ಹಿಗ್ಗದೆ, ತೆಗಳಿಕೆಗೂ ಕುಗ್ಗದೆ ತಾನು ನಂಬಿದ ನಿಲುವುಗಳಿಗೆ ಬದ್ದರಾಗಿ ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ.ಶಿವರಾಮ ಕಾರಂತರು ತಮ್ಮ ಕೊನೆಯ ಉಸಿರುಇರುವ ತನಕವೂ ನಿರಂತರ ಕ್ರೀಯಾಶೀಲರಾ ಗಿದ್ದರು. ಅವರವಹೆಸರಿನಲ್ಲಿ ಪತ್ರಿಕಾರಂಗದಲ್ಲಿ ಸಾಧನೆ ಮಾಡಿರುವ ಸಂಧ್ಯಾ ಪೈಯವರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಡಾ.ಪಿ.ಎಸ್ .ಯಡಪಡಿತ್ತಾಯ ಶುಭ ಹಾರೈಸಿದರು.
ಬದುಕಿಗೆ ಚೈತನ್ಯ ನೀಡುವ ಕಲೆ,ಸಾಹಿತ್ಯ, ಸಂಸ್ಕ್ರತಿ ಯನ್ನು ತನ್ನ ವೈಯಕ್ತಿಕ ಬದುಕಿಗೆ ಸೀಮಿತಗೊಳಿಸದೆ ನಾಡಿನ ಜನತೆಗೆ ತಮ್ಮ ಅಮೂಲ್ಯ ಕೃತಿಗಳ ಮೂಲಕ ನೀಡಿದ ಡಾ.ಶಿವರಾಕಾರಂತರು ಮಹಾತ್ಮರಾಗಿ ದ್ದಾರೆ.ಅವರ ಹುಟ್ಟು ಹಬ್ಬದ ದಿನ ಯೋಗ್ಯರಾದವರಿಗೆ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸ ಎಂದು ಉಡುಪಿ ಶ್ರೀ ಕೃಷ್ಣ ಮಠದ ಮಠಾಧಿಪತಿ ಶ್ರೀ ವಿಶ್ವ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
"ಇದು ನನ್ನ ಕೊನೆಯ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮ.ಇನ್ನು ಮುಂದೆ ಯಾವುದೇ ಪ್ರಶಸ್ತಿ ಗಳನ್ನು ಸ್ವೀಕರಿಸುವ ಕಾರ್ಯಕ್ರಮ ಗಳಲ್ಲಿ ನಾನು ಭಾಗವಹಿಸಲಾರೆ.ನಾನು ಈ ತೀರ್ಮಾನ ವನ್ನು ಒಂದು ವರ್ಷದ ಹಿಂದೆಯೇ ತೆಗೆದುಕೊಂಡಿರುತ್ತೇನೆ. ಆದರೆ ಕಾರಂತರು ನಮ್ಮ ಪತ್ರಕೆಗೆ ಬರೆಯುತ್ತಿದ್ದ ಕಾರಣ ಕಲ್ಲೂರ ಪ್ರತಿಷ್ಠಾನದ ಪ್ರಶಸ್ತಿ ಯನ್ನು ಸ್ವೀಕರಿಸಿದ್ದೇನೆ. ಕಾರಂತರ ನೇರ ನಡೆ ನುಡಿಯ ಜೊತೆ ಮಗುವಿನಂತಹ ನಿಷ್ಕಲ್ಮಶ ಮನಸ್ಸು ಇತ್ತು ಮತ್ತು ಅಗಾಧ ವಾದ ಜ್ಞಾನ ಭಂಡಾರ ವಿತ್ತು ಅವುಗಳನ್ನು ತಮ್ಮ ಬರಹಗಳ ಮೂಲಕ ಓದುಗರಿಗೆ ಅವರು ನೀಡಿದ್ದಾರೆ ಅವರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸು ವುದಾಗಿ ಕಾರಂತ ಪ್ರಶಸ್ತಿ ಸ್ವೀಕರಿಸಿದ ಸಂಧ್ಯಾ ಪೈ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ,ಕರ್ಣಾಟಕ ಬ್ಯಾಂಕ್ ನ ಮಹಾಪ್ರಬಂಧ ಕ ನಾಗರಾಜರಾವ್,ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿ ನಿತ್ಯಾನಂದ ಪೊಳಲಿ ಮೊದಲಾದ ವರು ಉಪಸ್ಥಿತರಿದ್ದರು.
ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷ ತೆ ವಹಿಸಿದ್ದರು.ಉಮೇಶ್, ದಯಾನಂದ ಕಟೀಲ್, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅಚ್ಚುತ ಚೇವಾರು, ಮೋಹನ್ ರಾವ್ ಹಾಗೂ ಮಂಜುಳಾ ಶೆಟ್ಟಿಯವರಿಗೆ ಕಲ್ಕೂರ ಅಭಿನಂದನಾ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಜಿ.ಕೆ.ಭಟ್ ಸೇರಾಜೆ ವಂದಿಸಿದರು.







