Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ನಹೀ ಖಾನೇ ದೂಂಗಾ...ಘೋಷಣೆ...

ನಹೀ ಖಾನೇ ದೂಂಗಾ...ಘೋಷಣೆ ಜಾರಿಯಾಗಿದೆ...!

ಚೇಳಯ್ಯಚೇಳಯ್ಯ17 Oct 2021 1:10 PM IST
share
ನಹೀ ಖಾನೇ ದೂಂಗಾ...ಘೋಷಣೆ ಜಾರಿಯಾಗಿದೆ...!

‘‘ಸರ್...ದೇಶದಲ್ಲಿ ಹಸಿವು ಹೆಚ್ಚಿದೆಯಂತಲ್ಲ....’’ ಪತ್ರಕರ್ತ ಎಂಜಲು ಕಾಸಿ, ಚೌಕೀದಾರರನ್ನು ಕೆಣಕಿದ.

‘‘ನಹೀ ಖಾನೇ ದೂಂಗಾ....ತಿನ್ನೋಕೆ ಬಿಡೋಲ್ಲ ಎನ್ನುವ ನನ್ನ ಘೋಷಣೆಯನ್ನು ನಿಜ ಮಾಡಿ ತೋರಿಸಿದ್ದೇನೆ....’’ ಚೌಕೀದಾರರು ಗಡ್ಡ ಸವರಿ ನಕ್ಕು ಹೇಳಿದರು.

‘‘ನಹೀ ಖಾನೇ ದೂಂಗಾ ಎಂದು ನೀವು ಭ್ರಷ್ಟಾಚಾರಿಗಳಿಗೆ ತಾನೇ ಹೇಳಿದ್ದು?’’ ಕಾಸಿ ಪ್ರಶ್ನಿಸಿದ.

‘‘ನೋಡಿ....ನೀವು ತಪ್ಪು ತಿಳಿದುದಕ್ಕೆ ನಾನೇನು ಮಾಡಲಿ. ರೇಷನ್ ಅಂಗಡಿಯಲ್ಲಿ ಹಸಿರು ಕಾರ್ಡ್ ಅಕ್ಕಿದಾರರು ಪುಕ್ಕಟೆ ಅಕ್ಕಿ ಕೊಂಡು ಹೋಗುವುದನ್ನು ತಡೆದು ಎಲ್ಲರಿಗೂ ಸಮಾನ ನ್ಯಾಯ ನೀಡುವ ಉದ್ದೇಶದಿಂದ ಆ ಘೋಷಣೆ ಮಾಡಿದ್ದೆ....ಆಗ ನೀವು ಚಪ್ಪಾಳೆ ತಟ್ಟಿದಿರಿ. ಈಗ ಹಸಿವು ಹೆಚ್ಚಾಗಿದೆ ಎಂದು ಟೀಕೆ ಮಾಡ್ತೀರಿ?’’

‘‘ಸಾರ್, ನೀವು ಹೇಳಿದ್ದು ನಹೀ ಖಾವುಂಗಾ, ನಹೀ ಖಾನೇ ದೂಂಗಾ ಎಂದು. ಆದರೆ ನಿಮ್ಮನ್ನು ನೋಡಿದರೆ ಊಟ ಮಾಡದವರ ಹಾಗೆ ಇಲ್ವಲ್ಲ ....’’ ಚೌಕೀದಾರರನ್ನು ಕಾಸಿ ಕೆಣಕಿದ.

‘‘ನೋಟು ನಿಷೇಧದ ಬಳಿಕ ನಾನು ಊಟಾನೇ ಮಾಡಿಲ್ಲ...ಬೇಕಾದರೆ ಅನಿಲ್ ಅಂಬಾನಿ, ಅದಾನಿ ಅವರಲ್ಲಿ ಕೇಳಿ....’’

‘‘ಸರ್...ನಹೀ ಖಾನೇ ದೂಂಗಾ ಹೇಳಿಕೆಯಿಂದ ದೇಶಕ್ಕೆ ಯಾವ ರೀತಿಯಲ್ಲಿ ಲಾಭವಾಗಿದೆ?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡಿ...ಮೊದಲು ದೇಶದಲ್ಲಿ ಅಸಮಾನತೆ ಇತ್ತು. ಬಡವರಿಗೊಂದು ನ್ಯಾಯ. ಶ್ರೀಮಂತರಿಗೊಂದು ನ್ಯಾಯ. ಈಗ ಎಲ್ಲರೂ ಸಮಾನ ನ್ಯಾಯವನ್ನು ಪಡೆಯುತ್ತಿದ್ದಾರೆ....’’

‘‘ಅಂದ್ರೆ....?’’ ಕಾಸಿ ಅರ್ಥವಾಗದೆ ಕೇಳಿದ.

‘‘ಅಂದ್ರೆ....ಬಡವರಿಗೆ ಪುಕ್ಕಟೆ ಅಕ್ಕಿ, ಶ್ರೀಮಂತರಿಗೆ ದುಡ್ಡಿನ ಅಕ್ಕಿ ಎಂದಿಲ್ಲ. ಎಲ್ಲರೂ ದುಡ್ಡು ಕೊಟ್ಟೇ ಕೊಂಡು ಕೊಳ್ಳಬೇಕು. ಇದರಿಂದಾಗಿ ಶ್ರೀಮಂತರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇನೆ....’’

‘‘ಆದರೆ ಬಡವರಲ್ಲಿ ಹಸಿವು ಹೆಚಾ್ಚಗಿದೆಯಂತಲ್ಲ....’’ ಕಾಸಿ ಪ್ರಶ್ನಿಸಿದ.

‘‘ಆ ವರದಿಗೆ ಬಳಸಿದ ಮಾನದಂಡ ಸರಿಯಿಲ್ಲ. ಭಾರತೀಯರ ದೇಹ ಪ್ರಕೃತಿಗೂ ವಿದೇಶಿಯರ ದೇಹ ಪ್ರಕೃತಿಗೂ ವ್ಯತ್ಯಾಸವಿದೆ. ಭಾರತೀಯರು ಹಸಿವನ್ನು ಸಹಿಸಿಕೊಳ್ಳಬಲ್ಲರು. ಎರಡು ಮೂರು ದಿನ ಹಸಿವಿನಿಂದ ಇರುವುದು ಅವರಿಗೆ ಅಭ್ಯಾಸ. ಆದುದರಿಂದ ಭಾರತದ ಹಸಿವನ್ನು ವಿದೇಶದ ಹಸಿವಿಗೆ ಹೋಲಿಸುವುದು ಸರಿಯಲ್ಲ.....’’ ಚೌಕೀದಾರರು ವಿವರಿಸಿದರು.

‘‘ಅಂದರೆ ಭಾರತದಲ್ಲಿ ಹಸಿವೇ ಇಲ್ಲ ಅಂತೀರಾ?’’ ಹೊಟ್ಟೆ ಚುರ್‌ಗುಟ್ಟಿತ್ತಿದ್ದರೂ, ಕಾಸಿ ಸಹಿಸಿಕೊಂಡು ಕೇಳಿದ.

‘‘ಇಲ್ವೇ ಇಲ್ಲ. ಬೇಕಾದರೆ ಅದಾನಿ, ಅಂಬಾನಿಯವರನ್ನು ಕೇಳಿ. ಅವರು ಹೇಳ್ತಾರೆ....ಅವರು ಏನಾದರೂ ಹಸಿವಾಗತ್ತೆ ಎಂದು ಹೇಳಿದ್ರೆ ಅದನ್ನು ನಾವು ನಂಬಬಹುದು...ಇದೆಲ್ಲ ಕಾಂಗ್ರೆಸ್‌ನೋರ ಹುನ್ನಾರ. ತಮಗೆ ತಿನ್ನೋಕೆ ಆಗ್ತಾ ಇಲ್ಲ ಎಂದು ಅವರು ಆರೋಪ ಮಾಡ್ತಾ ಇದ್ದಾರೆ....ನಿಜ ನೋಡಿದರೆ ಕಾಂಗ್ರೆಸ್‌ನೋರು ಹಸಿವಿನಲ್ಲಿದ್ದಾರೆ . ಆದುದರಿಂದ ಭಾರತದಲ್ಲಿ ಹಸಿವು ಹೆಚ್ಚಿದೆ ಎಂದು ವರದಿ ಹೇಳಿದೆ. ಅದನ್ನೇ ಮಾಧ್ಯಮಗಳು ತಿರುಚಿವೆ...’’ ಚೌಕೀದಾರರು ನಿಜವನ್ನು ಬಹಿರಂಗಪಡಿಸಿದವರು.

ಅಷ್ಟರಲ್ಲಿ ಸೇವಕನೊಬ್ಬ ಬಂದು ‘‘ಸಾರ್....ಅಣಬೆ ಪಲ್ಯ ಮತ್ತು ಊಟ ಸಿದ್ಧವಿದೆ...’’ ಎಂದು ಘೋಷಿಸಿದ. ಚೌಕೀದಾರರು ಕಾಸಿಯ ಉಪಸ್ಥಿತಿಯನ್ನು ಮರೆತು ಡೈನಿಂಗ್ ಟೇಬಲ್‌ಗೆ ಧಾವಿಸಿದರು. ಕಾಸಿಯ ಹೊಟ್ಟೆ ಚುರ್ರ್‌ ಎಂದು ಅಲ್ಲಿಂದ ಧಾವಿಸಿದವನೇ ಬೀದಿ ಬದಿಯಲ್ಲಿರುವ ಗಂಜಿ ಹೊಟೇಲನ್ನು ಹುಡುಕತೊಡಗಿದ.

ಚೇಳಯ್ಯ

chelayya@gmail.com

share
ಚೇಳಯ್ಯ
ಚೇಳಯ್ಯ
Next Story
X