Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸಲಗ: ಸಲಗ ನಡೆದಲ್ಲಿ ರಕ್ತದ್ದೇ ದಾರಿ..!

ಸಲಗ: ಸಲಗ ನಡೆದಲ್ಲಿ ರಕ್ತದ್ದೇ ದಾರಿ..!

ಕನ್ನಡ ಸಿನೆಮಾ

ಶಶಿಕರ ಪಾತೂರುಶಶಿಕರ ಪಾತೂರು17 Oct 2021 4:11 PM IST
share
ಸಲಗ: ಸಲಗ ನಡೆದಲ್ಲಿ ರಕ್ತದ್ದೇ ದಾರಿ..!

ಸಲಗ ಜೈಲಿನಲ್ಲಿರುವ ಒಬ್ಬ ಕೈದಿ. ಆದರೆ ಆತ ಒಳಗಿದ್ದುಕೊಂಡೇ ಹೊರಗಡೆ ಒಬ್ಬ ರೌಡಿಯ ಕೊಲೆ ಮಾಡಿಸುತ್ತಾನೆ. ರೌಡಿಯ ಕಡೆಯವರು ಸಲಗ ಜೈಲಿನಿಂದ ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತಾರೆ. ಇದು ಚಿತ್ರದ ನಾಯಕ ಸಲಗನ ಪ್ರವೇಶಕ್ಕೂ ಮೊದಲು ದೃಶ್ಯಗಳು ಮೂಡಿಸುವ ’ಹೀರೋ ಬಿಲ್ಡಪ್’ ವಾತಾವರಣ. ಆದರೆ ತನ್ನ ಎಂಟ್ರಿಯಾಗುವಾಗ ಪುಟಗಟ್ಟಲೆ ಡೈಲಾಗ್ ಅಥವಾ ಮ್ಯಾನರಿಸಮ್‌ನಿಂದ ಯಾವುದೇ ಬಿಲ್ಡಪ್ ನೀಡದೆ ಕೃತ್ಯದ ಮೂಲಕವೇ ಗುರುತಿಸಲ್ಪಡುತ್ತಾನೆ ಸಲಗ. ಇದು ನಟ ದುನಿಯಾ ವಿಜಯ್ ನಿರ್ದೇಶಕ ವಿಜು ಕುಮಾರ್ ಆಗಿ ಬದಲಾಗಿರುವ ರೀತಿ.

ಒಬ್ಬ ವ್ಯಕ್ತಿ ರೌಡಿಸಂ ಮಾಡಲು ಏನು ಕಾರಣ ಇರಬಹುದು? ‘‘ಗತ್ತಿಗೆ, ಗಾಂಭೀರ್ಯಕ್ಕೆ, ಗಜ ಗಾಂಭೀರ್ಯಕ್ಕೆ ರೌಡಿಸಮ್ ಮಾಡಿದವನು ಸಲಗ’’ ಎನ್ನುವ ಸಂಭಾಷಣೆ ಕೇಳಿರಬಹುದು. ಆದರೆ ಚಿತ್ರ ನೋಡಿದಾಗ ಗತ್ತಿನಿಂದ, ಗಾಂಭೀರ್ಯದಿಂದ ರೌಡಿಸಮ್ ಮಾಡುವವನು ಸಲಗ ಎಂದು ಅರ್ಥವಾಗುತ್ತದೆ. ಯಾಕೆಂದರೆ ಆತ ರೌಡಿಸಮ್ ಮಾಡಲು ಕಾರಣ ಏನು ಎನ್ನುವುದನ್ನು ಫ್ಲ್ಯಾಶ್ ಬ್ಯಾಕ್ ಮೂಲಕ ತೋರಿಸಲಾಗಿದೆ. ಹಾಗಾಗಿ ಅದು ಒಂದು ಪ್ರತೀಕಾರದ ಕತೆ ಎನ್ನುವುದು ಅರ್ಥವಾಗುತ್ತದೆ.

 ಮೊದಲ ಬಾರಿ ನಿರ್ದೇಶನ ಮಾಡುವವರು ಚಿತ್ರದಲ್ಲಿ ತುಂಬಾ ಹೇಳಲು ಹೋಗಿ ದೊಡ್ಡ ಕಾಲಾವಧಿಯ ಚಿತ್ರ ಮಾಡುವುದು ಸಾಮಾನ್ಯ. ಆದರೆ ಎರಡೇ ಗಂಟೆಗಳೊಳಗೆ ಚಿತ್ರ ಮುಗಿಸುವ ಮೂಲಕ ಆ ತಪ್ಪಿನಿಂದ ಪಾರಾಗಿದ್ದಾರೆ ವಿಜಯ್. ಅದರಲ್ಲಿಯೂ ಸ್ಟಾರ್ ನಟನೇ ನಿರ್ದೇಶಕನಾದಾಗ ತನ್ನ ಪಾತ್ರವನ್ನೇ ಮೊೆಸುವುದು ಸಾಮಾನ್ಯ. ಆದರೆ ಎಲ್ಲ ಪಾತ್ರಗಳಿಗೆ ಸರಿಯಾದ ಅವಕಾಶ ನೀಡಿ ತಮ್ಮ ಪಾತ್ರವನ್ನು ಕಲಶವಾಗಿಸಿದ್ದಾರೆ. ಅದರಲ್ಲಿಯೂ ಧನಂಜಯ್ ನಿರ್ವಹಿಸಿರುವ ಪೊಲೀಸ್ ಪಾತ್ರಕ್ಕೆ ತಮ್ಮ ನಿಜವಾದ ಪುತ್ರನ ಹೆಸರನ್ನೇ ಇರಿಸಿರುವುದು, ವಿಜಯ್ ತನ್ನ ಪ್ರತಿಸ್ಪರ್ಧಿ ಪಾತ್ರವನ್ನೂ ಪ್ರೀತಿಸಿರುವುದಕ್ಕೊಂದು ಸೂಚನೆ! ನಾಯಕನಾಗಿ ಕೂಡ ಅವರು ತಮ್ಮಲ್ಲಿನ ನಟನಿಗೊಂದು ಲಗಾಮು ಹಾಕಿಕೊಂಡಿರುವುದು ಎದ್ದು ಕಾಣುವಂತಿದೆ. ಧನಂಜಯ್ ತಮ್ಮ ಇಮೇಜ್ ಉಳಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ. ನಾಯಕಿ ಸಂಜನಾ ಆನಂದ್ ಗಟ್ಟಿತನದ ಪ್ರದರ್ಶನಕ್ಕೆ ಒಂದಷ್ಟು ಬೈಗಳು ಮಾತನಾಡಿದ್ದು ಬಿಟ್ಟರೆ ಬೇರೇನಿಲ್ಲ. ರಾಕ್ಲೈನ್ ಸುಧಾಕರ್ ಸೇರಿದಂತೆ ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸುವ ಪಾತ್ರಗಳು ಕೂಡ ನೆನಪಲ್ಲಿ ಉಳಿಯಲು ಮಾಸ್ತಿಯ ಸಂಭಾಷಣೆಗಳೇ ಜಾಸ್ತಿ ಕಾರಣವಾಗಿವೆ ಎನ್ನಬಹುದು. ಎನ್‌ಕೌಂಟರ್ ಬಳಿಕ ಮಾಧ್ಯಮಗಳಿಗೆ ನೀಡಲಾಗುವ ಸುದ್ದಿಯ ಬಗ್ಗೆ ವ್ಯಂಗ್ಯವಾಗಿ ಡೈಲಾಗ್ ಹೊಡೆದು ಸಿಳ್ಳೆಗಿಟ್ಟಿಸಿರುವ ನವ ನಟ ನವೀನ್ ಅದಕ್ಕೊಂದು ಉದಾಹರಣೆ ಎನ್ನಬಹುದು. ಮಾತ್ರವಲ್ಲ, ರೌಡಿಗಳ ಜೊತೆಗಿದ್ದುಕೊಂಡೇ ಒಂದೇ ವಾಕ್ಯದಲ್ಲಿ ಅವರನ್ನು ಕೆಣಕುವ ಮಾತನಾಡಿ ನಗುವ ಮಲ್ಲನ ಪಾತ್ರ, ಅದೇ ರೀತಿ ಕೆಂಡ, ಸಾವಿತ್ರಿ ಮೊದಲಾದ ಪಾತ್ರಗಳ ಮ್ಯಾನರಿಸಮ್ಸ್ ಕೂಡ ದೃಶ್ಯಗಳಿಗೆ ಪೂರಕವಾಗಿ ಮೂಡಿ ಬಂದಿವೆ.

ಫ್ಲ್ಯಾಶ್‌ಬ್ಯಾಕ್ ದೃಶ್ಯದಲ್ಲಿ ವಿಜಯ್‌ನ ಬಾಲ್ಯದ ಪಾತ್ರವನ್ನು ನಿಭಾಯಿಸಿರುವ ರಂಗಭೂಮಿ ಪ್ರತಿಭೆ ಶ್ರೀಧರ್ ಮತ್ತು ತಂದೆಯ ಪಾತ್ರದಲ್ಲಿ ಅಭಿನಯಿಸಿರುವ ಸಂಪತ್ ಬಗ್ಗೆ ಕೂಡ ಇಲ್ಲಿ ಉಲ್ಲೇಖಿಸಲೇಬೇಕು. ಚಿತ್ರದಲ್ಲೂ ಶೆಟ್ಟಿ ಎನ್ನುವ ರೌಡಿ ಇಮೇಜ್‌ಗೆ ಬೇಕಾದ ಹೆಸರಿದ್ದರೂ ಯಶ್ ಶೆಟ್ಟಿಯನ್ನು ಪುಕ್ಕಲನಾಗಿ ತೋರಿಸುವಲ್ಲಿ ಪಾತ್ರದ ಕಟ್ಟುವಿಕೆ ಗೆದ್ದಿದೆ.

 ವಿಜಯ್ ಅವರು ದುನಿಯಾ ಇಮೇಜ್‌ನಿಂದ ಪೂರ್ತಿ ಹೊರಬರುವ ರೀತಿಯಲ್ಲಿ ಮಾಡಿರುವ ಚಿತ್ರ ಇದು. ಆದರೆ ಚಿತ್ರದ ಆರಂಭದ ದೃಶ್ಯಗಳನ್ನು ಹೆಣೆದ ರೀತಿ ಮತ್ತೆ ಸೂರಿ ಸಿನೆಮಾಗಳನ್ನು ನೆನಪಿಸುವಂತಿದೆ. ನಾಯಕನ ಎಂಟ್ರಿಯನ್ನು ತೋರಿಸುವ ರೀತಿ ರಜನಿಕಾಂತ್ ಅವರ ‘ಕಬಾಲಿ’ಯನ್ನು ನೆನಪಿಸುತ್ತದೆ. ಆದರೆ ಇಲ್ಲಿನ ಪ್ರತೀಕಾರದ ಕತೆ ತೀರ ವೈಯಕ್ತಿಕವಾಗಿರುವಂತಹದ್ದು. ಹಾಗಿದ್ದರೂ ಸಲಗನ ಜೊತೆಗೆ ಒಂದು ಬಳಗ ಇರಲು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೆ ಕತೆಯಲ್ಲಿ ಉತ್ತರವಿಲ್ಲ. ದೃಶ್ಯದಲ್ಲಿ ಪರಿಹಾರ ಸಿಗದ ಎಷ್ಟೋ ಸಂದೇಹಗಳಿವೆ. ಅವುಗಳಿಗೆ ಸಾಧ್ಯವಾದಷ್ಟು ಸಂಭಾಷಣೆಯಿಂದಲೇ ಉತ್ತರ ನೀಡಲು ಪ್ರಯತ್ನಿಸಿದ್ದಾರೆ ಚಿತ್ರದ ಚಿತ್ರಕತೆಯಲ್ಲಿಯೂ ಕೈ ಜೋಡಿಸಿರುವ ಮಾಸ್ತಿ.

ಜನಪ್ರಿಯ ಹಾಡುಗಳಿದ್ದರೂ ಅವುಗಳನ್ನು ಅಗತ್ಯಕ್ಕೆ ಬೇಕಾದಷ್ಟೇ ಬಳಸಿರುವ ನಿರ್ದೇಶಕ ವಿಜಯ್, ಬೆಂಗಳೂರಿನ ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಕೂಡ ಹಿಂದೆಂದೂ ನೋಡಿರದಂತೆ ತೋರಿಸಿರುವ ಛಾಯಾಗ್ರಾಹಕ ಶಿವಸೇನ, ಹಿನ್ನೆಲೆ ಸಂಗೀತದ ಮೂಲಕ ದೃಶ್ಯಗಳಲ್ಲಿ ತಲ್ಲೀನಗೊಳ್ಳುವಂತೆ ಮಾಡಿರುವ ಚರಣ್ ರಾಜ್ ಒಟ್ಟು ಚಿತ್ರದ ಗುಣಮಟ್ಟ ಉತ್ತಮಗೊಳಿಸಿದ್ದಾರೆ. ಆದರೆ ಸಂಭಾಷಣೆ ಮತ್ತು ರಕ್ತಪಾತದ ಮೂಲಕ ವಯಸ್ಕರಷ್ಟೇ ಚಿತ್ರ ನೋಡುವಂತೆ ಮಾಡಿರುವುದೊಂದೇ ಬೇಸರದ ವಿಚಾರ.

ನಿರ್ದೇಶನ: ದುನಿಯಾ ವಿಜಯ್

ನಿರ್ಮಾಣ: ವೀನಸ್ ಎಂಟರ್ಟೇನರ್

ತಾರಾಗಣ: ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ್

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X