ಅ. 20 : ಪ್ರವಾದಿ ಮುಹಮ್ಮದ್ ವಚನ ಸಂದೇಶ
ಉಳ್ಳಾಲ: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ, ಪೊಸಕುರಲ್ ಬಳಗ, ಸದ್ಭಾವನಾ ವೇದಿಕೆ ಹಾಗೂ ಲಯನ್ಸ್ ಕ್ಲಬ್ ಫೆರ್ಮನ್ನೂರು ಇದರ ಸಂಯುಕ್ತ ಆಶ್ರಯದಲ್ಲಿ ಆರಂಭಗೊಂಡಿರುವ ಪ್ರವಾದಿ ಮುಹಮ್ಮದ್ (ಸ) ಅತ್ಯುತ್ತಮ ಮಾದರಿ ಅಭಿಯಾನ ಪ್ರಯುಕ್ತ ಪ್ರವಾದಿ ಮುಹಮ್ಮದ್ (ಸ) ವಚನ ಸಂದೇಶ ಅ.20ರಂದು ಸಂಜೆ 6.40ಕ್ಕೆ ಕೊಲ್ಯದಲ್ಲಿರುವ ಬ್ರಹ್ಮಶ್ರೀ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ಜರುಗಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ವಲಯ ಇದರ ಪ್ರಕಟಣೆ ತಿಳಿಸಿದೆ.
Next Story





