ಉದ್ಯಾವರ ಸಾವಿರ ಜಮಾಅತ್ ಖಿದ್ಮತುಲ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಮೀಲಾದ್ ಆಚರಣೆ
ಮಂಜೇಶ್ವರ, ಅ.19: ಉದ್ಯಾವರ ಸಾವಿರ ಜಮಾಅತ್ ಖಿದ್ಮತುಲ್ ಇಸ್ಲಾಮ್ ಕಮಿಟಿಯ ನೇತೃತ್ವದಲ್ಲಿ ಮೀಲಾದುನ್ನಬಿ ಆಚರಿಸಲಾಯಿತು.
ಅಸ್ಸೈಯದ್ ಶಹೀದ್ ವಲಿಯುಲ್ಲಾಹಿ(ಖ.)ಯವರ ದರ್ಗಾ ಶರೀಫ್ ನಲ್ಲಿ ನಡೆದ ಪ್ರಾರ್ಥನೆಯ ಬಳಿಕ ಮಸೀದಿಯ ಅಧ್ಯಕ್ಷ ಸೈಫುಲ್ಲಾ ತಂಙಳ್ ಧ್ವಜಾರೋಹಣಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.
ಬಳಿಕ ಉದ್ಯಾವರ ಸಾವಿರ ಜಮಾಅತ್ ಖತೀಬ್ ಅಬ್ದುಲ್ ಕರೀಂ ದಾರಿಮಿಯವರು ಮಸೀದಿಯ ಅಧ್ಯಕ್ಷರಿಗೆ ಧ್ವಜವನ್ನು ಹಸ್ತಾಂತರಿಸುವುದರೊಂದಿಗೆ ಮೀಲಾದ್ ರ್ಯಾಲಿಗೆ ಚಾಲನೆ ದೊರಕಿತು. ಉದ್ಯಾವರ ಜಮಾಅತಿನ ಅಧೀನದಲ್ಲಿರುವ 13 ಮೊಹಲಾಗಳನ್ನೊಳಗೊಂಡ ಮದ್ರಸಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಿತಿಯ ಪ್ರ. ಕಾರ್ಯದರ್ಶಿ ಇಬ್ರಾಹೀಂ ಬಟರ್ ಫ್ಲೈ, ಪದಾಧಿಕಾರಿಗಳಾದ ಬಶೀರ್ ಎಸ್.ಎಂ., ಮುಸ್ತಫಾ ಉದ್ಯಾವರ, ಅಬೂಬಕರ್ ಮಾಹಿನ್, ಮೊಯ್ದಿನಬ್ಬ, ಅಬ್ದುಲ್ಲ, ಅಲಿಕುಟ್ಟಿ, ಮೊಯಿಞಿ ಮೊದಲಾದವರು ಜಾಥಾಕ್ಕೆ ನೇತೃತ್ವ ನೀಡಿದ್ದರು.
Next Story