Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಜೆಪಿ ನಾಯಕರ ಟೀಕೆಯ ನಂತರ ಹೊಸ...

ಬಿಜೆಪಿ ನಾಯಕರ ಟೀಕೆಯ ನಂತರ ಹೊಸ ಜಾಹೀರಾತನ್ನು ವಾಪಸ್ ಪಡೆದ ಫ್ಯಾಬ್‍ಇಂಡಿಯಾ

ವಾರ್ತಾಭಾರತಿವಾರ್ತಾಭಾರತಿ20 Oct 2021 3:53 PM IST
share
ಬಿಜೆಪಿ ನಾಯಕರ ಟೀಕೆಯ ನಂತರ ಹೊಸ ಜಾಹೀರಾತನ್ನು ವಾಪಸ್ ಪಡೆದ ಫ್ಯಾಬ್‍ಇಂಡಿಯಾ

ಹೊಸದಿಲ್ಲಿ: ಭಾರತದ ಖ್ಯಾತ ಜವುಳಿ ಬ್ರ್ಯಾಂಡ್ ಆಗಿರುವ ಫ್ಯಾಬ್‍ಇಂಡಿಯಾ  ತನ್ನ 'ಜಶ್ನ್-ಇ-ರಿವಾಝ್' ಎಂಬ ಹೊಸ  ಸಂಗ್ರಹ ಕುರಿತಾದ ಜಾಹೀರಾತನ್ನು ಹಲವು ಬಿಜೆಪಿ ನಾಯಕರ ಟೀಕೆಗಳ ಹಿನ್ನೆಲೆಯಲ್ಲಿ ವಾಪಸ್ ಪಡೆದಿದೆ.  ಜಶ್ನ್-ಇ-ರಿವಾಝ್ ಎಂಬ ಉರ್ದು ಪದವನ್ನು ಹಿಂದುಗಳ ಹಬ್ಬ ದೀಪಾವಳಿ ಜತೆ  ಥಳಕು ಹಾಕಿ ದೀಪಾವಳಿ ಹಬ್ಬಕ್ಕೆ ಚ್ಯುತಿ ತರಲು ಯತ್ನಿಸಿದೆ ಎಂದು ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.  ಜಶ್ನ್-ಇ-ರಿವಾಝ್ ಎಂದರೆ ಸಂಪ್ರದಾಯ/ಹಬ್ಬಗಳ ಆಚರಣೆಯಾಗಿದೆ.

ಇದೀಗ ಡಿಲೀಟ್ ಆಗಿರುವ ಫ್ಯಾಬ್‍ಇಂಡಿಯಾದ  ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿತ್ತು. "ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುವ ಸಮಯದಲ್ಲಿ, ಫ್ಯಾಬ್‍ ಇಂಡಿಯಾದಿಂದ ಜಶ್ನ್-ಇ-ರಿವಾಝ್ ಸಂಗ್ರಹವು ಭಾರತೀಯ ಸಂಸ್ಕೃತಿಗೆ ಒಂದು ಸುಂದರ ಗೌರವ" ಎಂದು ಬರೆಯಲಾಗಿತ್ತು.

ವ್ಯಾಪಕ ಟೀಕೆಗಳ ನಂತರ ಜಾಹೀರಾತನ್ನು ವಾಪಸ್ ಪಡೆದಿರುವ ಫ್ಯಾಬ್‍ಇಂಡಿಯಾ ತನ್ನ ಈ  ಹೊಸ ಸಂಗ್ರಹ ದೀಪಾವಳಿ ಬಟ್ಟೆಗಳ  ಸಂಗ್ರಹವಲ್ಲ, ಬದಲು ದೀಪಾವಳಿಗಾಗಿ ʼಝಿಲ್ ಮಿಲ್ ಸೆ ದಿವಾಲಿʼ ಸಂಗ್ರಹ ಇನ್ನಷ್ಟೇ ಬಿಡುಗಡೆಗೊಳ್ಳಬೇಕು ಎಂದು ಹೇಳಿದೆ.

ಫ್ಯಾಬ್‍ಇಂಡಿಯಾದ ಜಾಹೀರಾತಿನ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರುಗಳ ಪೈಕಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಕೂಡ ಸೇರಿದ್ದಾರೆ. "ಹಿಂದು ಹಬ್ಬಗಳ ಅಬ್ರಹಾಮೀಕರಣ" ಎಂಬರ್ಥದ ಟ್ವೀಟನ್ನೂ ಅವರು ಮಾಡಿದ್ದಾರಲ್ಲದೆ ದೀಪಾವಳಿ ಹಬ್ಬ ಜಶ್ನ್ ಇ ರಿವಾಝ್ ಅಲ್ಲ ಎಂದಿದ್ದಾರೆ. ಜಾಹೀರಾತಿನ ರೂಪದರ್ಶಿಗಳು ಸಾಂಪ್ರದಾಯಿಕ ಹಿಂದು ಧಿರಿಸನ್ನು ಧರಿಸಿರಲಿಲ್ಲ ಎಂದೂ ತೇಜಸ್ವಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ ಟಿ ರವಿ ಟ್ವೀಟ್ ಮಾಡಿ "ಫ್ಯಾಬ್‍ಇಂಡಿಯಾ ಅಷ್ಟೊಂದು ಜಾತ್ಯತೀತವಾಗಿದ್ದರೆ, ಅವರಿಗೆ ಸೇವೆ ಸಲ್ಲಿಸಲಿ, ನಾವು ಬೇರೆ ಮಳಿಗೆಯನ್ನು ನೋಡುತ್ತೇವೆ" ಎಂದು ಬರೆದಿದ್ದಾರೆ. ಐಟಿ ಕ್ಷೇತ್ರದ ಟಿ ವಿ ಮೋಹನದಾಸ್ ಪೈ ಅವರು ತೇಜಸ್ವಿ ಸೂರ್ಯ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಫ್ಯಾಬ್‍ಇಂಡಿಯಾ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದೆ ಎಂದಿದ್ದಾರೆ.

ಇನ್ನೊಬ್ಬ ಬಿಜೆಪಿ ನಾಯಕ ಕಪಿಲ್ ಮಿಶ್ರಾ ತಮ್ಮ ಟ್ವೀಟ್‍ನಲ್ಲಿ "ಫ್ಯಾಬ್‍ಇಂಡಿಯಾ ಬಹಿಷ್ಕರಿಸಲು ಸಮಯ ಬಂದಿದೆ. ಅವರಿಗೆ ನಮ್ಮ ಹಣ ಪಡೆಯುವ ಅರ್ಹತೆಯಿಲ್ಲ" ಎಂದಿದ್ದಾರೆ.

ಈ ನಡುವೆ ಹಲವಾರು ಮಂದಿ ಈ ಒಂದು ಭಾರತೀಯ ಸಂಸ್ಕೃತಿಯ ಪದವನ್ನು ಬಳಸಿಕೊಂಡು ಕೋಮುವಾದೀಕರಣ ಮಾಡುತ್ತಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ʼಶಾʼ ಎನ್ನುವುದು ಪರ್ಷಿಯನ್‌ ಮತ್ತು ಉರ್ದು ಪದವಾಗಿದೆ. ಹಾಗಾದರೆ ಅಮಿತ್‌ ʼಶಾʼʼರನ್ನು ಬಹಿಷ್ಕರಿಸುತ್ತೀರೇ? ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X