ಇನ್ಸ್ ಪೆಕ್ಟರ್ ಮುಹಮ್ಮದ್ ರಫೀಕ್ ನಿಧನ
ಇನ್ಸ್ ಪೆಕ್ಟರ್ ಮುಮುಹಮ್ಮದ್ ರಫೀಕ್
ಬೆಂಗಳೂರು: ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕ್ ಡೌನ್ ವೇಳೆ ಕರುವೊಂದನ್ನು ರಕ್ಷಿಸಿ, ಅದನ್ನು ಆರೈಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಇನ್ಸ್ ಪೆಕ್ಟರ್ ರಫೀಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ರಫೀಕ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿದ್ದು, ತಕ್ಷಣ ಕುಟುಂಬಸ್ಥರು ವೈದ್ಯರನ್ನು ಮನೆಗೆ ಕರೆಸಿದ್ದರು. ಆದರೆ ಅಷ್ಟರಲ್ಲೇ ಮುಹಮ್ಮದ್ ರಫೀಕ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಲಾಕ್ ಡೌನ್ ವೇಳೆ ಅಕ್ರಮ ಗೋಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಕರುವೊಂದನ್ನು ರಕ್ಷಿಸಿ ಇನ್ಸ್ ಪೆಕ್ಟರ್ ರಫೀಕ್ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಕರೆ ತಂದು ಆರೈಕೆ ಮಾಡಿದ್ದರು. ಕರುವಿಗೆ ಅವರು ಆಹಾರ ನೀಡುವ ಫೋಟೊ ಒಂದಕ್ಕೆ ಸಾಮಾಜಿಕ ಜಾಲತಾಣದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಹಮ್ಮದ್ ರಫಿಕ್, ವರ್ಗಾವಣೆ ಆಗಿದ್ರೂ ಕರುವನ್ನ ಜೊತೆಯಲ್ಲೇ ಕರೆದೊಯ್ದು ಆಸರೆ ನೀಡಿದ್ದರು.
Next Story