Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ25 Oct 2021 12:05 AM IST
share
ಓ ಮೆಣಸೇ...

ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಫೌಂಡೇಶನ್- ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

ಆ ಫೌಂಡೇಶನ್ ಮೇಲೆ ತಾನೇ ಆರೆಸ್ಸೆಸ್ ನೋರು ರಾಮ ಮಂದಿರ ಕಟ್ಟುತ್ತಾ ಇರುವುದು.


ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿರುವ ಮುಸ್ಲಿಂ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನೀವು ಜೆಡಿಎಸ್‌ನಲ್ಲಿರೋ ಮುಸ್ಲಿಂ ನಾಯಕರ ಬ್ಯಾಂಕ್ ಬ್ಯಾಲೆನ್ಸ್ ಮುಗಿಸಿದ ಹಾಗೆ.


ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಬೇಕಾದರೆ ಆರೆಸ್ಸೆಸ್‌ನ್ನು ಹೊಗಳುವುದು ಅನಿವಾರ್ಯ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್ ನಲ್ಲಿದ್ದೋರು ಗುಟ್ಟಾಗಿ ಆರೆಸ್ಸೆಸ್ ಚಾಕರಿ ಮಾಡುತ್ತಿರುವುದು ಯಾಕೆ ?


ಆರೆಸ್ಸೆಸ್ ಮತ್ತು ಬಿಜೆಪಿ ಮುಸ್ಲಿಂ ವಿರೋಧಿಯಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮನುಷ್ಯ ವಿರೋಧಿ ಎನ್ನುವ ಆರೋಪದ ಬಗ್ಗೆ ಏನು ಹೇಳುತ್ತೀರಿ?


ಗ್ರಾಮ ವಾಸ್ತವ್ಯ ಎಂದರೆ ಬಂದ ಸಿದ್ದ, ಹೋದ ಸಿದ್ದ ಎಂಬಂತಾಗಬಾರದು - ಆರ್.ಅಶೋಕ್, ಸಚಿವ
ಅಂದರೆ, ವಾಸ್ತವ್ಯ ಹೂಡಿದ ಮನೆಯನ್ನು ಶಾಶ್ವತವಾಗಿ ತಮ್ಮ ಹೆಸರಿಗೆ ಬರೆಸಿ ಕೊಳ್ಳಬೇಕು ಎಂದೇ?


ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಹಾಗಿದೆ ಮಾಜಿ ಸಿಎಂ ಸಿದ್ದರಾಮಯ್ಯರ ಮಾತು - ಶ್ರೀರಾಮುಲು, ಸಚಿವ

ಆರೆಸ್ಸೆಸ್ ಹೇಳಿದಂತೆ ಕುಣಿದು ಕುಪ್ಪಳಿಸುತ್ತಿರುವವರ ಮಾತು.


ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ - ವಿ.ಮುರಳೀಧರನ್, ಕೇಂದ್ರ ಸಚಿವ

ಅಂಬಾನಿ, ಅದಾನಿ ಮನೆಯೊಳಗೇ ಇರಬೇಕು.


ನನ್ನ ಸೋಲಿಗೆ ಸಂಘ ಪರಿವಾರದವರ ಸಮಾಜ, ಧರ್ಮ ಒಡೆಯುವ ಕುತಂತ್ರ ಕೆಲಸ ಮಾಡಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಅವರು ಕುತಂತ್ರ ಮಾಡುತ್ತಿರುವಾಗ ನೀವು ಏನು ಮಾಡುತ್ತಿದ್ದಿರಿ?


ನನ್ನ ಆಸ್ತಿ ಹಿಂದೆ ಎಷ್ಟಿತ್ತೊ ಈಗಲೂ ಅಷ್ಟೇ ಇದೆ - ಸಿ.ಟಿ.ರವಿ, ಶಾಸಕ

ಆದುದರಿಂದ ದೇಶದ ಆರ್ಥಿಕತೆ ಕುಸಿದಿಲ್ಲ ಎಂದು ಭಾವಿಸೋಣವೇ?


ಇಂದು ರಾಜಕೀಯ ಎಂದರೆ ಗೆದ್ದು ಬಂದು ದುಡ್ಡು ಮಾಡುವುದು ಎಂಬಂತಾಗಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ನಿಮ್ಮ ಕಾಲದಲ್ಲಿ ಸೋತರೂ ದುಡ್ಡು ಮಾಡಲು ಅವಕಾಶ ಇತ್ತೇ?


ಭಾರತ ಮತ್ತು ಇಸ್ರೇಲ್ ಒಂದೇ ತರದ ಭಯೋತ್ಪಾದನೆಯನ್ನು ಎದುರಿಸುತ್ತಿವೆ? -ಎಸ್.ಜೈ.ಶಂಕರ್, ಕೇಂದ್ರ ಸಚಿವ

ಹೌದು, ಪ್ರಭುತ್ವದಿಂದ ಪ್ರಾಯೋಜಿಸಲ್ಪಟ್ಟ ಭಯೋತ್ಪಾದನೆ.


ನನ್ನ ಜೀವನ ತೆರೆದ ಪುಸ್ತಕ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಜನರ ಪಾಲಿಗೆ ತೊರೆದ ಪುಸ್ತಕ.


ನಳಿನ್‌ಕುಮಾರ್ ಕಟೀಲು ಶತಮಾನದ ಶ್ರೇಷ್ಠ ಅವಿವೇಕಿ - ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ

ಅವಿವೇಕಿ ಆದರೆ ಏನಾಯಿತು, ಶ್ರೇಷ್ಠ ಎಂದು ಗುರುತಿಸಿದರಲ್ಲ ಅಷ್ಟು ಸಾಕು ಎಂದರಂತೆ ಕಟೀಲು.


ಆರೆಸ್ಸೆಸ್‌ನ ಗೋಮುಖ ವ್ಯಾಘ್ರ ಮನಸ್ಥಿತಿ ಬಹಿರಂಗಪಡಿಸುವ ದೃಢತೆ, ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಇರುತ್ತಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ - ರಮೇಶ್‌ಕುಮಾರ್, ಶಾಸಕ

ಆಗ ಕಾಂಗ್ರೆಸ್‌ನೊಳಗಿರುವ ಆರೆಸ್ಸೆಸ್‌ನ ಮುಖಗಳಿಗೆ ಸಮಸ್ಯೆ ಆಗುತ್ತಿತ್ತು.


ಪ್ರಧಾನಿ ಮೋದಿ ಮಹಿಳೆಯರಿಗೆ ಒಂದಲ್ಲ ಒಂದು ಸೌಲಭ್ಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ - ಯಡಿಯೂರಪ್ಪ, ಮಾಜಿ ಸಿಎಂ

ಯಾವ ದೇಶದ ಮಹಿಳೆಯರಿಗೆ ಎನ್ನುವ ಮಾಹಿತಿ ನೀಡಿದ್ದರೆ ಒಳ್ಳೆಯದಿತ್ತು.


ಶ್ರೀರಾಮ ಮಂದಿರದ ನಿರ್ಮಾಣದ ಲೆಕ್ಕವನ್ನು ಹಾದಿ ಬೀದಿಯಲ್ಲಿ ಕೇಳಬೇಡಿ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಮಠಕ್ಕೆ ಬಂದು ಕೇಳಿದರೆ ಕೊಡುತ್ತೀರಾ?


ಕಾಂಗ್ರೆಸ್ ತಪ್ಪಿನಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ - ಎಚ್.ಡಿ.ರೇವಣ್ಣ, ಶಾಸಕ

ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸಿದ್ದು ಸಣ್ಣ ತಪ್ಪು ಅಲ್ಲ ಬಿಡಿ.


ನಮ್ಮದು ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಜಾತಿಯೇ ನೀತಿ ಆಗಿರಬೇಕು.


ಭಾರತದ ಸಂವಿಧಾನಕ್ಕೆ ಬುದ್ಧನೇ ಸ್ಫೂರ್ತಿ - ನರೇಂದ್ರ ಮೋದಿ, ಪ್ರಧಾನಿ
ಪತ್ನಿಯನ್ನು ತೊರೆಯಲು ಬುದ್ಧನೇ ಸ್ಫೂರ್ತಿ ಎನ್ನದಿರಿ.


ನಾಯಕನಾದವನು ಹೇಗಿರಬೇಕು ಎಂಬುದನ್ನು ಸಿಎಂ ಬೊಮ್ಮಾಯಿಯವರನ್ನು ನೋಡಿ ಮಾಜಿ ಸಿಎಂ ಸಿದ್ದರಾಮಯ್ಯ ಕಲಿಯಲಿ - ಶ್ರೀನಿವಾಸಪ್ರಸಾದ್, ಸಂಸದ

ಹೇಗಿರಬಾರದು ಎನ್ನುವುದನ್ನು ನಿಮ್ಮನ್ನು ನೋಡಿ ಕಲಿಯಬಹುದು.


ಜೀವನದಲ್ಲಿ ಒಮ್ಮೆಯಾದರೂ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ ಅಂಗಡಿಯ ಮುಂದೆ ನಿಂತು ರೇಶನ್ ಖರೀದಿಸಿದ್ದರೆ ಬಡವರ ಕಷ್ಟ ಅರ್ಥವಾಗುತ್ತಿತ್ತು - ರಣದೀಪ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ

ಕಾಂಗ್ರೆಸ್ ರೇಷನ್‌ನಿಂದ ಹೊಟ್ಟೆ ಹೊರೆಯುತ್ತಿರುವ ನಿಮಗೂ ಅನ್ವಯ ಆಗುತ್ತದೆ, ಈ ಮಾತು.


ರಾಜಕಾರಣಿಗಳು ಯಾವುದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ವೈಯಕ್ತಿಕವಾಗಿ ಬೈದಾಡಿಕೊಳ್ಳುವುದು ಸರಿಯಲ್ಲ - ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ

ಅದೆಲ್ಲ, ಕಾರ್ಯಕರ್ತರಿಗೆ ಬಿಟ್ಟು ಬಿಡಿ ಎನ್ನುತ್ತಿರಬೇಕು.


ಕಾಂಗ್ರೆಸ್‌ನಲ್ಲೂ ಆರೆಸ್ಸೆಸ್‌ನವರಿದ್ದಾರೆ - ಕೆ.ಸಿ.ನಾರಾಯಣಗೌಡ, ಸಚಿವ
ಆರೆಸ್ಸೆಸ್ ಕಾಂಗ್ರೆಸ್ ಆಸ್ತಿ ಎನ್ನುವ ದಿನ ದೂರ ಇಲ್ಲ.


ಎಚ್.ಡಿ.ಕುಮಾರಸ್ವಾಮಿ ಆರೆಸ್ಸೆಸ್‌ನ್ನು ಕುರುಡರು ಆನೆಯನ್ನು ನೋಡಿದಂತೆ ನೋಡುತ್ತಾರೆ - ನಳಿನ್‌ಕುಮಾರ್ ಕಟೀಲು, ಸಂಸದ

ಆನೆ ಅಲ್ಲ, ತೋಳ ಎನ್ನುವುದು ಕಚ್ಚಿದಾಗ ಗೊತ್ತಾಗುತ್ತೆ ಬಿಡಿ.


ರಾಹುಲ್ ಗಾಂಧಿ ಕೈಯಲ್ಲಿ ದೇಶದ ಆಡಳಿತ ಇರುತ್ತಿದ್ದರೆ ಕೊರೋನದ ಸ್ಥಿತಿ ಊಹಿಸುವುದಕ್ಕೂ ಸಾಧ್ಯವಿರಲಿಲ್ಲ - ರಘುಪತಿ ಭಟ್, ಶಾಸಕ

ಹೌದು, ಕೊರೋನದ ಸ್ಥಿತಿ ಊಹಿಸುವುದಕ್ಕಾಗಿ ಮೋದಿ ಆಡಳಿತ ಬರಬೇಕಾಯಿತು.


ನಾನು ಇಲ್ಲಿಯೇ ಹ್ಯಾಪಿಯಾಗಿದ್ದೇನೆ, ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ನೀವು ಇಲ್ಲಿದ್ದರೆ ರಾಜ್ಯ ಕಾಂಗ್ರೆಸ್‌ನೊಳಗೆ ಕೆಲವರು ಹ್ಯಾಪಿ ಆಗಿರುವುದು ಕಷ್ಟ.


ದೇಶದ ಜನತೆ ಮಾತ್ರವಲ್ಲ, ಇಡೀ ಜಗತ್ತೇ ಪ್ರಧಾನಿ ಮೋದಿಯ ಆಡಳಿತವನ್ನು ಮೆಚ್ಚಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
 ಅನ್ಯ ಗ್ರಹಗಳಿಂದಲೂ ಮೆಚ್ಚುಗೆಯ ಮಹಾ ಪೂರವೇ ಹರಿದು ಬಂದಿದೆಯಂತೆ.

share
ಪಿ.ಎ.ರೈ
ಪಿ.ಎ.ರೈ
Next Story
X