Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಶಾರೂಖ್ ಮ್ಯಾನೇಜರ್ ಜೊತೆ 25ಕೋಟಿ ರೂ....

ಶಾರೂಖ್ ಮ್ಯಾನೇಜರ್ ಜೊತೆ 25ಕೋಟಿ ರೂ. ಬೇಡಿಕೆಯಿರಿಸಿ 18ಕೋಟಿ ರೂ.ಗೆ 'ಸೆಟ್ಲ್' ಮಾಡಲುದ್ದೇಶಿಸಿದ್ದ ಗೋಸಾವಿ !

ಸ್ಫೋಟಕ ಮಾಹಿತಿ ನೀಡಿದ ಪ್ರಕರಣದ ಸಾಕ್ಷಿದಾರ

ವಾರ್ತಾಭಾರತಿವಾರ್ತಾಭಾರತಿ26 Oct 2021 11:49 AM IST
share
ಶಾರೂಖ್ ಮ್ಯಾನೇಜರ್ ಜೊತೆ 25ಕೋಟಿ ರೂ. ಬೇಡಿಕೆಯಿರಿಸಿ 18ಕೋಟಿ ರೂ.ಗೆ ಸೆಟ್ಲ್ ಮಾಡಲುದ್ದೇಶಿಸಿದ್ದ ಗೋಸಾವಿ !

ಮುಂಬೈ: ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಅವರ ಮುಂದೆ ರೂ. 25 ಕೋಟಿಗೆ ಬೇಡಿಕೆಯಿರಿಸಲು ಆರ್ಯನ್ ಖಾನ್ ಜತೆಗೆ ವೈರಲ್ ಸೆಲ್ಫಿಯಲ್ಲಿ ಕಾಣಿಸಿಕೊಂಡಿದ್ದ 'ಖಾಸಗಿ ತನಿಖಾಕಾರ' ಕಿರಣ್ ಪಿ ಗೋಸಾವಿ ಉದ್ದೇಶಿಸಿದ್ದರೆಂಬ ಸ್ಫೋಟಕ ಮಾಹಿತಿಯನ್ನು ಆರ್ಯನ್ ಖಾನ್ ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ತನ್ನನ್ನು ಗೋಸಾವಿ ಯ ಬಾಡಿಗಾರ್ಡ್ ಎಂದು ಪರಿಚಯಿಸಿಕೊಳ್ಳುವ ಪ್ರಭಾಕರ್ ಸೈಲ್, ತಮ್ಮ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಶಾರುಖ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಅವರ ಮುಂದೆ ರೂ. 25 ಕೋಟಿಗೆ ಬೇಡಿಕೆಯಿರಿಸಿ ಕೊನೆಗೆ ರೂ. 18 ಕೋಟಿಗೆ ಸೆಟ್ಲ್ ಮಾಡಲು ಗೋಸಾವಿ ಉದ್ದೇಶಿಸಿದ್ದರು, ಈ ಹಣದಿಂದ ರೂ. 8 ಕೋಟಿಯನ್ನು ಎನ್‍ಸಿಬಿ ವಲಯ ನಿರ್ದೇಶಕರಾದ ಸಮೀರ್ ವಾಂಖೇಡೆಗೆ ನೀಡಲಿತ್ತು, ಎಂದೂ ಸೈಲ್ ಹೇಳಿದ್ದಾರೆ.

ಕ್ರೂಸ್ ಹಡಗಿನ ಮೇಲೆ ದಾಳಿ ನಡೆದು ಆರ್ಯನ್ ಖಾನ್ ಮತ್ತಿತರರನ್ನು ಬಂಧಿಸಿದ ನಂತರ ವಾಂಖೇಡೆ ಸಹಿತ ಎನ್‍ಸಿಬಿ ಅಧಿಕಾರಿಗಳು ಅಕ್ಟೋಬರ್ 3ರ ಮುಂಜಾನೆ ತನಗೆ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಹೇಳಿದ್ದರು ಎಂದೂ ಸೈಲ್ ಹೇಳಿಕೊಂಡಿದ್ದಾರೆ.

"ನಾನೊಬ್ಬ ಸಾಕ್ಷಿ ಎಂದು ನನಗೆ ತಿಳಿದಿರಲಿಲ್ಲ. ಒಳಗೆ ಬಂದು ಕಾಗದಗಳಲ್ಲಿ ಸಹಿ ಹಾಕುವಂತೆ ಹೇಳಿದಾಗ ನಾನು ಎನ್‍ಸಿಬಿ ಕಚೇರಿಗೆ ಹೋದೆ. ಖಾಲಿ ಹಾಳೆಗಳಿಗೆ ಸಹಿ ಹಾಕಲು ನಾನು ವಿರೋಧಿಸಿದಾಗ, ಸಹಿ ಹಾಕಿ ಏನಾಗುವುದಿಲ್ಲ ಎಂದು ವಾಂಖೇಡೆ ಹೇಳಿದರು. ಕಿರಣ್ ಗೋಸಾವಿ ಕೂಡ ನನಗೆ ಸಹಿ ಹಾಕುವಂತೆ ಸೂಚಿಸಿದರು. ಅಲ್ಲಿ ಹಲವು ಅಧಿಕಾರಿಗಳಿದ್ದರು. ನಾನು ಹೇಗೆ ಅವರ ಜತೆ ಜಗಳವಾಡಬಹುದಾಗಿತ್ತು?,'' ಎಂದು ಸೈಲ್ ಪ್ರಶ್ನಿಸಿದ್ದಾರೆ.

ಕನಿಷ್ಠ 9 ಖಾಲೆ ಹಾಳೆಗಳಿಗೆ ನನ್ನ ಸಹಿ ಪಡೆದುಕೊಂಡಿದ್ದಾರೆ, ಆಧಾರ್ ಕಾರ್ಡಿನ ಪ್ರತಿಯನ್ನೂ ಪಡೆದುಕೊಂಡಿದ್ದಾರೆ, ಹಾಳೆಗಳಿಗೆ ಸಹಿ ಹಾಕಿದ ನಂತರವಷ್ಟೇ ಆರ್ಯನ್ ಖಾನ್ ಅವರನ್ನು ನೋಡಿದೆ. ಎನ್‍ಸಿಬಿ ಕಚೇರಿಯಲ್ಲಿ ಗೋಸಾವಿ ಅವರು ಆರ್ಯನ್ ಪಕ್ಕದಲ್ಲಿ ಕುಳಿತುಕೊಂಡ ಸಂದರ್ಭದ ವೀಡಿಯೋವನ್ನು ನಾನೇ ತೆಗೆದಿದ್ದು,'' ಎಂದು ಸೈಲ್ ಹೇಳಿದ್ದಾರೆ.

ಗೋಸಾವಿ, ಸ್ಯಾಮ್ ಡಿ'ಸೋಜಾ ಹಾಗೂ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಒಂದು 'ಡೀಲ್'ಗೆ ಬರಲು ಕಾರಿನೊಳಗಡೆ ಮಾತುಕತೆ ನಡೆಸಿದ್ದರು. ಪೂಜಾ ಸಾಕಷ್ಟು ಖ್ಯಾತಿ ಹೊಂದಿದ್ದಾರೆ. ಆಕೆಯನ್ನು ನೋಡಿದ ನಂತರ ಆಕೆಯ ಹೆಸರು ಗೂಗಲ್ ಸರ್ಚ್ ಮಾಡಿದ್ದೆ,'' ಎಂದೂ ಅವರು ಹೇಳಿದ್ದಾರೆ.

ಗೋಸಾವಿ ಅವರು ಫೋನ್‍ನಲ್ಲಿ, ಸ್ಯಾಮ್ ಜತೆಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದೆ. "ನಾವು ಎಸ್‍ಆರ್ ಕೆ ಮ್ಯಾನೇಜರ್ ಅವರಿಂದ ರೂ. 25 ಕೋಟಿಗೆ ಬೇಡಿಕೆಯಿರಿಸಬೇಕು, ರೂ. 18 ಕೋಟಿಗೆ ಸೆಟ್ಲ್ ಮಾಡಬೇಕು ಹಾಗೂ ರೂ 8 ಕೋಟಿ ವಾಂಖೇಡೆಗೆ ನೀಡಿ ಉಳಿದಿದ್ದನ್ನು ಹಂಚಿಕೊಳ್ಳಬೇಕು,'' ಎಂದಿದ್ದಾರೆ.

ದಾಳಿ ನಡೆದ ಮರುದಿನ ಅಕ್ಟೋಬರ್ 3ರಂದ ಮಹಾಲಕ್ಷಿ ಪ್ರದೇಶದಿಂದ ರೂ. 50 ಲಕ್ಷ ಸಂಗ್ರಹಿಸುವಂತೆ ಸೂಚಿಸಲಾಯಿತು, ಅಲ್ಲಿಗೆ ತೆರಳಿದಾಗ ಇಬ್ಬರು ವ್ಯಕ್ತಿಗಳು ಒಂದು ಚೀಲ ನೀಡಿದರು. ಅದನ್ನು ಗೋಸಾವಿ ಮತ್ತವರ ಪತ್ನಿಗೆ ನೀಡಿದ ನಂತರ ಅವರು ತೆರಳಿದರು. ಆತ ನನಗೆ ವೇತನ ನೀಡಿಲ್ಲ, ಮಕ್ಕಳ ಶಾಲಾ ಶುಲ್ಕಕ್ಕೆಂದು ನೀಡಿದ ಚೆಕ್ ಕೂಡ ಬೌನ್ಸ್ ಆಗಿದೆ, ಗೋಸಾವಿಯನ್ನು ಅಕ್ಟೋಬರ್ 7ರಂದು ಕೊನೆಯ ಬಾರಿ ನೋಡಿದ್ದೆ, ಅಕ್ಟೋಬರ್ 21ರಂದು ಅವರು ಕರೆ ಮಾಡಿ ಶೀಘ್ರ ಶರಣಾಗುವುದಾಗಿ ಹೇಳಿದ್ದರು,'' ಎಂದು ಸೈಲ್ ಹೇಳಿದ್ದಾರೆ.

ತಮ್ಮ ಬಳಿ ಇನ್ನಷ್ಟು ಸಾಕ್ಷ್ಯಗಳಿವೆ, ಅವುಗಳನ್ನು ಶೀಘ್ರ ಮುಂದಿಡುವುದಾಗಿಯೂ ಹೇಳಿದ ಸೈಲ್ "ನಾನು ಪ್ರಾಮಾಣಿಕ ಆದರೆ ಯಾರೂ ನನ್ನನ್ನು ಬೆಂಬಲಿಸುತ್ತಿಲ್ಲ, ಅದಕ್ಕೆ ರಕ್ಷಣೆ ಕೋರಿದ್ದೇನೆ,'' ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X