ಅ.29ರಂದು ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ವಿದ್ಯಾ ಸಮುಚ್ಚಯ ಉದ್ಘಾಟನೆ
ಕೈಕಂಬ : ಎಸ್ಕೆಎಸ್ಸೆಸ್ಸೆಫ್ ಗುರುಪುರ ಕೈಕಂಬ ವಲಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಶುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು, ಅಲ್-ಬಿರ್ರ್ ಇಸ್ಲಾಮಿಕ್ ಸ್ಕೂಲ್, ಅಲ್-ಮದರಸತುಲ್ ಅಸ್ರಾರುದ್ದೀನ್ ಹಾಗು ಮಿತಬೈಲ್ ಉಸ್ತಾದ್ ಹಿಫ್ಲ್ ಕಾಲೇಜು ವಿದ್ಯಾ ಸಮನ್ವಯ ಪಾಲನೆಯ ಕಟ್ಟಡದ ಉದ್ಘಾಟನೆಯು ಅ. 29ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷರಾದ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್, ಕೈಕಂಬ ವಲಯ ಅಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ, ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಸೇರಿದಂತೆ ಸಾಮಾಜಿಕ, ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಕೈಕಂಬ ವಲಯ ಕಾರ್ಯದರ್ಶಿ ಆರಿಫ್ ಕಮ್ಮಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾ ಸಮುಚ್ಚಯ ಉದ್ಘಾಟನಾ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಕೈಕಂಬ ಅಲ್ ಬಿರ್ರ್ ಸ್ಕೂಲ್ ಚೆಯರ್ಮೆನ್ ಆಸಿಫ್ ಹಾಜಿ ಸುರಲ್ಪಾಡಿ ಕರೆ ನೀಡಿದ್ದಾರೆ.