ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ದೂರು
ಮಂಗಳೂರು, ಅ.29: ಶಕ್ತಿನಗರದ ದತ್ತ ನಗರದಲ್ಲಿ ಚೆಕ್ ಪಾಯಿಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕರ್ತವ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಸವಾರರು ಅಡ್ಡಿ ಉಂಟು ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿ ಹಾಗೂ ನೀಲಿ ಬಣ್ಣದ ಸ್ಕೂಟರ್ನಲ್ಲಿ ಹಿಂಬದಿಯಲ್ಲಿ ಓರ್ವನನ್ನು ಕುಳ್ಳಿರಿಸಿಕೊಂಡು ವೇಗವಾಗಿ ಬರುವುದನ್ನು ಕಂಡ ಪೊಲೀಸರು ವಾಹನ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆಗ ಸ್ಕೂಟರ್ ಸವಾರ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದು ಹೆಡ್ ಕಾನ್ಸ್ಟೇಬಲ್ ಮಂಜುನಾಥ ಹೆಗ್ಡೆ ಅವರ ಬಲ ಕೈ ಮತ್ತು ಕಾಲಿಗೆ ತಾಗಿಸಿಕೊಂಡು ಪದವಿನಂಗಡಿ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story





