ತಮಿಳುನಾಡು: ನೀಟ್ ಫಲಿತಾಂಶದ ಆತಂಕ, ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆ

ಚೆನ್ನೈ: ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶದ ಬಗ್ಗೆ ಆತಂಕಗೊಂಡ 20ರ ವಯಸ್ಸಿನ ವೈದ್ಯಕೀಯ ಆಕಾಂಕ್ಷಿ ಕೊಯಂಮತ್ತೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೊಯಂಮತ್ತೂರು ಸಮೀಪದ ಸಂಗರಾಯಪುರಂನ ಕೆ.ಕೀರ್ತಿವಾಸನ್ ಅವರು ಸೆಪ್ಟೆಂಬರ್ನಲ್ಲಿ ಮೂರನೇ ಬಾರಿಗೆ ನಡೆದ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದು,ಒಂದೆರಡು ದಿನಗಳಲ್ಲಿ ಫಲಿತಾಂಶ ಬರುವ ನಿರೀಕ್ಷೆಯಿದೆ.
ಪೊಲೀಸರ ಪ್ರಕಾರ, ಯುವಕ 2019 ಹಾಗೂ 2020 ರಲ್ಲಿ ಪರೀಕ್ಷೆಯನ್ನು ತೆಗೆದುಕೊಂಡಿದ್ದ. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣಗಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಉತ್ತರ ಕೀಯನ್ನು ಪ್ರಕಟವಾದ ಬಳಿಕ ಯುವಕ ಅಸಮಾಧಾನಗೊಂಡಿದ್ದ ಹಾಗೂ ಈ ವರ್ಷವೂ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದಿರಬಹುದು ಎಂದು ತನ್ನ ಪೋಷಕರಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
Next Story