ಉಡುಪಿ: ಜಿಲ್ಲೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ
ಉಡುಪಿ, ಅ.30: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಸಿಯ 30 ಅಧಿಸೂಚಿತ ಸಂಸ್ಥೆಗಳಿಗೆ ಮರು ಪ್ರಕಟಣೆ ಹಾಗೂ ಹೊಸದಾಗಿ ಬಿ ಪ್ರವರ್ಗ 1 ಮತ್ತು ಸಿ ಪ್ರವರ್ಗದ 21 ಅಧಿಸೂಚಿತ ಸಂಸ್ಥೆಗಳು/ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ 25 ವರ್ಷ ವಯಸ್ಸಿನ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ / ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನವೆಂಬರ್ 29ರೊಳಗೆ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಸಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ ಪಂದುಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಹೆರ್ಗದ ಪರೀಕ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಗ್ರಾಮದ ಶ್ರೀಸರಸ್ವತಿ ನಾರಾಯಣ ದೇವಸ್ಥಾನ, ಹೊಸಾಳ ಬಪ್ಪಲಾಪುರ ಶ್ರೀವಿನಾಯಕ ದೇವಸ್ಥಾನ, ಚಾಂತಾರು ಶ್ರೀಗಂಗಾಧರ ದೇವಸ್ಥಾನ, ಹೊಸಾಳ ಗ್ರಾಮದ ಮಾಣಿಗರ ಕೇರಿಯ ಸೋಮನಾಥೇಶ್ವರ ದೇವಸ್ಥಾನ, ಗುಂಡ್ಮಿಯ ಮಾಣಿ ಚೆನ್ನಕೇಶವ ದೇವಸ್ಥಾನ, ಕಚ್ಚೂರಿನ ಶ್ರೀಬನ್ನಿ ಮಹಾಕಾಳಿ ದೇವಸ್ಥಾನ, ವಾರಂಬಳ್ಳಿ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಹಾಗೂ ಕೂರಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಪೆಜಮಂಗೂರಿ ನ ಶ್ರೀವೀರಭದ್ರ ದೇವಸ್ಥಾನ, ಚೇರ್ಕಾಡಿ ಕನ್ನಾರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ.
ಕುಂದಾಪುರ ತಾಲೂಕಿನ ಮೊಳ್ಳಹಳ್ಳಿಯ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಪ್ಪಿನಕುದ್ರುನ ಶ್ರೀವಿನಾಯಕ ದೇವಸ್ಥಾನ, ಸೇನಾಪುರದ ಬೆಳನಮಕ್ಕಿಯ ಶ್ರೀ ಮಹಾಗಣಪತಿ ದೇವಸ್ಥಾನ, ಶಂಕರನಾರಾಯಣದ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಶ್ರೀಕೂಡಿಗೆ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಮಚ್ಚಟ್ಟುನ ಶ್ರೀ ವಿನಾಯಕ ದೇವಸ್ಥಾನ ಹಾಗೂ ಕಂದಾವರದ ಶ್ರೀರಾಮಾನುಜ ಹನುಮಂತ ದೇವಸ್ಥಾನ, ಕೋಟೇಶ್ವರದ ಶ್ರೀಮಹಾದೇವಿ ಮಾರಿಯಮ್ಮ ದೇವಸ್ಥಾನ.
ಬೈಂದೂರು ತಾಲೂಕಿನ ನಾವುಂದದ ಅರೆಹೊಳೆ ಶ್ರೀವಿನಾಯಕ ದೇವಸ್ಥಾನ, ಹೆರಂಜಾಲುನ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ನಾಡದ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಬೈಂದೂರಿನ ಬಡಾಕೆರೆ ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನ, ಅರೆಕಲ್ಲುನ ಬಿಜೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ.
ಕಾರ್ಕಳ ತಾಲೂಕಿನ ಬೆಳಂಜೆಯ ಶ್ರೀ ಮಷಮರ್ಧಿನಿ ದೇವಸ್ಥಾನ, ಬೋಳದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥ ದೇವಸ್ಥಾನ, ಹೆಬ್ರಿ ತಾಲೂಕಿನ ಕೆರೆಬೆಟ್ಟುನ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಶಿವಪುರದ ದುರ್ಗಾಪರಮೇಶ್ವರಿ ದೇವಸ್ಥಾನ.
ಬಿ ಪ್ರವರ್ಗದ ದೇವಸ್ಥಾನಗಳು: ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.
ಸಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ ಶಿರೂರು ವಿಷ್ಣುಮೂರ್ತಿ ದೇವ ವೆಂಕಟರಮಣ, ಶ್ರೀಅಬ್ಬಗ-ದಾರಗ ಭೂತ ದೇವಸ್ಥಾನ, ಪುತ್ತೂರು ಶ್ರೀ ಸದಾಶಿವ ದೇವಸ್ಥಾನ ಮತ್ತು ನಿಟ್ಟೂರಿನ ವಿಷ್ಣುಮೂರ್ತಿ ದೇವಸ್ಥಾನ, ಶಿವಳ್ಳಿಯ ಬುಡ್ನಾರು ವಿಷ್ಣುಮೂರ್ತಿ ದೇವಸ್ಥಾನ, ತೋನ್ಸೆಯ ಹೂಡೆ ಶ್ರೀಹನುಮಂತ ದೇವಸ್ಥಾನ ಮತ್ತು ಶ್ರೀ ಖಂಡಿಗೆ ವಿನಾಯಕ ದೇವಸ್ಥಾನ, ಕೊಡವೂರಿನ ಕಂಬ್ಲಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ.
ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಸೂರ್ಯಬೆಟ್ಟುವಿನ ಶ್ರೀವಿನಾಯಕ ದೇವಸ್ಥಾನ, ಕಚ್ಚೂರಿನ ಶ್ರೀಬಾರಕೂರು ಅರಮನೆ ಹನುಮಂತ ದೇವಸ್ಥಾನ ಮತ್ತು ಹನೆಗಳ್ಳಿ ಹರಪ್ಪಳ್ಳಿ ಶ್ರೀವಿನಾಯಕ ದೇವಸ್ಥಾನ, ಕಾವಡಿ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಪಾಂಡೇಶ್ವರ ಶ್ರೀ ಶಂಕರನಾರಾಯಣ ದೇವಸ್ಥಾನ, ಕಾಪು ತಾಲೂಕಿನ ಏಣಗುಡ್ಡೆ ಶ್ರೀ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನ, ತೆಂಕ ಶ್ರೀವೀರಭದ್ರ ದೇವಸ್ಥಾನ. ಕುಂದಾಪುರ ತಾಲೂಕಿನ ಹಾಲಾಡಿ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನ, ದರ್ಳ್ಳಿ-ಮಂಡಳ್ಳಿಯ ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಉಪ್ಪಿನಕುದ್ರು ಶ್ರೀವಾಸುದೇವ ದೇವಸ್ಥಾನ.
ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮಸ್ಕಿ ಗಫಲಾಲಕೃಷ್ಣ ಮತ್ತು ವಿನಾಯಕ ದೇವಸ್ಥಾನ, ಕಂಬದಕೋಣೆ ಶ್ರೀಕೊಕ್ಕೇಶ್ವರ ದೇವಸ್ಥಾನ. ಕಾರ್ಕಳ ತಾಲೂಕಿನ ಕಾಂತಾವರ ಕೆಪ್ಲಾಜೆ ಮಹಾಮ್ಮಾಯಿ ದೇವಿಗುಡಿ, ಈದು ಗ್ರಾಮದ ಶ್ರೀಮುಜಿಲ್ಲಾಯ ದೈವಸ್ಥಾನ.







