Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ1 Nov 2021 12:05 AM IST
share
ಓ ಮೆಣಸೇ...

ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅಡ್ಡಿ ಉಂಟುಮಾಡಲು ಇನ್ನು ಯಾರಿಂದಲೂ ಸಾಧ್ಯವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ

ಹೌದು, ನಿಮ್ಮ್ಮಬ್ಬರಿಂದ ಮಾತ್ರ ಅದು ಸಾಧ್ಯವಾಗಿರುವುದು.


ಜನರ ಸಾವು, ನೋವುಗಳನ್ನು ಸಂಭ್ರಮಿಸುವ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ - ಬಿ.ಕೆ.ಹರಿಪ್ರಸಾದ್, ಶಾಸಕ

ಸಾವು ನೋವುಗಳು ಮತಗಳನ್ನು ತಂದು ಕೊಡುತ್ತವೆ ಎಂದ ಮೇಲೆ ಸಂಭ್ರಮ ಸಹಜ ತಾನೇ.


ಕೋವಿಡ್ ಸಂದರ್ಭದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಬಹುಶಃ ಲಾಕ್‌ಡೌನ್ ಸಂದರ್ಭದಲ್ಲಿ ಹಸಿವಿನಿಂದ ಸತ್ತಿರಬೇಕು.


ಅಧಿಕಾರ ಇರಲಿ, ಬಿಡಲಿ ಯಡಿಯೂರಪ್ಪ ರಾಜಾಹುಲೀನೆ- ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ

ಹಲ್ಲು, ಉಗುರು ಇಲ್ಲದ ಹುಲಿ.


ನಮ್ಮ ಪಕ್ಷದ ಲಾಭ ಪಡೆದುಕೊಂಡವರು ಯಾರೂ ಈಗ ನಮ್ಮಂದಿಗಿಲ್ಲ, ಎಲ್ಲ ಹಣ, ಅಧಿಕಾರದ ಬೆನ್ನುಹತ್ತಿ ಹೋಗಿದ್ದಾರೆ- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿ, ಕಾಂಗ್ರೆಸ್‌ನಿಂದ ನೀವು ಲಾಭ ಪಡೆದುಕೊಂಡ ಹಾಗೆ.


ದೇಶದಲ್ಲಿ ಆಗಲಿ, ರಾಜ್ಯದಲ್ಲೇ ಆಗಲಿ ಬಿಜೆಪಿಗೆ ಯಾವ ಪಕ್ಷದೊಂದಿಗೂ ಮೈತ್ರಿಮಾಡಿಕೊಳ್ಳುವ ಅಗತ್ಯವಿಲ್ಲ - ಈಶ್ವರಪ್ಪ, ಸಚಿವ

ಮೈತ್ರಿಗಿಂತ ದ್ವೇಷದಲ್ಲೇ ಹೆಚ್ಚು ನಂಬಿಕೆ ಇರಬೇಕು.


ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚ್ಚಿರುವುದು ನಿಜ - ಕುಮಾರಸ್ವಾಮಿ, ಮಾಜಿ ಸಿಎಂ

ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ನಂಬಿದ ಜನರನ್ನೇ ಕಚ್ಚಿದವರಲ್ಲವೇ ನೀವು ?


ಬೇರೆ ದೇಶದಿಂದಲೇ ಚೀನಾಕ್ಕೆ ಡೆಲ್ಟಾ ರೂಪಾಂತರಿ ಕಾಲಿಟ್ಟಿದೆ - ವು ಲಿಯಾಂಗ್ ಯು, ಚೀನಾ ಆರೋಗ್ಯ ಆಯೋಗದ ಅಧಿಕಾರಿ

ಹೌದು, ಚೀನಾದಲ್ಲಿ ತಯಾರಾದ ವೈರಸ್ ಆಗಿದ್ದಿದ್ದರೆ ಇಷ್ಟು ಸಮಯ ಬಾಳಿಕೆ ಬರುತ್ತಿರಲಿಲ್ಲ.


ಒಂದು ಕಾಲದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿ ಸಾಕುವ ಸರಕಾರ ಇತ್ತು. ಆದರೆ ಈಗ ಕಾಲ ಬದಲಾಗಿದೆ - ಸಿ.ಟಿ.ರವಿ, ಶಾಸಕ

ಈಗ ಪಾಕಿಸ್ತಾನಕ್ಕೆ ಖುದ್ದು ಹೋಗಿ ಬಿರಿಯಾನಿ ತಿಂದು ಬರುವ ಸರಕಾರ ಬಂದಿದೆ ಅಷ್ಟೇ.


ಪಂಜಾಬಿನಲ್ಲೊಬ್ಬ, ಕರ್ನಾಟಕದಲ್ಲೊಬ್ಬ ಸಿದ್ದು ಇದ್ದಾರೆ. ಈ ಇಬ್ಬರು ಸಿದ್ದುಗಳಿಂದ ಕಾಂಗ್ರೆಸ್ ಅವನತಿಯತ್ತ ಸಾಗಿದೆ
-ಜಗದೀಶ್ ಶೆಟ್ಟರ್, ಮಾಜಿ ಸಿಎಂ

ದೇಶ ಅವನತಿಯತ್ತ ಸಾಗುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಮಾಹಿತಿ ಇದೆಯೇ?


ಮಹಿಳೆಯರನ್ನು ರಕ್ಷಿಸುವಲ್ಲಿ ಈ ದೇಶ ಹಾಗೂ ರಾಜ್ಯ ಸಂಪೂರ್ಣ ವಿಫಲವಾಗಿದೆ - ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
*ಮಹಿಳೆಯರಿಂದ ಬಿಜೆಪಿಯನ್ನು ರಕ್ಷಿಸುವುದು ಹೇಗೆ ಎನ್ನುವುದು ಬಿಜೆಪಿ ವರಿಷ್ಠರ ಚಿಂತೆಯಾಗಿದೆ.


ಗೆಲ್ಲಲಿ ಸೋಲಲಿ ನಾವು ನಮ್ಮ ತಂಡದ ಪರವಿರಬೇಕು - ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ

ಕ್ರಿಕೆಟ್ ಗೆದ್ದಾಗ ಕ್ರಿಕೆಟ್ ಜೊತೆಗಿರುವುದು ಕ್ರಿಕೆಟಿಗೆ ಮರ್ಯಾದೆ.


ಜೆಡಿಎಸ್ ಒಂದು ಪಕ್ಷವಲ್ಲ ಅದೊಂದು ಕಂಪೆನಿ - ಶ್ರೀನಿವಾಸ ಪ್ರಸಾದ್, ಸಂಸದ

ಬಹುಶಃ ನಾಟಕ ಕಂಪೆನಿ ಇರಬೇಕು.


ಜೆಡಿಎಸ್ ಮುಗಿಸಲು ಆ ಪಕ್ಷದ ನಾಯಕರೇ ಸಾಕು - ಸಿದ್ದರಾಮಯ್ಯ, ಮಾಜಿ ಸಿಎಂ

ಅದಕ್ಕಾಗಿ ಜೆಡಿಎಸ್‌ನ್ನು ತೊರೆದು ಬಂದಿರಾ?


ಗ್ರಾಮ ಪಂಚಾಯತ್ ಸದಸ್ಯರಿಗೆ ಇರುವ ಅಧಿಕಾರ, ದಿಲ್ಲಿ ನಾಯಕರಿಗೂ ಇಲ್ಲ -ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ.ಪ್ರಧಾನ ಕಾರ್ಯದರ್ಶಿ
ಮತ್ಯಾಕೆ ನೀವು ಗ್ರಾಮ ಬಿಟ್ಟು ದಿಲ್ಲಿಗೆ ಹೋಗಿದ್ದು ?


ಕುರುಬರಿಗೆ ಸಿದ್ದರಾಮಯ್ಯರನ್ನು ಕಂಡರೆ ಇಂಗ್ಲಿಷ್ ಸಿನೆಮಾ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ಅವರು ವೇದಿಕೆ ಏರಿದ ತಕ್ಷಣ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಾರೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ

ನಿಮ್ಮನ್ನು ನೋಡಿದರೆ ‘ಹಾರರ್’ ಸಿನೆಮಾ ನೋಡಿದ ಹಾಗೆ ಆಗುತ್ತಂತೆ. ಅದಕ್ಕೆ ನೀವಿರುವಲ್ಲಿ ಜನ ಬರುವುದೇ ಇಲ್ಲ.


ಸ್ವಾತಂತ್ರಾ ನಂತರ ಸುದೀರ್ಘ ಕಾಲದವರೆಗೆ ದೇಶದ ಆರೋಗ್ಯ ಕ್ಷೇತ್ರವನ್ನು ತೀರಾ ಕಡೆಗಣಿಸಲಾಗಿತ್ತು -ನರೇಂದ್ರ ಮೋದಿ, ಪ್ರಧಾನಿ

ನೀವು ಮತ್ತು ಕೊರೋನದ ಆಗಮನ ಆರೋಗ್ಯ ಕ್ಷೇತ್ರದ ಬಗ್ಗೆ ಜನ ತಲೆ ಕೆಡಿಸುವಂತಾಯಿತು.


ಕಾಂಗ್ರೆಸ್‌ನವರು ಹುಟ್ಟು ಕುಡುಕರು - ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ

ಅಬಕಾರಿ ಇಲಾಖೆ ಲಾಭದಲ್ಲಿರುವುದೇ ಅವರಿಂದ ಅಂತೆ.


ಹಿಂದೆ 40 ವರ್ಷಗಳ ಕಾಲ ಕಾಂಗ್ರೆಸ್ ಹೇಗೆ ಕೇಂದ್ರ ಸ್ಥಾನದಲ್ಲಿತ್ತೋ ಅದೇರೀತಿ ಮುಂದಿನ ಹಲವು ದಶಕಗಳ ಕಾಲ ಬಿಜೆಪಿ ಉಳಿಯಲಿದೆ- ಪ್ರಶಾಂತ್ ಕಿಶೋರ್, ಚುನಾವಣಾ ತಂತ್ರಗಾರ

ಆದರೆ ದೇಶ ಮಾತ್ರ ಹೇಗಿರುತ್ತೆ ಎನ್ನುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ.


ಮೀಸಲಾತಿ ಕೊಡುವುದಾಗಿ ಮಾತುಕೊಟ್ಟು ತಪ್ಪಿದ್ದಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು, ನಮಗೆ 2‘ಎ’ ಮೀಸಲಾತಿ ನೀಡದಿದ್ದರೆ ಬೊಮ್ಮಾಯಿ ಸರಕಾರಕ್ಕೂ ಶಾಕ್ ಗ್ಯಾರೆಂಟಿ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಹೊಸ ಸಿಡಿ ಸಿಕ್ಕಿದೆಯೇ?


ನಾವು ಶಿಕ್ಷಕರನ್ನು ನೇಮಿಸಿದ್ದು ಪಾಠಮಾಡಲಿ ಎಂದೇ ಹೊರತು ಅವರ ಸಂಸಾರವನ್ನು ನೋಡಿಕೊಳ್ಳಲಿ ಎಂದಲ್ಲ
- ಬಿ.ಸಿ.ನಾಗೇಶ್, ಸಚಿವ

ಶಿಕ್ಷಕರಿಗೆ ಹಾಗಾದರೆ ಸಂಸಾರವನ್ನು ಹೊಂದುವ ಹಕ್ಕಿಲ್ಲವೇ?


ಬಿಟ್ ಕಾಯಿನ್ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರುಗಳನ್ನು ಗಮನಿಸಿದರೆ ಆಘಾತವಾಗುತ್ತಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಿಮ್ಮ ಆಪ್ತರ ಹೆಸರು ಅದರಲ್ಲಿದೆಯೇ?


ಮದ್ಯ ಸೇವಿಸಿದವರು ಜೈಲಿಗೆ ಹೋಗುವುದಿಲ್ಲ, ಡ್ರಗ್ಸ್ ಸೇವಿಸಿದವರನ್ನು ಜೈಲಿಗಟ್ಟಲಾಗುತ್ತಿದೆ - ರಾಮದಾಸ್ ಅಠಾವಳೆ, ಕೇಂದ್ರ ಸಚಿವ
ಅಧಿಕಾರಿಗಳ ವರ್ತನೆ ನೋಡಿದರೆ ಡ್ರಗ್ಸ್ ಸೇವಿಸಿದವರು ಯಾರು ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಉಳಿದು ಬಿಡುತ್ತದೆ.

share
ಪಿ.ಎ.ರೈ
ಪಿ.ಎ.ರೈ
Next Story
X