ರಸ್ತೆ ಅಪಘಾತ; ಸ್ಕೂಟರ್ ಸವಾರ ಮೃತ್ಯು
ಮಂಗಳೂರು, ನ.2: ನಗರದ ಕುಳೂರು ಉಲ್ಲಾಸ ನಗರದಲ್ಲಿ ಸ್ಕೂಟರೊಂದು ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಮೆಹಬೂಬ್ ಸಾಬ್ (43)ಎಂದು ಗುರುತಿಸಲಾಗಿದೆ.
ರಾತ್ರಿ 8 ಗಂಟೆ ವೇಳೆಗೆ ಕೂಳೂರು ಉಲ್ಲಾಸನಗರ 1ನೇ ಕ್ರಾಸ್ನ ತೆರೆದ ಡಿವೈಡರ್ನ ಮುಂದೆ ಹೋಗುತ್ತಿದ್ದಂತೆ ಮೆಹಬೂಬ್ ಸಾಬ್ ಅವರು ಇಳಿಜಾರು ಕಾಂಕ್ರೀಟು ತಿರುವು ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಕಾಂಕ್ರಿಟ್ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story