ಪುನೀತ್ ಮೃತಪಟ್ಟ ಸುದ್ದಿ ತಿಳಿದು ನಾಪತ್ತೆ
ಕಾರ್ಕಳ, ನ.2: ನಟ ಪುನೀತ್ ರಾಜ್ಕುಮಾರ್ ಮೃತಪಟ್ಟ ಸುದ್ದಿ ತಿಳಿದು ವ್ಯಕ್ತಿಯೊಬ್ಬರು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಅ.29ರಂದು ಮಧ್ಯಾಹ್ನ ಕಾರ್ಕಳ ಗೊಮ್ಮಟಬೆಟ್ಟದ ಬಳಿಯ ದಾನಶಾಲೆ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ದಾನಶಾಲೆ ನಿವಾಸಿ ದಿನೇಶ(56) ಎಂದು ಗುರುತಿಸ ಲಾಗಿದೆ. ಮನೆ ಸಮೀಪದ ಲಾಡ್ಜ್ ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಅ.29ರಂದು ಮಧ್ಯಾಹ್ನ ಕೆಲಸಕ್ಕೆ ಹೋಗಿ ಮನೆಗೆ ಬಂದು ಟಿವಿ ನೋಡುತ್ತಿದ್ದರು.
ಈ ವೇಳೆ ಪುನಿತ್ ರಾಜ್ ಕುಮಾರ್ ಮೃತಪಟ್ಟ ಸುದ್ದಿ ತಿಳಿದು ಮನೆಯಲ್ಲಿ ಹೇಳದೇ ಹೊರಗೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story