Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆತ್ಮಾವಲೋಕನದ ಅವಾರ್ಡ್ ಬಯಸುವ ‘ಜೈ ಭೀಮ್’

ಆತ್ಮಾವಲೋಕನದ ಅವಾರ್ಡ್ ಬಯಸುವ ‘ಜೈ ಭೀಮ್’

ರಘೋತ್ತಮ ಹೊ.ಬ., ಮೈಸೂರುರಘೋತ್ತಮ ಹೊ.ಬ., ಮೈಸೂರು4 Nov 2021 10:55 AM IST
share
ಆತ್ಮಾವಲೋಕನದ ಅವಾರ್ಡ್ ಬಯಸುವ ‘ಜೈ ಭೀಮ್’

ಖ್ಯಾತ ನಟ ಸೂರ್ಯ ಅಭಿನಯದ ಪಂಚ ಭಾಷೆಗಳಲ್ಲಿ ತಯಾರಾಗಿರುವ ‘ಜೈ ಭೀಮ್’ ಸಿನೆಮಾ ನೋಡಿದೆ. ಅದನ್ನು ಸಿನೆಮಾ ಎಂಬ ಮೂರಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಬದುಕು ಎನ್ನಬಹುದು, ವಾಸ್ತವ ಎನ್ನಬಹುದು. ಇನ್ನೊಂದಷ್ಟು ಅಕ್ಷರದ ಪದಗಳಲ್ಲಿ ಹೇಳುವುದಾದರೆ ನ್ಯಾಯ, ಸಮಾನತೆ... ಹೀಗೆ ಪದಗಳ ಸಾಲು ಸಾಲು ಚಿತ್ರಕ್ಕೆ ಅನ್ವರ್ಥವಾಗಿ ಸಿಗುತ್ತ ಸಾಗುತ್ತವೆ.

ಚಿತ್ರದ ಟೈಟಲ್ ಬಗ್ಗೆ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್‌ರ ಜೀವನ ಮತ್ತು ಘಟನೆ ಏನನ್ನೂ ಒಳಗೊಳ್ಳದ ಜನಪ್ರಿಯ ಧಾಟಿಯ ಈ ಕಮರ್ಷಿಯಲ್ ಚಿತ್ರಕ್ಕೆ ‘ಜೈ ಭೀಮ್’ ಅಲ್ಲದೆ ಬೇರೆ ಬೇರೆ ಹೆಸರುಗಳನ್ನು ಇಡಬಹುದಿತ್ತು. ಆದರೆ ಮೂಲತಃ ಓರ್ವ ಶ್ರೇಷ್ಠ ನ್ಯಾಯವಾದಿಯಾದ ಬಾಬಾಸಾಹೇಬ್ ಅಂಬೇಡ್ಕರ್‌ರ ಹೆಸರನ್ನು ಈ ಚಿತ್ರಕ್ಕೆ ಇಟ್ಟಿರುವ ಮುಖ್ಯ ಉದ್ದೇಶ ಚಿತ್ರದ ಪ್ರಧಾನ ಪಾತ್ರಧಾರಿ ವಕೀಲನಾಗಿರುವುದು. ಹಾಗೆಯೇ ಆ ಪಾತ್ರ ಬಾಬಾಸಾಹೇಬ್ ಅಂಬೇಡ್ಕರ್‌ರ ರೀತಿ ವಕೀಲದಾರಿಕೆಯ ವೃತ್ತಿಪರತೆಯ ಜೊತೆಜೊತೆಗೆ ತನ್ನಲ್ಲಿ ಇರಬಹುದಾದ ಅಪ್ರತಿಮ ದಿಟ್ಟ ನ್ಯಾಯಪರ ಹೋರಾಟದ ಕೆಚ್ಚನ್ನು ಚಿತ್ರದಲ್ಲಿ ದಾಖಲಿಸುತ್ತ ಸಾಗುತ್ತದೆ ಎಂಬುದು. ಖಂಡಿತ ಚಿತ್ರದ ವೇಗ ಮತ್ತು ಜನಪ್ರಿಯತೆಗೆ ಹಾಗೆಯೇ ವಕೀಲಿಕೆಯ ಶೈಲಿ ಮತ್ತು ಬದ್ಧತೆ ತಿಳಿದವರಿಗೆ ಈ ಟೈಟಲ್ ವಿಶೇಷ ಶಕ್ತಿ ತುಂಬುತ್ತದೆ ಎಂದರೆ ತಪ್ಪಾಗದು.

 ಕತೆ ಮತ್ತು ನಿರೂಪಣೆ ಕುರಿತು ಹೇಳುವುದಾದರೆ, ಪರಿಶಿಷ್ಟ ಬುಡಕಟ್ಟು(ಎಸ್ಟಿ) ಇಲಿ ಹಿಡಿಯುವ ತಮಿಳುನಾಡಿನ ಇರುಳರು ಎಂಬ ಸಮುದಾಯದ ಮೇಲೆ ನಡೆಯುವ ದೌರ್ಜನ್ಯದ ತಿರುಳನ್ನು ಚಿತ್ರ ಹೊಂದಿದೆ. ಇಲಿ ಹಿಡಿಯುವ ದೃಶ್ಯದ ಮೂಲಕವೇ ಆರಂಭದಲ್ಲೇ ಅದನ್ನು ತೋರಿಸುವ ಪರಿ ಚಿತ್ರವೊಂದು ಹೇಗೆಲ್ಲ ಸಮಾಜದ ಕೆಟ್ಟ ವ್ಯವಸ್ಥೆಯನ್ನು ದಿಟ್ಟವಾಗಿ ತೋರಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆ. ಒಂದು ಮಾತು, ವಾಸ್ತವ ಹೀಗೆ ತೋರಿಸುವುದು ಬಹಳ ಮುಖ್ಯ. ಚಲನಚಿತ್ರಗಳು ಏನೇನೋ ತೋರಿಸಿ ಸೆನ್ಸಾರ್ ಕಣ್ಣು ತಪ್ಪಿಸುವ ಬದಲು ಇದನ್ನು ತೋರಿಸಬೇಕು. ಏಕೆಂದರೆ ದೌರ್ಜನ್ಯ ಮಾಡುವವನಿಗೆ ಇದು ನಿನ್ನ ನಿಜ ರೂಪ ಎಂದು ತೋರಿಸಬೇಕಲ್ಲವೇ? ಅದು ಗೊತ್ತಾಗಬೇಕಲ್ಲವೇ? ‘ೈ ಭೀಮ್’ ಆ ಕೆಲಸ ಮಾಡುತ್ತದೆ.

ಮುಖ್ಯವಾಗಿ ಮೇಲ್ಜಾತಿಯವರ ಮನೆಯೊಂದಕ್ಕೆ ಅವರನ್ನು ರಕ್ಷಿಸಲು ಹಾವು ಹಿಡಿಯಲು ಹೋಗುವ ಆ ಇರುಳರು ಸಮುದಾಯದ ನಾಯಕ ಪಾತ್ರ ಕೊನೆಗೆ ಕಳ್ಳತನದ ಆರೋಪಕ್ಕೊಳಗಾಗಿ ಪೊಲೀಸರಿಂದ ಬಂಧನಕ್ಕೊಳಗಾಗುತ್ತದೆ. ಮುಂದುವರಿದು ತಾವು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪೊಲೀಸರಿಂದ ಅವರು ಅನುಭವಿಸುವ ಅಪರಿಮಿತ ಕ್ರೂರ ಹಿಂಸೆ ಎಂತಹವರ ಎದೆಯನ್ನು ಝಲ್ ಎನಿಸುತ್ತದೆ. ಸಂವಿಧಾನ ಹೇಳುವ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಎಂಬ ತತ್ವವನ್ನು ನಾವು ಪಾಲಿಸುತ್ತಿದ್ದೇವೆಯೇ? ಎಂಬ ಗಾಢ ಪಾಪ ಪ್ರಜ್ಞೆಗೆ ಇಲ್ಲಿ ಹಾದು ಹೋಗುವ ದೃಶ್ಯಗಳು ಅಕ್ಷರಶಃ ನಮ್ಮನ್ನು ಈಡು ಮಾಡುತ್ತವೆ.

ಈ ಸಂದರ್ಭದಲ್ಲಿ ನೊಂದ ಆ ಜನರಿಗೆ ನ್ಯಾಯ ಕೊಡಿಸುವ ಪಾತ್ರವಾಗಿ ನಾಯಕ ನಟ ಚಂದ್ರು(ಸೂರ್ಯ) ಆಗಮಿಸುತ್ತಾರೆ. ವಕೀಲಿಕೆಯ ಮೂಲಕ ಅವರ ಪರ ಹೋರಾಟಕ್ಕಿಳಿಯುವುದು, ಭಾರತೀಯ ಸಿನೆಮಾಗಳ ನಿಜದ ಕರ್ತವ್ಯ ಇದಾಗಬೇಕಿತ್ತು ಎಂಬುದನ್ನು ಬಹಳ ಆರ್ದ್ರವಾಗಿ ತಡವಾಗಿಯಾದರೂ ನೆನಪಿಸುತ್ತದೆ. ಅಂದಹಾಗೆ ಇಲ್ಲಿ ಶೋಷಣೆಯೇ ವಿಲನ್, ಅಂತಹ ಶೋಷಣೆಯ ವಿರುದ್ಧ ಯಾವುದೇ ಹಂತದಲ್ಲೂ ಎದೆಗುಂದದೆ ಕ್ಷಣ ಕ್ಷಣಕ್ಕೂ ಥ್ರಿಲ್ ಮೂಡಿಸುತ್ತ ನ್ಯಾಯ ಕೊಡಿಸುವ ನ್ಯಾಯವಾದಿಯೇ ಹೀರೊ. ನಿಜ ಹೇಳಬೇಕೆಂದರೆ ಚಿತ್ರದ ಈ ದೃಶ್ಯಗಳನ್ನೆಲ್ಲ ಒಂದು ಲೇಖನದಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಅದನ್ನು ನೋಡಿಯೆ ಸವಿ ಅನುಭವಿಸಬೇಕು. ಆ ಮಟ್ಟಿಗೆ ಚುಂಬಕ ಶಕ್ತಿ ರೀತಿ ಸಿನೆಮಾ ಬೆಳೆಯುತ್ತ, ಸೆಳೆಯುತ್ತ ಸಾಗುತ್ತದೆ. ಎಲ್ಲೊ ಒಂದೆಡೆ ಮಾನವೀಯ ಮನಸ್ಸುಳ್ಳ ಮನುಷ್ಯನನ್ನು ಸಿನೆಮಾ ತಾನು ಕೂಡ ಆ ವಕೀಲ ಪಾತ್ರದ ಭಾಗವಾಗಬಾರದೇ ಎಂಬ ಆಸೆಗೆಳೆದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಪೊಲೀಸ್ ದೌರ್ಜನ್ಯವನ್ನಂತೂ ಬಹಳ ಹಸಿ ಹಸಿಯಾಗಿ ತೋರಿಸಲಾಗಿದೆ. ತಾವೇ ಕಳ್ಳತನ ಮಾಡಿದ್ದರೂ ಅದರ ಆರೋಪವನ್ನು ಆ ಮುಗ್ಧ ಬುಡಕಟ್ಟು ಜನಾಂಗ ಒಪ್ಪಿಕೊಳ್ಳುವಂತೆ ಅವರು ನಡೆಸುವ ದೌರ್ಜನ್ಯ, ಪೊಲೀಸರ ಆ ದೌರ್ಜನ್ಯದಲ್ಲಿ ಹತನಾಗುವ ಆ ಬುಡಕಟ್ಟು ಸಮುದಾಯದ ವ್ಯಕ್ತಿ, ಕುಟುಂಬ ಎಲ್ಲವೂ ನಮ್ಮ ಜಾತಿವಾದಿ ದೌರ್ಜನ್ಯಕೋರ ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ. ಈ ನಿಟ್ಟಿನಲ್ಲಿ ಚಿತ್ರದಲ್ಲಿ ಉದ್ದಕ್ಕೂ ಬರುವ ಜಾತಿ ವ್ಯವಸ್ಥೆಯ ಕ್ರೂರತನದ ಹಸಿ ಬಿಸಿ ದೃಶ್ಯಗಳು ಪ್ರೇಕ್ಷಕರ, ಅದರಲ್ಲೂ ಜಾತಿ ದೌರ್ಜನ್ಯಕೋರರ ಅಂತರಂಗ ಕಲಕಲಿಲ್ಲ ಎಂದರೆ ಖಂಡಿತ ಅಂತಹವರ ಎದೆಗಳು ಮನುಷ್ಯರದಂತೂ ಆಗಿರಲಿಕ್ಕಿಲ್ಲ.

ಬುಡಕಟ್ಟು ಸಮುದಾಯದ ಆ ವ್ಯಕ್ತಿಯ ಹತ್ಯೆಯ ಆ ಪ್ರಕರಣವನ್ನು ಚಿತ್ರದುದ್ದಕ್ಕೂ ವಕೀಲ ಚಂದ್ರು ಎತ್ತಿಕೊಂಡು ಸಾಗುವ ಪರಿ ಸಿಂಪ್ಲಿ ಥ್ರಿಲ್ಲಿಂಗ್, ನ್ಯಾಯಾಲಯದ ಹೋರಾಟದ ಜೊತೆಗೆ ಕಮ್ಯುನಿಸ್ಟ್ ಪಕ್ಷವೊಂದರ ಅಡಿಯಲ್ಲೂ ಚಂದ್ರು ಹೋರಾಟಕ್ಕೆ ಅಣಿಯಾಗುತ್ತಾರೆ ಎಂದರೆ ಚಿತ್ರದ ಬಿರುಸು ಎಂತಹದ್ದು ಎಂಬುದನ್ನು ಯಾರಾದರೂ ಊಹಿಸಬಹುದು. ಈ ನಡುವೆ ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ನಮ್ಮ ಕನ್ನಡದ ಪ್ರಕಾಶ್ ರೈಯವರದ್ದು ಎಂದರೆ ಅದರ ಕಟ್ಟುವಿಕೆ ಹೇಗಿರುತ್ತದೆ ಎಂಬುದ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ.

ಒಟ್ಟಾರೆ ನಾಯಕ ಚಂದ್ರು (ಸೂರ್ಯ), ತನಿಖಾಧಿಕಾರಿ ಐಜಿಪಿ ಪೆರುಮಾಳ್ (ಪ್ರಕಾಶ್ ರೈ) ಚಿತ್ರದ ಎರಡನೇ ಅರ್ಧದ ರೋಚಕತೆಗೆ ಕಾರಣರಾಗುತ್ತಾರೆ, ನೊಂದವರಿಗೆ ನ್ಯಾಯ ಕೊಡಿಸುವ ನಾಯಕತ್ವದ ಕೆಲಸಕ್ಕೆ ಶಕ್ತಿ ತುಂಬುತ್ತಾರೆ. ಮುಖ್ಯವಾಗಿ ಸೂರ್ಯ, ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ಸೂಕ್ಷ್ಮ ಸಂವೇದನೆಯ ಅವರ ನಟನೆ, ಕೋರ್ಟ್ ಹಾಲ್‌ನ ದೃಶ್ಯಗಳು, ಅಗತ್ಯ ಬಿದ್ದಾಗ ಮಾತು ಮತ್ತು ಅಗತ್ಯ ಬಿದ್ದಾಗ ಸೂಕ್ತ ಮೌನದ ಮೂಲಕ ಅಲ್ಲಿ ಅವರು ಕೇಸು ನಡೆಸುವ ವಿಧಾನ, ಆ ಹಾದಿಯಲ್ಲಿ ಅಡ್ವೊಕೇಟ್ ಜನರಲ್ (ರಮೇಶ್ ರಾವ್) ರನ್ನು ಅವರು ಮಣಿಸುವ ಪರಿ ನಿಜಕ್ಕೂ ರೋಮಾಂಚಕ.

ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳ ಪಿಎಚ್.ಡಿ. ಜೊತೆಗೆ ಕಾನೂನಿನಲ್ಲಿಯೂ ಬ್ಯಾರಿಸ್ಟರ್ ಪದವಿ ಪಡೆದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಓರ್ವ ಶ್ರೇಷ್ಠ ವಕೀಲರು. ಹಾಗೆಯೇ ಅವರು ತಮ್ಮ ಜೀವನದುದ್ದಕ್ಕೂ ಅನುಸರಿಸುವ ವೃತ್ತಿ ಅದು ನ್ಯಾಯವಾದಿ ವೃತ್ತಿಯೇ ಆಗಿರುತ್ತದೆ. ಅಂದಹಾಗೆ ತಮ್ಮ ಸಾಮಾಜಿಕ ಹೋರಾಟಕ್ಕೂ ಅಂಬೇಡ್ಕರ್ ಬಳಸಿದ್ದು ವಕೀಲಿಕೆಯ ಸಾಕ್ಷಿಬದ್ಧ ಶೈಲಿಯನ್ನೇ ಎಂಬುದು ಬಹುತೇಕರಿಗೆ ತಿಳಿದಿಲ್ಲ. ತಮ್ಮ ಕಕ್ಷಿದಾರರಿಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ತೆಗೆದುಕೊಳ್ಳುತ್ತಿದ್ದ ರಿಸ್ಕ್, ಕೇಸ್ ಗೆಲ್ಲಲು ನಡೆಸುತ್ತಿದ್ದ ಅಧ್ಯಯನ ಅದೊಂದು ದಂತಕತೆ. ಸೂರ್ಯರ ನಟನೆಯಲ್ಲಿ ಅಂಬೇಡ್ಕರ್‌ರ ಆ ನ್ಯಾಯಪರ ಹೋರಾಟದ ಮಾದರಿ ಕೋರ್ಟಿನ ಒಳಗೆ ಮತ್ತು ಹೊರಗೆ ಎರಡೂ ಬಗೆಯಲ್ಲೂ ಅಕ್ಷರಶಃ ಪ್ರೇಕ್ಷಕರ ಎದೆಯನ್ನು ತಾಕುತ್ತದೆ.

ಅಂದಹಾಗೆ ಬುಡಕಟ್ಟು ವ್ಯಕ್ತಿಗಳ ಮೇಲಿನ ದೌರ್ಜನ್ಯಕ್ಕೆ ನ್ಯಾಯ ದೊರಕಿತೇ? ದೌರ್ಜನ್ಯಕೋರ ಆ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಯಿತೇ? ಕೃತಕ ಫೈಟ್ ಮತ್ತೊಂದು ಮಗದೊಂದು ಎಲ್ಲಿಯೂ ಏನೂ ಇಲ್ಲದೆ ಹೇಗೆ ನಾಯಕ ಚಂದ್ರು (ಸೂರ್ಯ) ನ್ಯಾಯ ಕೊಡಿಸಿದ ಎಂಬುದನ್ನು ಗಾಢವಾಗಿ ಅನುಭವಿಸಲು ಪ್ರೇಕ್ಷಕರು ಚಿತ್ರವನ್ನು ಅಮೆಝಾನ್ ಪ್ರೈಮ್‌ನಲ್ಲೇ ನೋಡಬೇಕು. ಸುದೀರ್ಘ ಎರಡು ಮುಕ್ಕಾಲು ಗಂಟೆಗಳ ಚಿತ್ರವಾದರೂ ಚಿತ್ರ ಎಲ್ಲಿಯೂ ಎದ್ದು ಹೋಗಲು ಬಿಡುವುದಿಲ್ಲ. ಆ ಮಟ್ಟಿಗೆ ಬೆಂಚಿನ ತುದಿಗೆ ಕೂರಿಸುವ ಮಾದರಿಯ ನಿರೂಪಣೆಯೊಂದಿಗೆ ಚಿತ್ರ ಸಾಗುತ್ತದೆ.

ಕೊನೆಯ ಮಾತು: ಚಿತ್ರ ನಿರ್ಮಾಣವೆಂಬುದು ಒಂದು ವೈಜ್ಞಾನಿಕ ಸಂಶೋಧನಾ ಕ್ರಿಯೆ ಮತ್ತು ಕ್ರಿಯೆಟಿವಿಟಿ. ‘ಜೈಭೀಮ್’ ಅಕ್ಷರಶಃ ಭಾರತದ, ಭಾರತೀಯರ ಚಿತ್ರ ನಿರ್ಮಾಣದ ಬೌದ್ಧಿಕ ಶಕ್ತಿಯ ಬಿಂಬಕವಾಗಿ ಮೂಡಿಬಂದಿದೆ. ಇದಕ್ಕೆ ಆಸ್ಕರ್ ಅವಾರ್ಡ್ ಕೂಡ ಬರಬಹುದು ಆ ಮಟ್ಟದ ರಿಚ್‌ನೆಸ್, ಮೇಕಿಂಗ್ ಚಿತ್ರದಲ್ಲಿದೆ. ಆದರೆ ಇದ್ಕೆ ನಿಜವಾಗಿಯೂ ಸಲ್ಲಬೇಕಾದ ಅವಾರ್ಡ್ ಪ್ರತಿಯೊಬ್ಬ ಭಾರತೀಯನು ಈ ಚಿತ್ರವನ್ನು ನೋಡಿ ತನ್ನಲ್ಲಿ ಇರಬಹುದಾದ ದೌರ್ಜನ್ಯಕೋರ ಮನಸ್ಸನ್ನು ಪ್ರಶ್ನಿಸಿಕೊಳ್ಳುವುದಾಗಿದೆ, ಆತ್ಮಾವಲೋಕನ ಮಾಡಿಕೊಳ್ಳುವುದಾಗಿದೆ.

share
ರಘೋತ್ತಮ ಹೊ.ಬ., ಮೈಸೂರು
ರಘೋತ್ತಮ ಹೊ.ಬ., ಮೈಸೂರು
Next Story
X