Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿಒಪಿ26 ಸಮಾವೇಶದ ಘೋಷಣೆಗೆ 190 ದೇಶಗಳ...

ಸಿಒಪಿ26 ಸಮಾವೇಶದ ಘೋಷಣೆಗೆ 190 ದೇಶಗಳ ಸಹಿ ಕಲ್ಲಿದ್ದಲಿನ ಯುಗಾಂತ್ಯದ ನಿರೀಕ್ಷೆ : ಬ್ರಿಟನ್

ವಾರ್ತಾಭಾರತಿವಾರ್ತಾಭಾರತಿ4 Nov 2021 10:20 PM IST
share
ಸಿಒಪಿ26 ಸಮಾವೇಶದ ಘೋಷಣೆಗೆ 190 ದೇಶಗಳ ಸಹಿ ಕಲ್ಲಿದ್ದಲಿನ ಯುಗಾಂತ್ಯದ ನಿರೀಕ್ಷೆ : ಬ್ರಿಟನ್

ಗ್ಲಾಸ್ಗೋ, ನ.3: ಇದೇ ಮೊದಲ ಬಾರಿಗೆ ಪೋಲಂಡ್, ವಿಯೆಟ್ನಾಮ್, ಚಿಲಿ ಹಾಗೂ ಇತರ ದೇಶಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹಂತಹಂತವಾಗಿ ಅಂತ್ಯಗೊಳಿಸಲು ಹಾಗೂ ನೂತನ ವಿದ್ಯುತ್ ಸ್ಥಾವರ ನಿರ್ಮಾಣ ಕೈಬಿಡಲು ವಾಗ್ದಾನ ಮಾಡುವುದರೊಂದಿಗೆ, ಕಲ್ಲಿದ್ದಲಿನ ಅಂತ್ಯದ ಬಗ್ಗೆ ನಿರೀಕ್ಷೆ ಮೂಡಿದೆ ಎಂದು ಬ್ರಿಟನ್ ಸರಕಾರ ಹೇಳಿದೆ.

ಕಲ್ಲಿದ್ದಲಿನ ಭವಿಷ್ಯಕ್ಕೆ ಬೀಗಮುದ್ರೆ ಜಡಿಯಲು ಸನ್ನದ್ಧರಾಗುವ ಮೂಲಕ ಮತ್ತು ಶುದ್ಧ ಇಂಧನದಿಂದ ಸಶಕ್ತಗೊಂಡ ಭವಿಷ್ಯದ ಪರಿಸರೀಯ ಮತ್ತು ಆರ್ಥಿಕ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ವಿಶ್ವವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಬ್ರಿಟನ್‌ನ ವ್ಯವಹಾರ ಮತ್ತು ಇಂಧನ ಕಾಯದರ್ರ್ಶಿ ಕ್ವಾಸಿ ಕ್ವರ್ಟೆಂಗ್ ಹೇಳಿದ್ದಾರೆ.

190 ದೇಶಗಳು ಹಾಗೂ ಸಂಘಟನೆಗಳು ಕಲ್ಲಿದ್ದಲು ಬಳಕೆಯನ್ನು ತ್ಯಜಿಸಲು ನಿರ್ಧರಿಸಿವೆ ಎಂದು ಬ್ರಿಟನ್‌ನ ಆಶ್ರಯದಲ್ಲಿ ಗ್ಲಾಸ್ಗೋದಲ್ಲಿ ನಡೆದ ಸಿಒಪಿ26 ಸಮಾವೇಶದ ಹೇಳಿಕೆ ತಿಳಿಸಿದೆ. ಕಲ್ಲಿದ್ದಲು ಇಂಧನ ಉತ್ಪಾದನೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಹೊಸ ಹೂಡಿಕೆಯನ್ನು ಅಂತ್ಯಗೊಳಿಸಲು ಹಾಗೂ ಶುದ್ಧ ಇಂಧನ ಉತ್ಪಾದನೆಯನ್ನು ತ್ವರಿತಗೊಳಿಸಲು ಸಿಒಪಿ26 ಒಪ್ಪಂದಕ್ಕೆ ಸಹಿಹಾಕಿದ ದೇಶಗಳು ಬದ್ಧವಾಗಿವೆ ಎಣದಯ ಬ್ರಿಟನ್ ಸರಕಾರ ಹೇಳಿದೆ.

ಕಲ್ಲಿದ್ದಲು ಅತ್ಯಧಿಕ ಪರಿಸರ ಮಾಲಿನ್ಯದ ಖನಿಜ ಇಂಧನವಾಗಿದ್ದು ಇದನ್ನು ಸುಡುವುದರಿಂದ ಹೊರಸೂಸುವ ಹಸಿರುಮನೆ ಅನಿಲವು ಪರಿಸರ ಬದಲಾವಣೆ ಪ್ರಕ್ರಿಯೆಗೆ ಅತೀ ಹೆಚ್ಚಿನ ಕೊಡುಗೆ ನೀಡುತ್ತದೆ. ಕಲ್ಲಿದ್ದಲು ಮುಕ್ತ ವಿಶ್ವ ನಿರ್ಮಾಣಕ್ಕೆ ಜಾಗತಿಕ ರಾಷ್ಟ್ರಗಳ ಒಪ್ಪಿಗೆ ಈ ಸಮಾವೇಶದ ಅತ್ಯಂತ ಪ್ರಮುಖ ಸಾಧನೆಯಾಗಿದ್ದರೆ, ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್‌ಗೆ ಮಿತಿಗೊಳಿಸುವ ಸಹಿತ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

2019ರಲ್ಲಿ ವಿಶ್ವದ 37% ಪ್ರಮಾಣದ ವಿದ್ಯುತ್‌ಶಕ್ತಿ ಉತ್ಪಾದನೆಗೆ ಕಲ್ಲಿದ್ದಲಿನ ಬಳಕೆಯಾಗಿದೆ. ದಕ್ಷಿಣ ಆಫ್ರಿಕಾ, ಪೋಲಂಡ್ ಮತ್ತು ಭಾರತದಲ್ಲಿ ಕಲ್ಲಿದ್ದಲು ಸ್ಥಳೀಯವಾಗಿ ಹೇರಳವಾಗಿ ಲಭ್ಯವಿರುವ, ಅಗ್ಗದ ಇಂಧನ ಮೂಲವಾಗಿರುವುದರಿಂದ ವಿದ್ಯುತ್‌ಶಕ್ತಿ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದೀಗ ಈ ರಾಷ್ಟ್ರಗಳು ತಮ್ಮ ಇಂಧನ ಕ್ಷೇತ್ರವನ್ನು ಶುದ್ಧ ಇಂಧನ ಉತ್ಪಾದನೆ ಪ್ರಕ್ರಿಯೆಗೆ ಬದಲಾಯಿಸಲು ಬೃಹತ್ ಪ್ರಮಾಣದ ಹೂಡಿಕೆ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಕಲ್ಲಿದ್ದಲು ಯೋಜನೆಗಾಗಿ ಜಾಗತಿಕ ಪೈಪ್‌ಲೈನ್ ಅಳವಡಿಸುವ ಪ್ರಕ್ರಿಯೆ ಇಳಿಮುಖಗೊಂಡಿದ್ದರೂ ಚೀನಾ, ಭಾರತ, ವಿಯೆಟ್ನಾಮ್ ಮತ್ತು ಇಂಡೋನೇಶ್ಯಾಗಳು ಹೊಸ ಕಲ್ಲಿದ್ದಲು ಸ್ಥಾವರ ನಿರ್ಮಿಸುವ ಯೋಜನೆ ರೂಪಿಸಿವೆ.

ಸಿಒಪಿ26ರ ಕಲ್ಲಿದ್ದಲು ತ್ಯಜಿಸುವ ವಾಗ್ದಾನಕ್ಕೆ ಸಹಿ ಹಾಕಿರುವ ದೇಶಗಳಲ್ಲಿ ಈ ದೇಶಗಳೂ ಇವೆಯೇ ಎಂಬುದನ್ನು ಬ್ರಿಟನ್ ದೃಢಪಡಿಸಿಲ್ಲ. ಸಾಗರೋತ್ತರ ಕಲ್ಲಿದ್ದಲು ಸ್ಥಾವರಕ್ಕೆ ಅನುದಾನ ನೀಡುವುದನ್ನು ನಿಲ್ಲಿಸುವುದಾಗಿ ಸೆಪ್ಟಂಬರ್‌ನಲ್ಲಿ ಚೀನಾ ವಾಗ್ದಾನ ನೀಡಿತ್ತು. ಆದರೆ ದೇಶೀಯ ಕಲ್ಲಿದ್ದಲು ಸ್ಥಾವರದ ಬಗ್ಗೆ ಸೊಲ್ಲೆತ್ತಿರಲಿಲ್ಲ.

ದುರದೃಷ್ಟವಶಾತ್, ಆಸ್ಟ್ರೇಲಿಯಾ ಸರಕಾರವೂ ಕಲ್ಲಿದ್ದಲು ಉದ್ದಿಮೆಯನ್ನು ವಿಸ್ತರಿಸುತ್ತಿದೆ. 25 ವರ್ಷದ ಜೀವಿತಾವಧಿಯ ಹೊಸ ಕಲ್ಲಿದ್ದಲು ಗಣಿಯನ್ನು ಆರಂಭಿಸಲಾಗಿದೆ. ಇದರ ಕಾರ್ಯ ಮುಂದುವರಿದರೆ, ಪ್ಯಾರಿಸ್ ಹವಾಮಾನ ಒಪ್ಪಂದದ ಉದ್ದೇಶ ಈಡೇರದು ಎಂದು ಆಸ್ಟ್ರೇಲಿಯಾ ನ್ಯಾಷನಲ್ ವಿವಿಯ ಪರಿಸರ ತಜ್ಞ ವಿಲ್ ಸ್ಟೀಫನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X