ಮಣಿಪಾಲ: ಸಾಮೂಹಿಕ ಗೋಪೂಜೆ ಕಾರ್ಯಕ್ರಮ

ಮಣಿಪಾಲ, ನ. 5; ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಇವರಿಂದ ಸಾಮೂಹಿಕ ಗೋಪೂಜೆ ಕಾರ್ಯಕ್ರಮವು ಶಾಂತಿನಗರದಲ್ಲಿ ನಡೆಯಿತು. ಶಾಂತಿನಗರದಲ್ಲಿ ಗೋ ಸಂಚಾರ ಇರುವ ಆಯಾಕಟ್ಟಿನ ಸ್ಥಳದಲ್ಲಿ ನೀರುಣಿಸಲು ಕಲ್ಮರ್ಗಿಗಳನ್ನು ಇಡಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕೆ. ಬಾಲಗಂಗಾಧರ ರಾವ್, ಚೌಡೇಶ್ವರಿ ಫ್ರೆಂಡ್ಸ್ ಇದರ ಅಧ್ಯಕ್ಷರು, ಸದಸ್ಯರು ಹಾಗೂ ರತ್ನಾಕರ್ ಶೆಟ್ಟಿ, ಶಕುಂತಲ, ಸುಗುಣ ಶೆಟ್ಟಿ, ಪವಿತ್ರ ರಾವ್, ಲಕ್ಷ್ಮೀ ಭಟ್, ಲಹರಿ ರಾವ್ ಮತ್ತಿತರರು ಉಪಸ್ಥಿತರಿದ್ದರು.
Next Story





