ಕಾರವಾರ: ಬೋಟ್ ನಲ್ಲಿ ಬೆಂಕಿ; ಏಳು ಮಂದಿ ಮೀನುಗಾರರ ರಕ್ಷಣೆ
![ಕಾರವಾರ: ಬೋಟ್ ನಲ್ಲಿ ಬೆಂಕಿ; ಏಳು ಮಂದಿ ಮೀನುಗಾರರ ರಕ್ಷಣೆ ಕಾರವಾರ: ಬೋಟ್ ನಲ್ಲಿ ಬೆಂಕಿ; ಏಳು ಮಂದಿ ಮೀನುಗಾರರ ರಕ್ಷಣೆ](https://www.varthabharati.in/sites/default/files/images/articles/2021/11/6/312752-1636179539.jpg)
ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಉಂಟಾಗಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದು, ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
'ವರದಾ' ಹೆಸರಿನ ಮೀನುಗಾರಿಕೆ ಬೋಟ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ಬೋಟ್ ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ಬೆಂಕಿ ನಂದಿಸಿದ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ತಿಳಿಸಿದ್ದಾರೆ.
Next Story