ಕೋಳ್ಯೂರುಗೆ ಅಭಿನಂದನಾ ಆಲೇಖಾ ಪ್ರಶಸ್ತಿ ಪ್ರದಾನ
![ಕೋಳ್ಯೂರುಗೆ ಅಭಿನಂದನಾ ಆಲೇಖಾ ಪ್ರಶಸ್ತಿ ಪ್ರದಾನ ಕೋಳ್ಯೂರುಗೆ ಅಭಿನಂದನಾ ಆಲೇಖಾ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2021/11/7/312909-1636294551.jpg)
ಕೋಟ, ನ.7: ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾವೃಂದ ಹಾಗೂ ಶ್ರೀಕೈಲಾಸ ಕಲಾಕ್ಷೇತ್ರ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಯಕ್ಷಗಾನ ಹಿರಿಯ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾಯರಿಗೆ 90ನೆ ಜನ್ಮದಿನೋತ್ಸವದ ಅಭಿ ಮಾನದ ಗೌರವ ಪುರಸ್ಕಾರ ಸಮಾರಂಭವು ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆಯಿತು.
ಯಕ್ಷಗಾನದ ತೆಂಕು ಬಡಗುವಿನಲ್ಲಿ ಸುಮಾರು 70 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಕಲಾಸೇವೆ ನೀಡಿದ ಡಾ.ಕೋಳ್ಯೂರು ರಾಮಚಂದ್ರ ರಾವ್ಗೆ ಅಭಿನಂದನಾ ಆಲೇಖಾ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಪ್ರೊ.ಉದಯಕುಮಾರ್ ಶೆಟ್ಟಿ,ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಾಲಿಗ್ರಾಮ ಮೇಳದ ಶ್ರೀಧರ ಹಂದೆ, ತೆಕ್ಕಟೆ ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ, ರೋಟರಿ ಅಧ್ಯಕ್ಷ ಮಂಜುನಾಥ ಕಾಂಚನ್, ಕರ್ನಲ್ ಕೃಷ್ಣಯ್ಯಶೆಟ್ಟಿ, ಸುಧಾಕರಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಜಾಯಿಂದ್ರ ಹಂದೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷ ಪ್ರಮಿಳೆ ದೃಶ್ಯ ಕಾವ್ಯಜರಗಿತು.
Next Story