ಎಸ್ವೈಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಹಂಝತ್ ಉಡುಪಿ ಆಯ್ಕೆ

ಹಂಝತ್, ರಝ್ವಿ, ಮೊಯ್ದಿನ್
ಉಡುಪಿ, ನ.10: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್ವೈಎಸ್) ಉಡುಪಿ ಜಿಲ್ಲಾ ಮಹಾಸಭೆಯು ದೊಡ್ಡಣಗುಡ್ಡೆ ಮ್ರಸ ಹಾಲ್ನಲ್ಲಿ ಇತ್ತೀಚೆಗೆ ಜರಗಿತು.
ರಾಜ್ಯ ಸಮಿತಿ ಸದಸ್ಯ ಹಾಗೂ ಉಡುಪಿ ಜಿಲ್ಲಾ ವೀಕ್ಷಕ ಕೆ.ಕೆ.ಎಂ.ಕಾಮಿಲ್ ಸಖಾಫಿ ಪುನಾರಚನೆಗೆ ನೇತೃತ್ವ ನೀಡಿದರು. ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕೋಶಾಧಿಕಾರಿ ಅಬ್ದುಲ್ ಹಕೀಮ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಸಯ್ಯಿದ್ ಜಅಫರ್ ಸಖಾಫ್ ಕೋಟೇಶ್ವರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಡ್ವಕೇಟ್ ಹಂಝತ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಕೋಶಾಧಿಕಾರಿಯಾಗಿ ಹಾಜಿ ಕೆ.ಮೊಯ್ದೀನ್ ಗುಡ್ವಿಲ್ ಕಾಪು, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಸೂಪರ್ಸ್ಟಾರ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ: ಹೈದರ್ ಅಲಿ ಅಹ್ಸನಿ ಮೂಳೂರು(ದಅ್ವಾ), ಅಬ್ದುಲ್ ರಝಾಖ್ ಮುಸ್ಲಿಯಾರ್ ಸಾಸ್ತಾನ(ಸಂಘಟನೆ), ಪಿ.ಪಿ.ಬಶೀರ್ ಮಜೂರು(ಇಸಾಬಾ), ಬಿ.ಕೆ.ಅಬೂಬಕರ್ ಮುಸ್ಲಿಯಾರ್ ಕನ್ನಂಗಾರ್ (ಕಲ್ಚರಲ್), ಅಡ್ವಕೇಟ್ ಇಲ್ಯಾಸ್ ನಾವುಂದ(ಸೋಷಿಯಲ್), ಮುಸ್ತಫಾ ಬಂಗ್ಳೆಗುಡ್ಡೆ ಕಾರ್ಕಳ(ಮೀಡಿಯಾ), ಸಿದ್ದೀಖ್ ಮಾಸ್ಟರ್ ಕುಂದಾಪುರ (ಡೈರೆಕ್ಟರ್ ಇಸಾಬಾ).
ಕಾರ್ಯಕಾರಿ ಸದಸ್ಯರಾಗಿ: ಸಯ್ಯಿದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ, ಕೆ.ಹುಸೈನ್ ಕೋಟ ಪಡುಕೆರೆ, ಅಬ್ದುಲ್ಲಾ ಅಹ್ಮದ್ ಮೂಳೂರು, ಹನೀಫ್ ಹಾಜಿ ಕನ್ನಂಗಾರ್, ಸಯ್ಯಿದ್ ಅಲಿ ಪಡುಬಿದ್ರೆ, ಹಾಫಿಲ್ ಅಬ್ದುಲ್ಲತೀಫ್ ಫಾಳಿಲ್ ನಾವುಂದ, ರಮಳಾನ್ ನಾವುಂದ, ಎಚ್.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕಾರ್ಕಳ, ಇಬ್ರಾಹಿಂ ಮಣಿಕೊಳಲು, ಸಿ.ಎಚ್. ಹಮೀದ್ ಮುಸ್ಲಿಯಾರ್ ಕಾರ್ಕಳ, ಶಾಬಾನ್ ಹಾಜಿ ಉಡುಪಿ ಇವರನ್ನು ಆರಿಸಲಾಯಿತು.
ಸಮಾವೇಶದಲ್ಲಿ ಹಾಜಿ ಕೆ. ಮೊಯ್ದೀನ್ ಗುಡ್ವಿಲ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು. ಹಂಝತ್ ಉಡುಪಿ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ರಝ್ವಿ ವಂದಿಸಿದರು.







