ಹೆಬ್ರಿ: ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
ಹೆಬ್ರಿ: ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿ ಕಾಲು ತೊಳೆಯಲು ಹೊಳೆಗೆ ಇಳಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೆಳಬಾದ್ಲು ನಿವಾಸಿ ಹರೀಶ ನಾಯಕ್(37) ಎಂದು ಗುರುತಿಸ ಲಾಗಿದೆ. ಇವರು ನ.8ರಂದು ಬೆಳಗ್ಗೆ ಸಮೀಪದ ಕಾಡಿಗೆ ಸೌದೆ ತರಲು ಹೋಗಿದ್ದು, ಅಲ್ಲಿ ಕಾಡಿನ ಬದಿಯಲ್ಲಿರುವ ಸೀತಾನದಿಯ ಹೊಳೆಯಲ್ಲಿ ಕಾಲು ತೊಳೆಯಲು ಹೋದವರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ನ.10ರಂದು ಮದ್ಯಾಹ್ನ 3:30 ಗಂಟೆಗೆ ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿರುವ ಹೊಳೆಯಲ್ಲಿ ಇವರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story