ದಾವಣಗೆರೆ: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ದಾವಣಗೆರೆ: ತ್ರಿಪುರಾದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪದ ಬಳಸಿ, ಮುಸ್ಲಿಮರ ಮೇಲೆ ನಡೆಸಿರುವ ದಾಳಿ ಖಂಡಿಸಿ ಶುಕ್ರವಾರ ಮುಸ್ಲಿಮರು ನಗರಾದ್ಯಂತ ತಮ್ಮ ವ್ಯಾಪಾರ-ವಹಿವಾಟು, ಅಂಗಡಿ-ಮುಂಗ್ಗಟ್ಟು ಬಂದ್ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಾಷಾ ನಗರದ ಮಿಲಾದ್ ಮೈದಾನದಲ್ಲಿ ತಂಜಿಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್, ತಂಜಿಮ್ ಉಲೇಮಾಯೆ ಅಹ್ಲೆ ಸುನ್ನತ್ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ಮುಸ್ಲಿಂ ಮತೀಯರು, ಸಮಾಜದ ಮೌಲಾನಾರ ಸಮ್ಮುಖದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಇ ಸಿ.ಬಿ.ರಿಷ್ಯಂತ್ ಮುಖಾಂತರ ರಾಷ್ಟ್ರಪತಿಗಳಿಗೆ
ಮನವಿಪತ್ರ ಸಲ್ಲಿಸಿದರು.
ಇದೇ ವೇಳೆ ಮುಸ್ಲಿಂ ಸಮಾಜದ ಮುಖಂಡ ಅಯೂಬ್ ಪೈಲ್ವಾನ್, ಭಾರತದಲ್ಲಿ ಸುಮಾರು 4637 ಜಾತಿಗಳ ಜನರು ಸಾಮರಸ್ಯದಿಂದ ಬಾಳುತ್ತಿದ್ದೇವೆ. ವಿಶ್ವದ ಅತೀ ದೊಡ್ಡ ಸಂವಿಧಾನ ಹೊಂದಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅಧಿಕಾರದ ಚುಕ್ಕಾಣಿ ಹಿಡಿಯಲು ಕೆಲ ವ್ಯಕ್ತಿಗಳು
ಪ್ರಚೋದನಾಕಾರಿ ಹೇಳಿಕೆ ನೀಡಿ, ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯುವ ಜನಾಂಗವನ್ನು ಧಾರ್ಮಿಕತೆಯ ಹೆಸರಿನಲ್ಲಿ ಪ್ರಚೋದಿಸುವ ಕೆಲಸವಾಗುತ್ತಿದೆ. ಇದರಿಂದ ದೇಶದ ನೆಮ್ಮದಿ ಹಾಳಾಗುವ ಜೊತೆಗೆ ಆಸ್ತಿಪಾಸ್ತಿ, ಅಮೂಲ್ಯ ಜೀವಹಾನಿ ಸಂಭವಿಸುತ್ತಿದೆ. ದೇಶವು ಭಾವೈಕ್ಯತೆಯ ನಾಡಾಗಿರಬೇಕಾದರೆ ಕೋಮವಾದಿ ಭಾವನೆಯನ್ನು ಪ್ರತಿಯೊಬ್ಬರೂ ಕೈಬಿಡಬೇಕು. ತ್ರಿಪುರಾದಲ್ಲಿ ಕೆಲ ಸಂಘಟನೆಗಳು ಬಾಂಗ್ಲಾ ದೇಶದ ಅಲ್ಪಸಂಖ್ಯಾತ
ಹಿಂದುಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟಿಸುವ ವೇಳೆ ಕೋಮು ದಳ್ಳುರಿಗೆ ಕಾರಣವಾಗಿವೆ. ತ್ರಿಪುರಾದ ಮಸೀದಿ, ದರ್ಗಾಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಅವರು ದೂರಿದರು.
ಮನವಿ ಸ್ವೀಕರಿಸಿದ ಡಿಸಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕಾನೂನುಸುವ್ಯವಸ್ಥೆಗೆ ಭಂಗ ಬರದಂತೆ, ಶಾಂತಿಯುತವಾಗಿ ಸಭೆ ನಡೆಸಿ ಮನವಿಕೊಟ್ಟಿದ್ದೀರಿ. ಈ ಮೂಲಕ ನೀವು ಶಾಂತಿ ಪ್ರಿಯರು ಎಂಬುದನ್ನು ತೋರಿಸಿಕೊಟ್ಟಿದ್ದೀರಿ.ಮೆರವಣಿಗೆಗೆ ಜಿಲ್ಲಾ ಪೆÇಲೀಸ್ ಇಲಾಖೆ ಅನುಮತಿ ನೀಡುವುದಿಲ್ಲವೆಂದಾಗ ಒಂದುಕಡೆ ಸಭೆ ನಡೆಸಲು ನಾವುನೀಡಿದ ಸಲಹೆಗೆ ಸ್ಪಂದಿಸಿದ್ದು ಸ್ವಾಗತಾರ್ಹ. ನಿಮ್ಮ ಮನವಿಯನ್ನುರಾಷ್ಟ್ರಪತಿಗಳಿಗೆ ಕಳಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಮಾಜದ ಗುರುಗಳಾದ ಮೌಲಾನಾ ಮೊಹಮ್ಮದ್ ಹನೀಫ್ ರಜಾ ಖಾದ್ರಿ,ಮೌಲಾನಾ ಶಾಹೀದ್ ರಜಾ, ಮೌಲಾನಾ ಸೈಯದ್ ಮುಕ್ತಿಯಾರ್, ಮೌಲಾನಾಮುಫ್ತಿ ಇಲಿಯಾಸ್, ಮೌಲಾನಾ ಶರ್ಫುಲ್ ಹಕ್, ಮುಖಂಡರಾದ ಸೈಯದ್ಸೈಫುಲ್ಲಾ, ಜೆ.ಅಮಾನುಲ್ಲಾ ಖಾನ್, ಸಾದಿಕ್ ಪೈಲ್ವಾನ್, ಸೈಯದ್ ಚಾರ್ಲಿ, ರಿಜ್ವಿಖಾನ್, ಸಿರಾಜ್ ಅಹಮ್ಮದ್, ಸಿ.ಆರ್.ನಸೀರ್ ಅಹಮ್ಮದ್, ಅಬ್ದುಲ್ ಘನಿ ತಾಹೀರ್,ಎ.ಬಿ.ರಹೀಂ, ಕೆ.ಚಮನ್ ಸಾಬ್, ಜಾಕೀರ್ ಅಲಿ, ಸೈಯದ್ ಅಲ್ತಾಫ್, ಕಬೀರ್ ಅಲಿ,ಯು.ಎಂ.ಮನ್ಸೂರ್ ಅಲಿ, ಖಾದರ್ ಬಾಷಾ, ಸೈಯದ್ ನೌಶಾದ್ ಮತ್ತಿತರರುಹಾಜರಿದ್ದರು.







