Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾವಳಿಯಲ್ಲಿ ವರ್ಷದ ತಿರುಗಾಟಕ್ಕೆ...

ಕರಾವಳಿಯಲ್ಲಿ ವರ್ಷದ ತಿರುಗಾಟಕ್ಕೆ ಸಜ್ಜಾಗಿವೆ ಯಕ್ಷಗಾನ ಮೇಳಗಳು

ಕೊರೋನೋತ್ತರ ದಿನಗಳಲ್ಲಿ ಭವಿಷ್ಯದ ಹುಡುಕಾಟ

ಬಿ.ಬಿ.ಶೆಟ್ಟಿಗಾರ್ಬಿ.ಬಿ.ಶೆಟ್ಟಿಗಾರ್14 Nov 2021 5:00 PM IST
share
ಕರಾವಳಿಯಲ್ಲಿ ವರ್ಷದ ತಿರುಗಾಟಕ್ಕೆ ಸಜ್ಜಾಗಿವೆ ಯಕ್ಷಗಾನ ಮೇಳಗಳು

ಉಡುಪಿ, ನ.14: ಕೊರೋನ ಸಾಂಕ್ರಾಮಿಕದಿಂದಾಗಿ ಸದ್ದಡಗಿದಂತಿದ್ದ ಯಕ್ಷಗಾನ ಮತ್ತೆ ತನ್ನ ಹಿಂದಿನ ವೈಭವದ ದಿನಗಳಿಗೆ ಮರಳುವ ನಿರೀಕ್ಷೆಯೊಂದಿಗೆ ಯಕ್ಷಗಾನ ಮೇಳಗಳು ಮತ್ತೆ ತಮ್ಮ ವರ್ಷದ ತಿರುಗಾಟಕ್ಕೆ ಸಜ್ಜಾಗಿವೆ. ನವೆಂಬರ್ ಕೊನೆಯ ವಾರದಿಂದ ಡಿಸೆಂಬರ್ ಮೊದಲ ವಾರದ ನಡುವೆ ಈ ಚಾಲ್ತಿಯಲ್ಲಿರುವ ಸುಮಾರು 40 ಮೇಳಗಳು ವರ್ಷದ ತಿರುಗಾಟ ನಡೆಸಲು ಬೇಕಾದ ಪೂರ್ವಸಿದ್ಧತೆಯ ಕೊನೆಯ ಹಂತದಲ್ಲಿವೆ. ಕೊರೋನದೊಂದಿಗೆ ಕಳೆದ ಒಂದು-ಒಂದೂವರೆ ವರ್ಷದಿಂದ ನಗುವನ್ನು ಮರೆತಂತಿದ್ದ ಸಾವಿರಾರು ಕಲಾವಿದರು, ಯಕ್ಷಗಾನ ಮೇಳಗಳ ಕಾರ್ಮಿಕರು ಹಾಗೂ ಅವರನ್ನೇ ನಂಬಿದ ಕುಟುಂಬಿಕರ ಬದುಕಿನಲ್ಲಿ ಮತ್ತೆ ಆಶಾಕಿರಣಗಳು ಮೂಡತೊಡಗಿವೆ. ನ.28ಕ್ಕೆ ಮಂದಾರ್ತಿ ಮೇಳದ ದೇವರಸೇವೆ: ಮಂದಾರ್ತಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ನ.28ರಂದು ದೇವರ ಸೇವೆ ಆಟದೊಂದಿಗೆ ತನ್ನ ವರ್ಷದ ತಿರುಗಾಟವನ್ನು ಪ್ರಾರಂಭಿಸಲಿದೆ ಎಂದು ದೇವಸ್ಥಾನದ ಆಡಳಿತ ಟ್ರಸ್ಟಿ ಎಚ್.ಧನಂಜಯ ಶೆಟ್ಟಿ ಹೇಳುತ್ತಾರೆ.

ಈ ಬಾರಿಯೂ ಮಂದಾರ್ತಿಯ ಐದು ಮೇಳಗಳಿವೆ. ಇವುಗಳಲ್ಲಿ 200ರಷ್ಟು ಕಲಾವಿದರನ್ನು ನೇಮಿಸಿಕೊಳ್ಳಲಾಗಿದೆ ಎಂದವರು ವಿವರಿಸಿದರು.

2042-43ರವರೆಗೆ ಆಟದ ಬುಕ್ಕಿಂಗ್: ಮಂದಾರ್ತಿಯ ಐದು ಮೇಳಗಳು ಪ್ರತಿವರ್ಷ ಸುಮಾರು 900ರಷ್ಟು ಹರಕೆ ಆಟಗಳನ್ನು ಆಡುತ್ತವೆ. ಈ ಬಾರಿ ಜಿಲ್ಲಾಧಿಕಾರಿಯಿಂದ ಅನುಮತಿ ತಡವಾಗಿ ದೊರೆತದ್ದರಿಂದ ಎರಡು ಮೇಳಗಳು ಮಾತ್ರ ಹರಕೆ ಆಟ ಆಡುತ್ತಿವೆ. ಅದು ನ.24ರವರೆಗೆ ನಡೆಯಲಿದೆ. ಸದ್ಯದ ಮಟ್ಟಿಗೆ 2042-43ರವರೆಗೆ ಮಂದಾರ್ತಿ ಮೇಳದ ಎಲ್ಲಾ ಹರಕೆ ಆಟಗಳು ಬುಕ್ ಆಗಿವೆ ಎಂದು ಧನಂಜಯ ಶೆಟ್ಟಿ ಹೇಳಿದರು.

ಡಿ.6ಕ್ಕೆ ಸಾಲಿಗ್ರಾಮ ಮೇಳ: ಜಿಲ್ಲೆಯಲ್ಲಿ ಐದು ಮೇಳಗಳನ್ನು -ಸಾಲಿಗ್ರಾಮ, ಹಿರಿಯಡ್ಕ, ಸೌಕೂರು, ಮಡಾಮಕ್ಕಿ, ಮೇಗವಳ್ಳಿ- ನಡೆಸುವ ಪಿ.ಕಿಶನ್ ಹೆಗ್ಡೆ ಕೂಡ ತಮ್ಮ ಮೇಳಗಳ ತಿರುಗಾಟದ ದಿನಗಳನ್ನು ನಿಗದಿಪಡಿಸಿದ್ದಾರೆ. ಸಾಲಿಗ್ರಾಮ ಮೇಳದ ತಿರುಗಾಟ ಡಿ.6, ಸೌಕೂರು ಮೇಳದ ಸಂಚಾರ ನ.29, ಹಿರಿಯಡ್ಕ ಮೇಳದ್ದು ಡಿ.9ಕ್ಕೆ, ಮಡಾಮಕ್ಕಿ ಮೇಳದ್ದು ಡಿ.13 ಹಾಗೂ ಮೇಗರವಳ್ಳಿ ಮೇಳದ ಸಂಚಾರವನ್ನು ಡಿ.20ರ ನಂತರ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕಿಶನ್ ಹೆಗ್ಡೆ ತಿಳಿಸಿದ್ದಾರೆ. ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳದಲ್ಲಿ ಈಗಾಗಲೇ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ತಿರುಗಾಟವನ್ನು ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಹಟ್ಟಿಯಂಗಡಿ ಮೇಳವೂ ತನ್ನ ಪ್ರದರ್ಶನ ಪ್ರಾರಂಭಿಸಿದ್ದು, ಕಳೆದೊಂದು ವಾರದಿಂದ ಶ್ರೀಕೃಷ್ಮ ಮಠದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಇದೇ ರೀತಿ ಇನ್ನುಳಿದ ಮೇಳಗಳೂ ಮುಂದಿನ 15-20 ದಿನಗಳಲ್ಲಿ ತಮ್ಮ ವರ್ಷದ ತಿರುಗಾಟವನ್ನು ಪ್ರಾರಂಭಿಸಲಿವೆ.

40 ಮೇಳ 1,500 ಕಲಾವಿದರು

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 40 ವೃತ್ತಿಪರ ಮೇಳಗಳಿವೆ. ಇವುಗಳಲ್ಲಿ ಸುಮಾರು 1,500ರಷ್ಟು ಕಲಾವಿದರು ದುಡಿಯುತ್ತಿದ್ದಾರೆ. ಈ ಮೇಳಗಳಲ್ಲಿ ಇತರ ಕಾರ್ಮಿಕರು ಸೇರಿ ಸುಮಾರು 3,000 ಮಂದಿಯ ಕುಟುಂಬ ಯಕ್ಷಗಾನ ಆಟವನ್ನೇ ನಂಬಿ ಬದುಕು ಸಾಗಿಸುತ್ತಿವೆ. ಇದಲ್ಲದೆ ಯಕ್ಷಗಾನ ಆಟದ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ನೂರಾರು ಮಂದಿಗೆ ಇದು ಉದ್ಯೋಗ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಯಕ್ಷಗಾನ ಬಯಲಾಟಗಳು ನಿಂತಿರುವುದರಿಂದ ಇವರೆಲ್ಲರೂ ಜೀವನಾಧಾರವನ್ನೇ ಕಳೆದುಕೊಂಡಿದ್ದರು.

share
ಬಿ.ಬಿ.ಶೆಟ್ಟಿಗಾರ್
ಬಿ.ಬಿ.ಶೆಟ್ಟಿಗಾರ್
Next Story
X