ವ್ಯಕ್ತಿಯ ಅನುಮಾನಾಸ್ಪದ ಸಾವು: ದೂರು ದಾಖಲು
ಬೈಂದೂರು, ನ.14: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ಮರಣದಲ್ಲಿ ಶಂಕೆ ವ್ಯಕ್ತಪಡಿಸಿ ಮೃತರ ಸಹೋದರ ಬೈಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೃತರನ್ನು ಬೈಂದೂರು ಕಾಲ್ತೋಡು ಮೆಲ್ ಕೈರಾಣ ನಿವಾಸಿ ಸುಧಾಕರ ಗೌಡ(49) ಎಂದು ಗುರುತಿಸಲಾಗಿದೆ. ಇವರು ಗೋಳಿಹೊಳೆ ಗ್ರಾಮದ ಹಿಲ್ಲಾರು ಬಚ್ಚೆಗೌಡ ಎಂಬವರ ಪುತ್ರಿ ನೀಲಾವತಿ ಎಂಬಾಕೆಯನ್ನು ಮದುವೆ ಯಾಗಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದರು.
ಅಣ್ಣ ಮಾಸ್ತಿ ಗೌಡ ಎಂಬವರ ಮನೆಗೆ ನ.10ರಂದು ಬೆಳಗ್ಗೆ ಬಂದಿದ್ದ ಸುಧಾಕರ, ಮಧ್ಯಾಹ್ನ ಅವರ ಮಗಳ ಗಂಡ ಸುರೇಶ ಜೊತೆ ಬೈಕಿನಲ್ಲಿ ಹೆಂಡತಿ ಮನೆಗೆ ಹೋಗಿದ್ದರು. ನ.13ರಂದು ಸಂಜೆ ಮಾಸ್ತಿ ಗೌಡ ಕರೆ ಮಾಡಿದಾಗ ಸುಧಾಕರ ಗೌಡರ ಮಗಳ ಅಳಿಯ, ಸುಧಾಕರ ಗೌಡ ಮನೆಯ ಪಕ್ಕದಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದರು. ಸುಧಾಕರ ಗೌಡರ ಮರಣ ದಲ್ಲಿ ಅನುಮಾನವಿರುವುದಾಗಿ ಮಾಸ್ತಿ ಗೌಡ ನೀಡಿರುವ ದೂರಿನಂತೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story