'ನಮ್ಮ ನಾಡ ಒಕ್ಕೂಟ' ಉಡುಪಿ ಜಿಲ್ಲೆ ಸಮಿತಿ ಸಭೆ, ಸನ್ಮಾನ ಕಾರ್ಯಕ್ರಮ
![ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ಸಮಿತಿ ಸಭೆ, ಸನ್ಮಾನ ಕಾರ್ಯಕ್ರಮ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ಸಮಿತಿ ಸಭೆ, ಸನ್ಮಾನ ಕಾರ್ಯಕ್ರಮ](https://www.varthabharati.in/sites/default/files/images/articles/2021/11/17/314140-1637155267.jpg)
ಉಡುಪಿ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಎರಡನೇ ಜಿಲ್ಲಾ ಸಮಿತಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮವು ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಮಂಗಳವಾರ ನಡೆಯಿತು.
ಉಡುಪಿ ಜಿಲ್ಲಾಧ್ಯಕ್ಷ ಮುಶ್ತಾಕ್ ಅಹ್ಮದ್ ಬೆಳ್ವೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಸ್ತಾದ್ ಜಮಾಲ್ ಮಲ್ಪೆ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು.
ಜಿಲ್ಲಾ ಉಪಾಧ್ಯಕ್ಷ ಎಸ್.ಎಮ್. ಇರ್ಶಾದ್ ನೇಜಾರ್ ಸ್ವಾಗತ ಭಾಷಣ ಮಾಡಿದರು. ಈ ಸಂದರ್ಭ ಎನ್ಎನ್ಒ ಕೇಂದ್ರ ಸಮಿತಿ ವತಿಯಿಂದ ಸಮಾಜದ ಮೂರು ಸಾಧಕರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕರು, ಪರಿಸರವಾದಿಗಳು ಮತ್ತು Indian Achievers Award ಪುರಸ್ಕೃತರಾದ ಬಿ.ಎಂ. ಜಾಫರ್ (ಸಂಸ್ಥಾಪಕರು ಮತ್ತು ಅಧ್ಯಕ್ಷರು, ತೋನ್ಸೆ ಹೆಲ್ತ್ ಸೆಂಟರ್, ನೇಚರ್ ಕ್ಯೂರ್ ಮತ್ತು ಆಯುರ್ವೇದ ಆಸ್ಪತ್ರೆ, ಹೂಡೆ), ತಮ್ಮ ಸಂಸ್ಥೆಯ ಮೂಲಕ ಸಮಾಜದ ಅನೇಕ ಜನರು ಉದ್ಯೋಗ ಪಡೆಯುವಲ್ಲಿ ಸಹಕರಿಸಿದ ಫಯಾಝ್ ಅಹ್ಮದ್ ತೋನ್ಸೆ (ಸಂಸ್ಥಾಪಕರು ಮೆರಿಟ್ಯೂಡ್ ಸ್ಕಿಲ್ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ) ಮತ್ತು ಸಮಾಜ ಸೇವಕರು ಹಾಗೂ ನಮ್ಮ ನಾಡ ಒಕ್ಕೂಟ ಹೆಬ್ರಿ ತಾಲೂಕಿನ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಅಜೆಕಾರು ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷರುಗಳಾದ ಅಬು ಮುಹಮ್ಮದ್ ಕುಂದಾಪುರ, ಶಾಕಿರ್ ಹಾವಂಜೆ ಮತ್ತು ಕಾಪು ತಾಲೂಕು ಅಧ್ಯಕ್ಷರಾದ ಅಶ್ರಫ್ ಪಡುಬಿದ್ರಿ ಅಭಿನಂದನಾ ಪತ್ರ ಓದಿದರು. ಹೆಬ್ರಿ ತಾಲೂಕಿನಾದ್ಯಂತ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿ ವೇತನ ಶಿಬಿರಗಳಲ್ಲಿ ಸ್ವಯಂ ಸೇವಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ 5 ವಿದ್ಯಾರ್ಥಿಗಳಾದ ಮುಹಮ್ಮದ್ ರಯಾನ್ ಬೆಳ್ವೆ, ಫಾರಿಶ್ ಬೆಳ್ವೆ, ಅರ್ಫಾತ್ ಬೆಳ್ವೆ, ಮುಹಮ್ಮದ್ ಸಹದ್ ಎಣ್ಣೆಹೊಳೆ, ಮುಹಮ್ಮದ್ ಸುಹೈಲ್ ಎಣ್ಣೆಹೊಳೆ ಅವರನ್ನು ಹೆಬ್ರಿ ತಾಲೂಕು ಘಟಕದ ವತಿಯಿಂದ 'ರಿಯಲ್ ಹೀರೋ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷರಾದ ಮುಶ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ. ಝಮೀರ್ ಅಹ್ಮದ್ ರಶಾದಿ ವರದಿ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಅಜ್ಮಲ್ ಶಿರೂರು ಲೆಕ್ಕ ಪತ್ರ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಫೀಕ್ ಮಾಸ್ಟರ್ (ಕಾರ್ಯದರ್ಶಿ ಎನ್ಎನ್ಒ ದ.ಕ. ಜಿಲ್ಲೆ) ತಮ್ಮ ಭಾಷಣದಲ್ಲಿ ನಾಯಕರ ಗುಣ ನಡತೆ ಹಾಗೂ ಹೊಣೆಗಾರಿಕೆಯ ಬಗ್ಗೆ ಬೆಳಕು ಚೆಲ್ಲಿದರು. ಇನ್ನೊರ್ವ ಮುಖ್ಯ ಅತಿಥಿ ಇನಾಯತುಲ್ಲಾ ಶಾಬಂದ್ರಿ ಭಟ್ಕಳ (ಜಿಲ್ಲಾಧ್ಯಕ್ಷರು ಎನ್ಎನ್ಒ ಉತ್ತರ ಕನ್ನಡ ಜಿಲ್ಲೆ) ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷರುಗಳು ತಾಲೂಕು ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಬೈಂದೂರು ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಎನ್ಎನ್ಒ ಇದರ ಸಂವಿಧಾನದ ಬಗ್ಗೆ ವಿವರಿಸಿದರು. ಹೆಬ್ರಿ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಅಜೆಕಾರು ಡಾಟಾ ಸಂಗ್ರಹಣೆಯ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿಯವರು ಎನ್ಎನ್ಒ ಇದರ ಭವಿಷ್ಯದ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲಿದರು.
ಒಕ್ಕೂಟದ ಧ್ಯೇಯೊದ್ದೇಶವನ್ನು ಮುಂದಿಟ್ಟು ಕಾರ್ಯಕ್ರಮ ರೂಪಿಸಿ ಅದನ್ನು ಕಾರ್ಯಗತಗೊಳಿಸುವುದಕ್ಕೆ ಉಪ ಸಮಿತಿಗಳನ್ನು ರಚಿಸಿ ಸಂಚಾಲಕರನ್ನು ನೇಮಿಸಲಾಯಿತು. ಒಕ್ಕೂಟಕ್ಕೆ ಜಿಲ್ಲಾ ಕಚೇರಿಯ ಅಗತ್ಯವಿರುವುದರಿಂದ ಕಚೇರಿಯ ವ್ಯವಸ್ಥೆ ಕೇಂದ್ರ ಸಮಿತಿ ವತಿಯಿಂದ ಮಾಡಿಕೂಡಲು ಆಗ್ರಹಿಸುವಂತೆ ನಿರ್ಣಯಿಸಲಾಯಿತು.
ನೂತನ ಜಿಲ್ಲಾ ಕೋಶಾಧಿಕಾರಿ ಮತ್ತು ಕಾಪು ಹಾಗೂ ಕಾರ್ಕಳ ತಾಲೂಕು ಘಟಕದಿಂದ ನೂತನ ಜಿಲ್ಲಾ ಉಪಾಧ್ಯಕ್ಷರನ್ನು ನೇಮಿಸುವಂತೆ ನಿರ್ಣಯಿಸಲಾ ಯಿತು. ನಿಷ್ಕ್ರಿಯ ಜಿಲ್ಲಾ ಸಮಿತಿ ಸದಸ್ಯರ ಬದಲು ಆಯಾಯಾ ತಾಲೂಕಿನಿಂದ ಹೊಸ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ಅಬ್ದುಲ್ ಸಮದ್ ಖಾನ್ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಫಾಝಿಲ್ ಅಹ್ಮದ್ ಆದಿಉಡುಪಿ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಹಾಫಿಝ್ ಫಝಲ್ ಕಂಡ್ಲೂರಿನ ದುವಾದೊಂದಿಗೆ ಸಭೆ ಮುಕ್ತಾಯ ಗೊಂಡಿತು.