ಪುತ್ತೂರು: ಶಾಫಿ ಸಅದಿಗೆ ಅಭಿನಂದನೆ
![ಪುತ್ತೂರು: ಶಾಫಿ ಸಅದಿಗೆ ಅಭಿನಂದನೆ ಪುತ್ತೂರು: ಶಾಫಿ ಸಅದಿಗೆ ಅಭಿನಂದನೆ](https://www.varthabharati.in/sites/default/files/images/articles/2021/11/18/314261-1637243007.jpg)
ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಅವರಿಗೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿ ಇದರ ಖಿದ್ಮತುಲ್ ಇಸ್ಲಾಂ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶಾಫಿ ಚೆನ್ನಾವರ, ಶರೀಫ್ ಕುಂಡಡ್ಕ, ಜಮಾಅತ್ ಸದಸ್ಯರಾದ ಮಹಮ್ಮದ್ ಮೇಜರ್, ಇಸಾಕ್ ಸಾಹೇಬ್ ಪಾಲ್ತಾಡು, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ರಹ್ಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.
Next Story