Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೇರಿಕೆಗಳನ್ನು ವಿರೋಧಿಸಲು...

ಹೇರಿಕೆಗಳನ್ನು ವಿರೋಧಿಸಲು ಒಗ್ಗೂಡಬೇಕಾಗಿದೆ

ಶ್ರೀನಿವಾಸ ಕಾರ್ಕಳಶ್ರೀನಿವಾಸ ಕಾರ್ಕಳ19 Nov 2021 11:33 PM IST
share

ಮಾನ್ಯರೇ,

ದೇಶವನ್ನು ಬ್ರಾಹ್ಮಣ್ಯ ನಿಧಾನವಾಗಿ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಮಾಂಸಾಹಾರದ ಬಗ್ಗೆ ಸಮಾಜ ಮತ್ತು ವಿಶೇಷವಾಗಿ ಚುನಾಯಿತ ಸರಕಾರಗಳ ಧೋರಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಶಾಲೆ-ಕಾಲೇಜು, ದೇವಾಲಯಗಳ ಇಂತಿಷ್ಟು ವ್ಯಾಪ್ತಿಯಲ್ಲಿ ಮಾಂಸಾಧಾರಿತ ಖಾದ್ಯಗಳ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಗುಜರಾತ್‌ನಲ್ಲಿ ಜಾರಿಯಾಗುತ್ತಿದೆ ಎಂದು ವರದಿಯಾಗಿದೆ.! ಈ ಆಹಾರ ರಾಜಕಾರಣವು ವಿಸ್ತೃತ ಸಾಂಸ್ಕೃತಿಕ ರಾಜಕಾರಣದ್ದೇ ಒಂದು ಬಹುದೊಡ್ಡ ಭಾಗ.

ಹಾಗೆ ನೋಡಿದರೆ, ಸಸ್ಯಾಹಾರವನ್ನು ಶ್ರೇಷ್ಠ, ಮಾಂಸಾಹಾರವನ್ನು ನಿಕೃಷ್ಠ ಎಂದು ಹೇಳುತ್ತ ಮಾಂಸಾಹಾರಿಗಳನ್ನು ಅವಮಾನಿಸುವ, ಅವರ ಹಕ್ಕು ನಿರಾಕರಿಸುವ ಆಹಾರ ರಾಜಕಾರಣ ಶುರುವಾಗಿ ಬಹಳ ಕಾಲ ಆಯಿತು. ಪ್ರತಿರೋಧದ ದನಿಗಳು ದುರ್ಬಲವಿದ್ದಾಗ ಈ ಆಹಾರ ರಾಜಕಾರಣವನ್ನು ಅವರು ಎಷ್ಟು ಸುಲಭದಲ್ಲಿ ಜಾರಿಗೊಳಿಸುತ್ತಾರೆ ಎಂಬುದಕ್ಕೆ ನಾನು ಕಂಡ ಒಂದು ಉದಾಹರಣೆ ಕೊಡುತ್ತೇನೆ.

ಮಂಗಳೂರಿನ ಒಂದು ಬೃಹತ್ ಕಾರ್ಖಾನೆ. ಅಲ್ಲಿ ಆಗ ಸುಮಾರು 800 ಮಂದಿ ಕಾರ್ಮಿಕರಿದ್ದರು. ಸುಮಾರು ಶೇ. 97ಕ್ಕೂ ಅಧಿಕ ಮಂದಿ ಮಾಂಸಾಹಾರಿಗಳು ಎಂದರೂ ತಪ್ಪಾಗದು.
 ಕಾರ್ಖಾನೆ ಅಂದ ಮೇಲೆ ಮೈಬಗ್ಗಿಸಿ ಬೆವರು ಹರಿಸುವ ತೀವ್ರ ಶ್ರಮದ ಕೆಲಸವಲ್ಲವೇ? ಹಾಗೆ ದುಡಿಯುವವರಿಗೆ ಶಕ್ತಿದಾಯಕ ಒಳ್ಳೆಯ ಆಹಾರ ಬೇಕು. ಆದ್ದರಿಂದಲೇ ಅಲ್ಲಿನ ಕ್ಯಾಂಟೀನ್‌ನಲ್ಲಿ (subsidized) ಮಧ್ಯಾಹ್ನದ ಊಟದೊಂದಿಗೆ ಮಾಂಸಾಹಾರ ಲಭ್ಯವಿತ್ತು. ಸೋಮವಾರ ಮಟನ್ (m), ಮಂಗಳವಾರ ಚಿಕನ್ (c), ಬುಧವಾರ ಫಿಶ್ (f). ಮತ್ತೆ ಇದೇ ಕ್ರಮ ಪುನರಾವರ್ತನೆ. ಈ ಕ್ರಮ ಸುಮಾರು 25 ವರ್ಷ ಚಾಲ್ತಿಯಲ್ಲಿತ್ತು.

ಆಮ್ಲೆಟ್ ಅಂತೂ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಲಭ್ಯವಿತ್ತು. ನಿಧಾನವಾಗಿ ಒಂದೆಡೆ ಕಾರ್ಮಿಕ ಸಂಘಟನೆ ದುರ್ಬಲಗೊಂಡಿತು. ಇನ್ನೊಂದೆಡೆ ಬ್ರಾಹ್ಮಣ್ಯ ಮೇಲುಗೈ ಸಾಧಿಸಲಾರಂಭಿಸಿತು. ಅಧಿಕಾರ ಸ್ಥಾನಗಳಲ್ಲಿ ಬ್ರಾಹ್ಮಣ್ಯ ಮನಸುಗಳು ವಿರಾಜಮಾನವಾದವು. ಅದರ ಮೊದಲ ಪರಿಣಾಮ ಉಂಟಾದುದು ಕ್ಯಾಂಟೀನ್ ಮೇಲೆ. ಅಲ್ಲಿ ಮಾಂಸಾಹಾರ ಲಭ್ಯವಿಲ್ಲದಂತೆ ಮಾಡಲಾಯಿತು. ಎಲ್ಲಿಯವರೆಗೆ ಎಂದರೆ ಕೊನೆಗೆ ಆಮ್ಲೆಟ್ ಕೂಡಾ ಇಲ್ಲದಂತೆ ಮಾಡಿದರಂತೆ (ಈ ಕೊನೆಯ ಹಂತ ನಾನು ಅಲ್ಲಿಂದ ನಿರ್ಗಮಿಸಿದ ಮೇಲೆ ನಡೆದುದರಿಂದ ಆ ಬಗ್ಗೆ ಗೆಳೆಯರಿಂದ ಕೇಳಿಯಷ್ಟೇ ಗೊತ್ತು). ಶೇ. 97 ಮಂದಿಯ ಮೇಲೆ ತಮ್ಮ ಸಿದ್ಧಾಂತ ಹೇರುತ್ತಾ ಈ ಶೇ. 3 ಮಂದಿ ಹೀಗೆ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ ಗಮನಿಸಿ. ಯಾರನ್ನು ಮದುವೆ ಯಾಗಬೇಕು, ಯಾವ ಉಡುಗೆ ಧರಿಸಬೇಕು ಎಂಬ ಆಯ್ಕೆಗಳನ್ನು ಬಿಡಿ, ಕೊನೆಗೆ ತಮಗಿಷ್ಟವಾದ ಆಹಾರವನ್ನೂ ಸೇವಿಸದಂತೆ ಮಾಡುತ್ತಾರೆ!. ಅಗ್ರಹಾರದ ಗೇಟ್ ಕೀಪರ್‌ಗಳಿಗೆ ಇವೆಲ್ಲ ಅರ್ಥ ಆಗುವುದು ಯಾವಾಗ? ಶೇ. 3 ಮಂದಿ ನಡೆಸುವ ಹೇರಿಕೆಗಳನ್ನು ವಿರೋಧಿಸಲು ಶೇ. 97 ಮಂದಿ ಒಗ್ಗೂಡುವುದು ಯಾವಾಗ?!

share
ಶ್ರೀನಿವಾಸ ಕಾರ್ಕಳ
ಶ್ರೀನಿವಾಸ ಕಾರ್ಕಳ
Next Story
X