ಇಂದ್ರಾಳಿ ರೈಲು ನಿಲ್ದಾಣ: ಅಪ್ರಾಪ್ತ ಬಾಲಕಿಯ ರಕ್ಷಣೆ
![ಇಂದ್ರಾಳಿ ರೈಲು ನಿಲ್ದಾಣ: ಅಪ್ರಾಪ್ತ ಬಾಲಕಿಯ ರಕ್ಷಣೆ ಇಂದ್ರಾಳಿ ರೈಲು ನಿಲ್ದಾಣ: ಅಪ್ರಾಪ್ತ ಬಾಲಕಿಯ ರಕ್ಷಣೆ](https://www.varthabharati.in/sites/default/files/images/articles/2021/11/20/314543-1637418416.jpg)
ಉಡುಪಿ, ನ. 20: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಗುರುವಾರ ಅಸಹಾಯಕ ಸ್ಥಿತಿಯಲ್ಲಿದ್ದ ಮಧ್ಯಪ್ರದೇಶ ಮೂಲದ ಅಪ್ರಾಪ್ತ ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದೆ.
ಮಕ್ಕಳ ಸಹಾಯವಾಣಿಯಿಂದ ಬಂದ ದೂರಿನಂತೆ ಸಮಾಜ ಕಾರ್ಯಾಕರ್ತ ರಾದ ಯೋಗೀಶ್, ಸುರಕ್ಷಾ, ಮಕ್ಕಳ ಸಹಾಯ ವಾಣಿಯ ಸಿಬ್ಬಂದಿ ಪ್ರಮೋದ್, ನಯನ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಬಾಲಕಿಯನ್ನು ಸಮಾಲೋಚನೆಗೆ ಒಳಪಡಿಸಿದರು.
ಹೆಬ್ರಿಯಲ್ಲಿರುವ ಗೇರುಬೀಜ ಕಾರ್ಖಾನೆಯಲ್ಲಿ ಕಷ್ಟದ ಕೆಲದಿಂದ ಬೇಸತ್ತು, ಕಾರ್ಖಾನೆಯ ಮಾಲೀಕರಿಗೆ ಹೇಳದೆ ತನ್ನ ಸ್ವಂತ ಊರಾದ ಮಧ್ಯಪ್ರದೇಶಕ್ಕೆ ಹೋಗಲು ನಿರ್ಧರಿಸಿ ಇಂದ್ರಾಳಿ ರೈಲು ನಿಲ್ದಾಣಕ್ಕೆ ಬಂದಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ನಂತರ ಬಾಲಕಿಯನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮೌಖಿಕ ಆದೇಶದಂತೆ ನಿಟ್ಟೂರು ಬಾಲಕಿಯರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿಯನ್ನು ಕಲ್ಪಿಸಲಾಯಿತು.
Next Story