ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಅಂಡಾರು ದೇವಿಪ್ರಸಾದ್ ಶೆಟ್ಟಿ

ಅಂಡಾರು ದೇವಿಪ್ರಸಾದ್ ಶೆಟ್ಟಿ
ಉಡುಪಿ, ನ.20: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2021-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಡುಪಿ ಸಂಘದ ಕಚೇರಿಯಲ್ಲಿ ಇಂದು ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಟರಾಜ ಪ್ರಭು ಪಡುಬಿದ್ರಿ, ಕಾರ್ಯ ದರ್ಶಿಯಾಗಿ ಡಾ.ವಿಜಯೇಂದ್ರ ವಸಂತ್, ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮೀ ಕಾಂತ್ ಬೆಸ್ಕೂರ್, ರಂಜಿತ್ ಪ್ರಭು, ಕೋಶಧಿಕಾರಿಯಾಗಿ ಅಮ್ಮುಂಜೆ ಪ್ರಭಾಕರ ನಾಯಕ್, ನಿರ್ದೇಶಕರುಗಳಾಗಿ ಸುಭಾಷ್ ಕಾಮತ್, ಜಯಕರ್ ಶೆಟ್ಟಿ ಇಂದ್ರಾಳಿ, ಮುರಳೀಧರ ಬಾಳಿಗಾ, ವಿ.ಜಿ.ಶೆಟ್ಟಿ, ಚಿತ್ತರಂಜನ್ ಭಟ್, ವಾಲ್ಟರ್ ಸಲ್ದಾನ, ಸುಭಾಷ್ಶೀತ ಹಾಗೂ ಚಂದ್ರಕಾಂತ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





