ಕೋಟೇಶ್ವರ; ಜಾತ್ರೆಯಲ್ಲಿ ಹೊಡೆದಾಟ: ಮೂವರ ಬಂಧನ
![ಕೋಟೇಶ್ವರ; ಜಾತ್ರೆಯಲ್ಲಿ ಹೊಡೆದಾಟ: ಮೂವರ ಬಂಧನ ಕೋಟೇಶ್ವರ; ಜಾತ್ರೆಯಲ್ಲಿ ಹೊಡೆದಾಟ: ಮೂವರ ಬಂಧನ](https://www.varthabharati.in/sites/default/files/images/articles/2021/11/20/314556-1637420557.jpeg)
ಕುಂದಾಪುರ, ನ.20: ಕೋಟೇಶ್ವರ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಜಾತ್ರೆಯಲ್ಲಿ ನಡೆದುಕೊಂಡು ಹೋಗುವಾಗ ಮೈ ಕೈ ತಾಗಿದ ವಿಚಾರದಲ್ಲಿ ಇತ್ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶುಕ್ರವಾರ ರಾತ್ರಿ 10ಗಂಟೆಯ ಸುಮಾರಿಗೆ ಕೋಟೇಶ್ವರ ರಥಬೀದಿಯಲ್ಲಿರುವ ನಂಬಿಯಾರ್ ಜಂಕ್ಷನ್ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಕೋಟೆಯ ಆಶೀಶ್ ಶ್ರೀಯಾನ್(25), ಹಂದಾಡಿಯ ಪ್ರೀತಮ್(26), ಕುಂಬ್ರಿಯ ಸಂದೀಪ (25) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಇವರು ಜಾತ್ರೆಯಲ್ಲಿ ಮೈ ಕೈ ತಾಗಿದ ವಿಚಾರದಲ್ಲಿ ಪರಸ್ಪರ ಗುರಾಯಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story