ಕೊಳ್ಳೇಗಾಲ: ದೇವಾಸ್ಥಾನ ಪೂಜೆ ವಿಚಾರಕ್ಕೆ ಗುಂಪುಗಳ ನಡುವೆ ಗಲಾಟೆ; ಪ್ರಕರಣ ದಾಖಲು
ಕೊಳ್ಳೇಗಾಲ. ನ.20.ತಾಲ್ಲೂಕಿನ ಸಿದ್ದೇಶ್ವರ ಬೆಟ್ಟದ ದೇವಾಲಯದ ಪೂಜೆ ಸಲ್ಲಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಹೊಂಡರಬಾಳು ಗ್ರಾಮದ ಗುರುಸ್ವಾಮಿ, ಸಿದ್ದಲಿಂಗಸ್ವಾಮಿ, ವಿಕಾಸ್, ಜಯಮ್ಮ ಹಾಗೂ ಮತ್ತೊಂದು ಗುಂಪಿನ ಶಿವಕುಮಾರ್ ಅಲಿಯಾಸ್ ಅಪ್ಪು ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಾಳಗಿದ್ದಾರೆ.
ನಾಡ ಗೌಡರಾದ ನಂಜುಂಡಸ್ವಾಮಿ ಎಂಬುವರ ಗುಂಪು ಏಕಾಏಕಿ ದೇವಾಲಯದ ಬೀಗ ಕೊಡಿ ಎಂದು ಆರ್ಚಕಾರದ ಗುರುಸ್ವಾಮಿ, ಸಿದ್ದಲಿಂಗಸ್ವಾಮಿ, ವಿಕಾಸ್, ಜಯಮ್ಮ ಎಂಬುವರಿಗೆ ದೋಣೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಕುಟುಂಬದವರಾದ ಶಿವಕುಮಾರ್ ಎಂಬುವರು ಆರೋಪಿಸಿದ್ದಾರೆ.
ಮತ್ತೊಂದು ಗುಂಪಿನ ಉಡುಪಿ ಕುಮಾರ್ ಈ ಬಗ್ಗೆ ಮಾತನಾಡಿ, ದೇವಸ್ಥಾನದ ಬೀಗ ಕೇಳಿದ ವಿಚಾರಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದು ಶಿವಕುಮಾರ್(ಅಪ್ಪು) ಎಂಬುವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿದ್ದಾರೆ.
ಈ ಪ್ರಕರಣದ ವಿಚಾರ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.