ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
![ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ](https://www.varthabharati.in/sites/default/files/images/articles/2021/11/22/314764-1637582453.jpg)
ಉಡುಪಿ, ನ.22: ದುಬೈಯಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಹಣ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರುಣಾಕರ ಎಂಬಾತ ಉದ್ಯಾವರ ಜನತಾ ಕಾಲನಿಯ ಸುನೀಲ್ (27) ಮತ್ತು ಅವರ ಸ್ನೇಹಿತ ಅವಿನಾಶ್ ಎಂಬವರಿಗೆ ವೀಸಾ ಮಾಡಿಸಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದನು. ಅ.18ರಂದು ಆತ ಉಳಿದುಕೊಂಡಿರುವ ಉಡುಪಿ ನಗರದ ಲಾಡ್ಜ್ನ ರೂಮಿಗೆ ಇವರಿಬ್ಬರು ಕರೆಸಿದ್ದು, ಅಲ್ಲಿ ಇವರಿಬ್ಬರಿಂದ 1.05ಲಕ್ಷ ರೂ. ಪಡೆದುಕೊಂಡಿದ್ದನು. ಆದರೆ ಈವರೆಗೆ ಯಾವುದೇ ಕೆಲಸವನ್ನು ಮಾಡಿಸಿ ಕೊಡದೆ, ಹಣವನ್ನೂ ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story