Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಮೂರೂ ಬಿಟ್ಟವನು ದೇಶಕ್ಕೆ ದೊಡ್ಡವನು....!

ಮೂರೂ ಬಿಟ್ಟವನು ದೇಶಕ್ಕೆ ದೊಡ್ಡವನು....!

ಚೇಳಯ್ಯಚೇಳಯ್ಯ28 Nov 2021 9:55 AM IST
share
ಮೂರೂ ಬಿಟ್ಟವನು ದೇಶಕ್ಕೆ ದೊಡ್ಡವನು....!

ಚೌಕೀದಾರರು ಮೂರೂ ಕೃಷಿ ಕಾಯ್ದೆಗಳನ್ನು ಹಿಂದೆಗೆದಿರುವುದರಿಂದ ಚೌಕೀದಾರರ ಪರಮ ಭಕ್ತರಾಗಿರುವ ಬಸ್ಯನ ಮೇಲೆ ಅದ್ಯಾವ ಪರಿಣಾಮ ಬೀರಿರಬಹುದು ಎಂಬ ಕುತೂಹಲದಿಂದ ಪತ್ರಕರ್ತ ಎಂಜಲು ಕಾಸಿ ಹೆಗಲಿಗೆ ಜೋಳಿಗೆ ಹಾಕಿ ಭೇಟಿಗೆ ಹೊರಟ. ಬಸ್ಯ ಮನೆಯ ಹೊರಗೆ ಆಕಾಶ ನೋಡುತ್ತಾ ಕೂತಿದ್ದ.

‘‘ಬಸ್ಯ ಅವರೇ, ಚೌಕೀದಾರರು ಮೂರೂ ವಾಪಸ್ ತೆಗೆದು ಕೊಂಡರಂತಲ್ಲ...’’ ಕಾಸಿ ಕೇಳಿದ.

‘‘ಅದು ಚೌಕೀದಾರರ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ....ವಾಟ್ಸಪ್‌ನಲ್ಲಿ ಎಲ್ರೂ ಅವರ ನಿರ್ಧಾರವನ್ನು ಹೊಗಳುತ್ತಿದ್ದಾರೆ....ಗೊತ್ತಿಲ್ವಾ ನಿಮಗೆ?’’ ಗದ್ಗದ ಕಂಠದಲ್ಲಿ ಬಸ್ಯ ಹೇಳಿದ.

‘‘ಅದನ್ನು ಸಂತೋಷದಿಂದ ಹೇಳಬಾರದೆ...ಗದ್ಗದ ಕಂಠದಲ್ಲಿ ಯಾಕೆ?’’

‘‘ಚೌಕೀದಾರರು ರೈತರಿಗಾಗಿ ಮಾಡಿದ ತ್ಯಾಗಬಲಿದಾನ ಇದು. ತನ್ನ ನಿರ್ಧಾರಕ್ಕಿಂತ ರೈತರು ಮುಖ್ಯ ಎನ್ನುವುದನ್ನು ಇದರಿಂದ ತೋರಿಸಿಕೊಟ್ಟಿದ್ದಾರೆ. ಅದಕ್ಕೇ...ಗಂಟಲು ಕಟ್ಟಿದೆ’’ ಬಸ್ಯ ಕೆಮ್ಮಿ ಗಂಟಲು ಸರಿ ಪಡಿಸಿಕೊಂಡ.

‘‘ರೈತರು ಮುಖ್ಯ ಆಗಿದ್ದರೆ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು?’’ ಕಾಸಿ ಕೇಳಿದ.

‘‘ದೇಶದ ಹಿತಾಸಕ್ತಿಗಾಗಿ ತೆಗೆದುಕೊಂಡರು. ಆದರೆ ರೈತರ ಹಿತಾಸಕ್ತಿಗಾಗಿ ಅದನ್ನು ತ್ಯಾಗ ಮಾಡಿದರು...’’

‘‘ದೇಶದ ಹಿತಾಸಕ್ತಿ ಮತ್ತು ರೈತರ ಹಿತಾಸಕ್ತಿ ಒಂದೇ ಅಲ್ಲವೆ...ದೇಶ ಬೇರೆ, ರೈತರು ಬೇರೆಯೇ? ಹೋಗಲಿ ಇಷ್ಟು ಸಮಯ ತೆಗೆದುಕೊಂಡದ್ದು ಯಾಕೆ?’’ ಕಾಸಿ ಪ್ರಶ್ನಿಸಿದ. ‘‘ಅವರು ನಿಜವಾದ ರೈತರೋ ಅಲ್ಲವೋ ಎನ್ನುವುದು ಚೌಕೀದಾರರಿಗೆ ಮನವರಿಕೆಯಾಗಬೇಡವೇ? ಅದಕ್ಕಾಗಿ ಅವರು ಘೋರ ತಪಸ್ಸು ಮಾಡಿದರು. ತಪಸ್ಸಿನಲ್ಲಿ ಅವರಿಗೆ ಬೀದಿಯಲ್ಲಿರುವವರು ರೈತರು ಎನ್ನುವುದು ಜ್ಞಾನೋದಯವಾದ ಬಳಿಕ ಮೂರು ಕಾಯ್ದೆಯನ್ನು ಹಿಂದೆಗೆದುಕೊಂಡರು....ಆ ಮೂಲಕ ಅವರು ದೊಡ್ಡವರು ಎನಿಸಿಕೊಂಡರು...’’

‘‘ದೊಡ್ಡವರು ಎನ್ನಿಸಿಕೊಳ್ಳುವುದು ಹೇಗೆ?’’ ಕಾಸಿಗೆ ಅರ್ಥವಾಗಲಿಲ್ಲ.

‘‘ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಗಾದೆಯಿದೆಯಲ್ಲ? ಚೌಕೀದಾರರು ಅದಕ್ಕಾಗಿ ಮೂರು ಕಾಯ್ದೆಗಳನ್ನು ಕೈ ಬಿಟ್ಟು    ಧರೆಗೆ ದೊಡ್ಡವರಾದರು...’’

‘‘ಮೂರೂ ಬಿಟ್ಟವರು ಎಂದರೆ...ಮಾನ, ಮರ್ಯಾದೆ, ನಾಚಿಕೆ ಅಲ್ಲವೇ?’’

‘‘ಅದು ಬೇರೆ ಇದು ಬೇರೆ. ಇಲ್ಲಿ ಮೂರು ಕಾಯ್ದೆಯನ್ನು ಕೈ ಬಿಡದೇ ಇದ್ದರೆ ನಾಚಿಕೆ, ಮಾನ, ಮರ್ಯಾದೆ ಉಳಿಯುವುದಿಲ್ಲ ಎಂದು ಗೊತ್ತಾಗಿ ಅವರು ಬಿಟ್ಟರು. ಆದುದರಿಂದ ಅವರು ದೊಡ್ಡವರಾದರು...’’ ಬಸ್ಯ ಅರ್ಥ ಸಮೇತ ವಿವರಿಸಿದ.

‘‘ಅವರು ನಾಚಿಕೆ, ಮಾನ, ಮರ್ಯಾದೆಯನ್ನು ದೇಶಕ್ಕಾಗಿ ಅಂಬಾನಿ ಮತ್ತು ಅದಾನಿಯವರಿಗೆ ಯಾವತ್ತೋ ಮಾರಿದ್ದಾರೆ ಎಂದು ಹೇಳುತ್ತಾರಲ್ಲ....’’ ಕಾಸಿ ಕೆಣಕಿದ.

‘‘ನೋಡಿ, ಚೌಕೀದಾರರು ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಬಂದವರು. ಸ್ವತಃ ಧರ್ಮ ಪತ್ನಿಯನ್ನು ಕೂಡ. ಒಂದು ವೇಳೆ ಧರ್ಮ ಪತ್ನಿಯವರು ಇದ್ದಿದ್ದರೆ....’’ ಎಂದು ಬಸ್ಯ ಮಾತು ನಿಲ್ಲಿಸಿದ.

‘‘ಇದ್ದಿದ್ದರೆ...’’ ಕಾಸಿ ಕುತೂಹಲದಿಂದ ಕೇಳಿದ.

‘‘ಅದು ಮುಗಿದ ವಿಷಯ ಬಿಡಿ. ದೇಶ ಉಳಿಸುವುದಕ್ಕಾಗಿ ಎಲ್ಲವನ್ನೂ ಮಾರುತ್ತಿದ್ದಾರೆ. ತಮಗೆ ಸಿಕ್ಕಿದ ಪ್ರಶಸ್ತಿ, ಶಾಲು, ವಿದೇಶದಲ್ಲಿ ಸಿಕ್ಕಿದ ಉಡುಗೊರೆ ಎಲ್ಲವನ್ನು ಮಾರಿದ್ದಾರೆ. ಯಾವುದನ್ನೂ ಇಟ್ಟುಕೊಂಡಿಲ್ಲ. ಹೀಗಿರುವಾಗ ಒಳ್ಳೆಯ ಬೆಲೆ ಸಿಕ್ಕಿದರೆ ದೇಶಕ್ಕಾಗಿ ಮಾನ, ಮರ್ಯಾದೆ, ನಾಚಿಕೆಯನ್ನು ಮಾರಿದರೆ ಏನಾಯಿತು? ದೇಶಕ್ಕಾಗಿ ವಿರೋಧ ಪಕ್ಷದವರು ತಮ್ಮ ಮಾನ, ಮರ್ಯಾದೆಯನ್ನು ಅದಾನಿಗೆ, ಅಂಬಾನಿಗೆ ಮಾರಲು ಸಿದ್ಧರಿದ್ದಾರೆಯೇ? ಹೀಗಿರುವಾಗ ಚೌಕೀದಾರರು ದೇಶಕ್ಕಾಗಿ ಸತ್ಯ ಹರಿಶ್ಚಂದ್ರರಂತೆ ಎಲ್ಲವನ್ನು ಕೊಟ್ಟವರು....ರೈತರಿಗಾಗಿಯೂ ತಮ್ಮ ಮೂರನ್ನು ಬಿಟ್ಟು ದೇಶಕ್ಕೆ ಮಾದರಿಯಾಗಿದ್ದಾರೆ....’’

‘‘ಅವರು ದೇಶಕ್ಕಾಗಿ ಮೂರನ್ನು ಬಿಟ್ಟದ್ದಲ್ಲ, ಅದಾನಿ, ಅಂಬಾನಿಗಾಗಿ ಎನ್ನುವ ಆರೋಪವಿದೆಯಲ್ಲ....’’ ಕಾಸಿ ಪ್ರಶ್ನಿಸಿದ.

‘‘ ಅದಾನಿ, ಅಂಬಾನಿಯೇ ನಮ್ಮ ದೇಶ. ದೇಶವೇ ಅದಾನಿ, ಅಂಬಾನಿ. ಆದುದರಿಂದ ದೇಶಕ್ಕಾಗಿ ಬಿಟ್ಟರೂ, ಅವರಿಗಾಗಿ ಬಿಟ್ಟರೂ ಪರಿಣಾಮ ಒಂದೇ. ಮೂರು ಬಿಟ್ಟದ್ದರಿಂದ ದೇಶದ ಗೌರವ ಹೆಚ್ಚಿತು....’’

‘‘ಈಗ ಯಾಕೆ ನೀವು ಬೇಜಾರಿನಲ್ಲಿ ಕೂತಿರುವುದು?’’

‘‘ಅವರು ಬಿಟ್ಟದ್ದೇನೋ ಸರಿ. ಅವರ ಜೊತೆಗೆ ನಮ್ಮಂತಹ ಭಕ್ತರೂ ಮೂರೂ ಬಿಟ್ಟು ಓಡಾಡಬೇಕಾಯಿತಲ್ಲ ಎನ್ನುವುದೇ ದುಃಖ’’ ಎಂದವನೇ ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡ.

share
ಚೇಳಯ್ಯ
ಚೇಳಯ್ಯ
Next Story
X