ಮಂಗಳೂರು; ಯುವಕನ ಕೊಲೆಯತ್ನ ಪ್ರಕರಣ: ಎಂಟು ಮಂದಿ ವಶಕ್ಕೆ
![ಮಂಗಳೂರು; ಯುವಕನ ಕೊಲೆಯತ್ನ ಪ್ರಕರಣ: ಎಂಟು ಮಂದಿ ವಶಕ್ಕೆ ಮಂಗಳೂರು; ಯುವಕನ ಕೊಲೆಯತ್ನ ಪ್ರಕರಣ: ಎಂಟು ಮಂದಿ ವಶಕ್ಕೆ](https://www.varthabharati.in/sites/default/files/images/articles/2021/11/30/315845-1638293398.jpeg)
ಮಂಗಳೂರು, ನ.30: ಹಳೆಯ ದ್ವೇಷದಿಂದ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಉರ್ವ ಪೊಲೀಸರು ಅಳಿಕೆ ಗ್ಯಾಂಗ್ನ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಳಿಕೆ ಗ್ಯಾಂಗ್ನ ಯುವಕರ ಗುಂಪೊಂದು ರವಿವಾರ ರಾತ್ರಿ ಶ್ರವಣ್ ಎಂಬಾತನ ಕೊಲೆಗೆ ಯತ್ನಿಸಿತ್ತು. 2020ರಲ್ಲಿ ನಡೆದ ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದ್ರಜಿತ್ ಕೊಲೆ ಪ್ರಕರಣದ ಆರೋಪಿಗಳಿಬ್ಬರ ಸಂಬಂಧಿಯ ಗೆಳೆಯನಾದ ಶ್ರವಣ್ನನ್ನು ಅಳಿಕೆ ಗ್ಯಾಂಗ್ನ ಯುವಕರು ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story