ಬಂಟ್ವಾಳದಲ್ಲಿ ನಾಪತ್ತೆ ದೂರು ದಾಖಲಾದ ಯುವಕನ ವಿರುದ್ಧ ಕಾಸರಗೋಡಿನಲ್ಲಿ ವಂಚನೆ ಪ್ರಕರಣ ದಾಖಲು
![ಬಂಟ್ವಾಳದಲ್ಲಿ ನಾಪತ್ತೆ ದೂರು ದಾಖಲಾದ ಯುವಕನ ವಿರುದ್ಧ ಕಾಸರಗೋಡಿನಲ್ಲಿ ವಂಚನೆ ಪ್ರಕರಣ ದಾಖಲು ಬಂಟ್ವಾಳದಲ್ಲಿ ನಾಪತ್ತೆ ದೂರು ದಾಖಲಾದ ಯುವಕನ ವಿರುದ್ಧ ಕಾಸರಗೋಡಿನಲ್ಲಿ ವಂಚನೆ ಪ್ರಕರಣ ದಾಖಲು](https://www.varthabharati.in/sites/default/files/images/articles/2021/12/1/315929-1638347777.jpeg)
ಮಂಗಳೂರು: ಕ್ರಿಕೆಟ್ ಆಡಲು ಹೋದ ಯುವಕ ವಾಪಸ್ ಬರದೆ ನಾಪತ್ತೆಯಾಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ ಅದೇ ಯುವಕನ ವಿರುದ್ಧ ಕಾಸರಗೋಡಿನಲ್ಲಿ ವಜ್ರ, ಚಿನ್ನಾಭರಣ ದೋಚಿ ಪರಾರಿಯಾದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.
ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ನಾಪತ್ತೆಯಾದ ಯುವಕ.
ನ.28ರಂದು ಬೆಳಗ್ಗೆ 7:30ಕ್ಕೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಸರಗೋಡು ಟೌನ್ ಪೊಲೀಸ್ ಠಾಣೆಯಲ್ಲಿ ಮುಹಮ್ಮದ್ ಫಾರೂಕ್ ವಿರುದ್ಧ ಸುಲ್ತಾನ್ ಜುವೆಲ್ಲರಿಗೆ ಕೋಟ್ಯಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ವಂಚನೆ ನಡೆದಿರುವುದಾಗಿ ದೂರಲಾಗಿದೆ.
ಸುಮಾರು ಒಂದೂವರೆ ವರ್ಷದಲ್ಲಿ ನೌಕರನೋರ್ವ ಜುವೆಲ್ಲರಿಯಲ್ಲಿದ್ದ ಸುಮಾರು 2.5 ಕೋಟಿ ರೂ. ಮೌಲ್ಯದ ವಜ್ರ, ಚಿನ್ನಾಭರಣ ದೋಚಿದ್ದಾನೆ. ಜುವೆಲ್ಲರಿ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ದೂರಿದ್ದಾರೆ.